ನಿಜ ಜೀವನದಲ್ಲಿ ಈ ಖ್ಯಾತ ನಟನನ್ನೇ ಪ್ರೀತಿಸಿ ವರಿಸಿದ್ದು ಅಮೃತಧಾರೆ ಧಾರಾವಾಹಿಯ `ಭೂಮಿಕಾ` ! ಮೇಡ್ ಫಾರ್ ಈಚ್ ಅದರ್ ಇವರಿಬ್ಬರು !

Sat, 16 Mar 2024-10:41 am,

ಛಾಯಾ ಸಿಂಗ್ ಉತ್ತರ ಪ್ರದೇಶ ಮೂಲದ ಗೋಪಾಲ್ ಸಿಂಗ್, ಚಮನ್ ಲತಾ ದಂಪತಿ ಪುತ್ರಿ. ಇವರು ಬೆಳೆದಿದ್ದು, ಕಲಿತಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಹಾಗಾಗಿ ಇವರು ಅಪ್ಪಟ ಕನ್ನಡತಿ. 

ಕನ್ನಡ ಚಿತ್ರರಂಗದ ಮೂಲಕ ಚಿತ್ರ ಬದುಕಿಗೆ ಪ್ರವೇಶಿಸಿದ ಛಾಯಾ, ಕನ್ನಡ , ತಮಿಳು, ಮಲಯಾಳಂ, ಬಂಗಾಳಿ ಮತ್ತು ಭೋಜ್ಪುರಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇವರಿಗೆ ಹೆಸರು ತಂದುಕೊಟ್ಟಿದ್ದು ತಮಿಳು ಮತ್ತು ಕನ್ನಡ  ಚಿತ್ರರಂಗ.    

ಮುನ್ನುಡಿ, ಹಸೀನಾ, ತುಂಟಾಟ, ಚಿಟ್ಟೆ, ರೌಡಿ ಅಳಿಯಾ ಸಿನಿಮಾದಲ್ಲಿ ನಟಿಸಿದ್ದಾರೆ.  ಸಿನಿಮಾ ಮಾತ್ರವಲ್ಲದೆ ಧಾರಾವಾಹಿಗಳಲ್ಲಿಯೂ ಮಿಂಚಿದ್ದಾರೆ. ಇದರ ಜೊತೆಗೆ ರಿಯಾಲಿಟಿ ಶೋ ನಲ್ಲಿ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಸದ್ಯ ಅಮೃತಧಾರೆ ಧಾರಾವಾಹಿಯ ಭೂಮಿಕಾ ಪಾತ್ರದಲ್ಲಿ ಮನೆ ಮನಗಳನ್ನು ಗೆದ್ದಿದ್ದಾರೆ. ಸದ್ಯಕ್ಕೆ ಭೂಮಿಕಾ ಎಂದೇ ಹೆಸರಾಗಿದ್ದಾರೆ. 

ಛಾಯಾ ಅವರ ನಿಜ ಜೀವನ ಧಾರಾವಾಹಿಯಂತಲ್ಲ. ನಿಜ ಜೀವನದಲ್ಲಿ ಅವರದ್ದು ಪ್ರೇಮ ವಿವಾಹ. ತಾನು ಪ್ರೀತಿಸಿದ ಹುಡುಗನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.   

ಛಾಯಾ ಪತಿ ತಮಿಳು ಸಿನಿ ರಂಗದಲ್ಲಿ ಹೆಸರು ಮಾಡಿರುವ ನಟ ಕೃಷ್ಣ. ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದ ವೇಳೆ ಇವರಿಬ್ಬರ ನಡುವೇ ಸ್ನೇಹ ಬೆಳೆದಿದೆ. ನಂತರ್ ಸ್ನೇಹ ಪ್ರೀತಿಗೆ ತಿರುಗಿದ್ದು ಈಗ ಇವರಿಬ್ಬರು ಸತಿ ಪತಿ. 

೨೦೧೨ ರಲ್ಲಿ ಮನೆ ಮಂದಿಯ ಆಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರು ಜೀವನದ ಏಳು ಬೀಳುಗಳಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link