ಬೆಳಗೆದ್ದು ಮನೆ ಅಂಗಳದಲ್ಲಿರುವ ಈ ಎಲೆ ಜಗಿದರೆ ಸಾಕು.. ಮತ್ತೆಂದೂ ಹೆಚ್ಚಾಗದಂತೆ ನಾರ್ಮಲ್ ಆಗಿಯೇ ಇರುತ್ತೆ ಬ್ಲಡ್ ಶುಗರ್ !!

Sun, 20 Oct 2024-7:14 am,

ತುಳಸಿಗೆ ಹಿಂದೂ ನಂಬಿಕೆಗಳಲ್ಲಿ ವಿಶೇಷ ಸ್ಥಾನವಿದೆ. ಆಯುರ್ವೇದದಲ್ಲಿ ತುಳಸಿ ಎಲೆಗಳು, ಬೀಜಗಳು ಮತ್ತು ಕಾಂಡಗಳನ್ನು ಅನೇಕ ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ತುಳಸಿ ಎಲೆಗಳನ್ನು ಬಳಸುವುದರಿಂದ ದೇಹದ ಪಿಹೆಚ್ ಮಟ್ಟವು ಉತ್ತಮವಾಗಿರುತ್ತದೆ.

ಸೋಂಕು, ಶೀತ ಮತ್ತು ಕೆಮ್ಮು ಮುಂತಾದ ಸಮಸ್ಯೆಗಳಲ್ಲಿ ತುಳಸಿ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ದೇಹದಲ್ಲಿನ ಇನ್ಸುಲಿನ್ ಪ್ರತಿರೋಧವನ್ನು ನಿಯಂತ್ರಿಸಲು ಸಹಾಯಕ. 

ಮಧುಮೇಹದಿಂದ ಉಂಟಾಗುವ ಸಮಸ್ಯೆಗಳನ್ನು ತೊಡೆದುಹಾಕಲು ತುಂಬಾ ಉಪಯುಕ್ತವಾಗಿದೆ. ತುಳಸಿ ಎಲೆ ಇನ್ಸುಲಿನ್‌ಗಾಗಿ ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳನ್ನು ಸಕ್ರಿಯಗೊಳಿಸಲು ಕೆಲಸ ಮಾಡುತ್ತದೆ. ತುಳಸಿಯಲ್ಲಿರುವ ಮಧುಮೇಹ ವಿರೋಧಿ ಗುಣಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. 

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3 ರಿಂದ 4 ತುಳಸಿ ಎಲೆಗಳನ್ನು ಜಗಿದು ತಿಂದು ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ. ತುಳಸಿ ಎಲೆಗಳ ಕಷಾಯವನ್ನು ಸಹ ನೀವು ಕುಡಿಯಬಹುದು. 

ತುಳಸಿ ಎಲೆಗಳ ಕಷಾಯ ತಯಾರಿಸುವ ವಿಧಾನ - ಫ್ರೆಶ್ ತುಳಸಿ ಎಲೆಗಳನ್ನು ತೆಗೆದುಕೊಂಡು‌ ಒಂದು ಲೋಟ ನೀರಿನಲ್ಲಿ ಕುದಿಸಿ ಫಿಲ್ಟರ್ ಮಾಡಿ. ಇದನ್ನು ಕುಡಿಯುವುದರಿಂದ ರಕ್ತದ ಸಕ್ಕರೆ ಮಟ್ಟ ಕಂಟ್ರೋಲ್‌ ಆಗುತ್ತದೆ. ಮಧುಮೇಹದಿಂದ ಉಂಟಾಗುವ ಸೈಡ್‌ ಎಫೆಕ್ಟ್‌ ಗಳನ್ನು ನಿಯಂತ್ರಿಸುತ್ತವೆ.

ತುಳಸಿ ಎಲೆಗಳ ನೀರನ್ನು ಕುಡಿಯುವುದರಿಂದಲೂ ಸಾಕಷ್ಟು ಪ್ರಯೋಜನಗಳಿವೆ. ತುಳಸಿ ಎಲೆಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ ಮತ್ತು ಈ ನೀರನ್ನು ಫಿಲ್ಟರ್ ಮಾಡಿ ಬೆಳಿಗ್ಗೆ ಕುಡಿಯಿರಿ. 

ಪ್ರತಿದಿನ ತುಳಸಿ ಎಲೆಗಳನ್ನು ಸರಿಯಾಗಿ ಸೇವಿಸುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ. ತುಳಸಿ ಎಲೆಗಳನ್ನು ಹೊರತುಪಡಿಸಿ, ಮಧುಮೇಹವನ್ನು ತೊಡೆದುಹಾಕಲು ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ. ನಿಯಮಿತ ವ್ಯಾಯಾಮ ಮಾಡಿ.

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link