ನವರಾತ್ರಿ ದಿನ ಈ ದೇಗುದಲ್ಲಿ ಭಕ್ತಿಯಿಂದ ಏನೇ ಬೇಡಿದರೂ ಈಡೇರುತ್ತೆ: ಅಗ್ನಿಸಾಕ್ಷಿಯ ಈ ನಟಿ ಹುಟ್ಟಿದ್ದು ಇಲ್ಲಿನ ಹರಕೆಯಿಂದಲೇ!

Wed, 29 Mar 2023-5:52 pm,

ಚೈತ್ರ ನವರಾತ್ರಿಯ ಸಂದರ್ಭದಲ್ಲಿ, ಕತ್ರಾ ಸೇರಿದಂತೆ ವೈಷ್ಣೋದೇವಿ ಮಾತಾ ದೇವಾಲಯದಲ್ಲಿ ಅದ್ಭುತ ಮತ್ತು ದೈವಿಕ ಅಲಂಕಾರಗಳನ್ನು ಮಾಡಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಮಾತಾ ರಾಣಿಯ ಆಸ್ಥಾನದ ಅಲಂಕಾರ ವಿಭಿನ್ನ, ಭವ್ಯ ಹಾಗೂ ವಿಶಿಷ್ಟವಾಗಿದೆ. ಇನ್ನು ಇಲ್ಲಿನ ಕಟ್ಟಡವನ್ನು ಎರಡು ಟ್ರಕ್ ಹಣ್ಣುಗಳು ಮತ್ತು 40 ಟ್ರಕ್ ಹೂವುಗಳಿಂದ ಅಲಂಕರಿಸಲಾಗಿದೆ.

ಒಂದು ಅಂಕಿ ಅಂಶದ ಪ್ರಕಾರ, ನವರಾತ್ರಿಯಲ್ಲಿಯೂ ಸಹ ಎರಡೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ಮಾತೆ ವೈಷ್ಣೋ ದೇವಿಯ ದರ್ಶನ ಪಡೆದಿದ್ದಾರೆ.

ನಿರ್ಮಿತ ಮತ್ತು ನೈಸರ್ಗಿಕ ಗುಹೆಯ ಹೊರಗೆ ಬಹುಕಾಂತೀಯ ಅಲಂಕಾರಗಳು ಕಂಡುಬರುತ್ತಿವೆ. ವಿಶೇಷವಾದ ಚೆಂಡುಹೂವು, ಗುಲಾಬಿ, ಮಲ್ಲಿಗೆ, ಸುಗಂಧರಾಜ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಎಲ್ಲೆಡೆ ಘಮಿಸುತ್ತಿದೆ

ಕಳೆದ ವರ್ಷ ಚೈತ್ರ ನವರಾತ್ರಿಗೆ ಎರಡೂವರೆ ಲಕ್ಷ ಭಕ್ತರು ಭೇಟಿ ನೀಡಿದ್ದರು. ಈ ಬಾರಿ ಈ ಅಂಕಿ ಅಂಶ ಹೊಸ ದಾಖಲೆ ಸೃಷ್ಟಿಸಲಿದೆ.

ಈ ಬಾರಿ 2.75 ಲಕ್ಷಕ್ಕೂ ಅಧಿಕ ಭಕ್ತರು ಅಮ್ಮನವರ ದರ್ಶನ ಪಡೆಯುವ ನಿರೀಕ್ಷೆ ಇದೆ. ನವರಾತ್ರಿಯಂದು ಭವನದಲ್ಲಿ ನಡೆಯಲಿರುವ ಷಟ್ಚಂಡಿ ಮಹಾಯಜ್ಞ ಭಕ್ತರನ್ನು ಮತ್ತಷ್ಟು ಆಕರ್ಷಿಸುತ್ತದೆ.

ಇನ್ನು ಅಗ್ನಿಸಾಕ್ಷಿಯ ನಟಿ ವೈಷ್ಣವಿ ಗೌಡ ಹುಟ್ಟುವುದಕ್ಕೂ ಮುನ್ನ ಈ ದೇಗುಲಕ್ಕೆ ಅವರ ಪೋಷಕರು ಹರಕೆ ಹೊತ್ತಿದ್ದರಂತೆ. ಆ ಬಳಿಕ ಅವರಿಗೆ ಆ ದೇವಿಯ ಹೆಸರಿಡಲಾಯಿತು ಎಂದು ಸತಃ ಅವರೇ ಹೇಳಿದ್ದರು. ಬಿಗ್ ಬಾಸ್’ನಲ್ಲಿ ಒಂದೊಮ್ಮೆ ಶಂಕರ್ ಅಶ್ವತ್ಥ್ ಅವರು ಈ ಬಗ್ಗೆ ಮಾತನಾಡಿದಾಗ ವೈಷ್ಣವಿ ಇದು ನಿಜ ಎಂದು ಹೇಳಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link