ತಿನ್ನಲು ಬಲು ಸಿಹಿ.. ಮಧುಮೇಹಕ್ಕೆ ರಾಮಬಾಣ ಈ ಪುಟ್ಟ ಹಣ್ಣು! ನಿಯಮಿತವಾಗಿ ತಿಂದ್ರೆ ಶುಗರ್ ಹೆಚ್ಚಾಗೋದೇ ಇಲ್ಲ..
![](https://kannada.cdn.zeenews.com/kannada/sites/default/files/2024/12/24/478627-blood-sugar-cherry-9.jpg?im=FitAndFill=(500,286))
ಮಧುಮೇಹಿಗಳು ತಮ್ಮ ಆಹಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತಾರೆ. ಆಹಾರದಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಸಕ್ಕರೆ ನಿಯಂತ್ರಿತ ಆಹಾರಗಳನ್ನು ಸೇವಿಸುತ್ತಾರೆ.. ಅದರಂತೆ ಮಧುಮೇಹ ರೋಗಿಗಳಿಗೆ ಹಣ್ಣುಗಳ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಇದರ ರಸ ಆರೋಗ್ಯಕ್ಕೆ ಹಾನಿಕಾರಕ.
![](https://kannada.cdn.zeenews.com/kannada/sites/default/files/2024/12/24/478626-blood-sugar-cherry-8.jpg?im=FitAndFill=(500,286))
ಸಕ್ಕರೆಯನ್ನು ನಿಯಂತ್ರಿಸಲು ಮಧುಮೇಹಿಗಳು ಕೆಲವು ಹಣ್ಣುಗಳನ್ನು ಸೇವಿಸಬಹುದು. ಬೇಸಿಗೆಯಲ್ಲಿ ಸಕ್ಕರೆ ನಿಯಂತ್ರಣಕ್ಕೆ ಚೆರ್ರಿಗಳನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.. ಕೆಂಪು ಚೆರ್ರಿಗಳು ನೋಡಲು ಸುಂದರವಾಗಿರುವಂತೆ ತಿನ್ನಲು ಅಷ್ಟೇ ರುಚಿಕರವಾಗಿಯೂ ಇರುತ್ತವೆ..
![](https://kannada.cdn.zeenews.com/kannada/sites/default/files/2024/12/24/478625-blood-sugar-cherry-7.jpg?im=FitAndFill=(500,286))
ಚೆರ್ರಿ ಒಂದು ಪೌಷ್ಠಿಕಾಂಶದ ಹಣ್ಣು. ಇದರಲ್ಲಿ ಥಯಾಮಿನ್, ರೈಬೋಫ್ಲಾವಿನ್, ವಿಟಮಿನ್ ಬಿ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ವಿಟಮಿನ್ ಬಿ 6, ಪ್ಯಾಂಟೊಥೆನಿಕ್ ಆಮ್ಲ, ನಿಯಾಸಿನ್, ಫೋಲೇಟ್, ಪೊಟ್ಯಾಸಿಯಮ್, ಮ್ಯಾಂಗನೀಸ್, ತಾಮ್ರ, ಕಬ್ಬಿಣ, ಕ್ಯಾಲ್ಸಿಯಂ, ರಂಜಕದಂತಹ ಪೋಷಕಾಂಶಗಳಿವೆ.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಚೆರ್ರಿಗಳು ಬಹಳ ಪರಿಣಾಮಕಾರಿ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಚೆರ್ರಿಗಳನ್ನು ಸೇವಿಸುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ... ಮಧುಮೇಹ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುತ್ತದೆ.. ಹೀಗಾಗಿ ಮಧುಮೇಹಿಗಳು ಚೆರ್ರಿ ಹಣ್ಣುಗಳನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಚೆರ್ರಿಗಳು ಬಹಳ ಪರಿಣಾಮಕಾರಿ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಚೆರ್ರಿಗಳನ್ನು ಸೇವಿಸುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ... ಮಧುಮೇಹ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುತ್ತದೆ.. ಹೀಗಾಗಿ ಮಧುಮೇಹಿಗಳು ಚೆರ್ರಿ ಹಣ್ಣುಗಳನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಚೆರ್ರಿ ಹಣ್ಣುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಚೆರ್ರಿಗಳನ್ನು ತಿನ್ನುವುದರಿಂದ ರೋಗಗಳನ್ನು ತಡೆಯಬಹುದು. ಇದಲ್ಲದೇ ರಾತ್ರಿ ನಿದ್ದೆ ಬಾರದವರು ರಾತ್ರಿ ಮಲಗುವ ಮುನ್ನ ಚೆರ್ರಿ ಹಣ್ಣು ತಿನ್ನುತ್ತಾರೆ. ಚೆರ್ರಿಗಳಲ್ಲಿ ಮೆಲಟೋನಿನ್ ಸಮೃದ್ಧವಾಗಿದೆ. ಇದು ನಿದ್ರಾಹೀನತೆ ಮತ್ತು ನಿದ್ರೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.