ಈ ನಟ ಯಾರು ಅಂತ ಹೇಳ್ತೀರಾ..? ಇವರು ಚಿತ್ರರಂಗದ ಆಧಾರ ಸ್ತಂಭ.. ಸೂಪರ್‌ ಸ್ಟಾರ್‌ ನಟ..

Sat, 26 Oct 2024-4:14 pm,

ಇವರು ಬೇರೆ ಯಾರೂ ಅಲ್ಲ.. ಮೆಗಾಸ್ಟಾರ್ ಚಿರಂಜೀವಿ.. ಈ ಹೆಸರಿಗೆ ಸಿನಿಮಾ ಲೋಕದಲ್ಲಿರುವ ಕ್ರೇಜ್ ಹೇಳತೀರದು. ಹಲವು ಸೂಪರ್ ಹಿಟ್ ಚಿತ್ರಗಳ ಮೂಲಕ ತೆಲುಗು ಜನರ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ. ಚಿರು ಸದ್ಯ ವಿಶ್ವಂಭರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರದ ಪೋಸ್ಟರ್‌ ವೈರಲ್ ಆಗಿತ್ತು.  

ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗದ ಅನೇಕರಿಗೆ ಯುವ ಕಲಾವಿದರಿಗೆ ಸ್ಫೂರ್ತಿ. ಈ ಹೆಸರು ಕೇಳಿದರೆ ಮಕ್ಕಳಿಂದ ದೊಡ್ಡವರವರೆಗೂ ನಮ್ಮ ಮೆಗಾಸ್ಟಾರ್‌ ಅಂತ ಪ್ರೀತಿಯಿಂದ ಹೇಳ್ತಾರೆ.. ಯಾವುದೇ ಹಿನ್ನೆಲೆಯಿಲ್ಲದ ಸಾಮಾನ್ಯ ಹುಡುಗ ನಟನೆಯ ಆಸಕ್ತಿಯಿಂದ ಚಿತ್ರರಂಗಕ್ಕೆ ಕಾಲಿಟ್ಟು ಇಂದು ಅದೇ ಚಿತ್ರರಂಗದ ಆಧಾರ ಸ್ತಂಭವಾಗಿದ್ದಾರೆ..  

ಮೊದಮೊದಲು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ, ನಂತರ ಖಳ ಪಾತ್ರಗಳ ಮೂಲಕ ನಾಯಕನಾಗಿ ಬೆಳ್ಳಿತೆರೆಯನ್ನು ಅಲಂಕರಿಸಿದ ಚಿರಂಜೀವಿ ಅವರು, ಸುಮಾರು 40 ವರ್ಷಗಳ ಹಿಂದೆ ಇಂಡಸ್ಟ್ರಿಗೆ ಕಾಲಿಟ್ಟರು.. ಅಂದಿನಿಂದ ಹಂತ ಹಂತವಾಗಿ ಬೆಳೆದು ಮೆಗಾಸ್ಟಾರ್ ಆಗಿ ವಿಶ್ವ ವಿಖ್ಯಾತಿ ಗಳಿಸಿದ್ದಾರೆ..  

ಎಷ್ಟೇ ಬೆಳೆದರೂ.. ಬೇರು, ನೆನಪುಗಳು ಬದಲಾಗಬಾರದು ಎಂಬ ಮಾತಿದೆ.. ಚಿರು ಈ ಮಾತನ್ನು ಸದಾ ಪಾಲಿಸುತ್ತಾರೆ. ವೃತ್ತಿಬದುಕಿನ ಆರಂಭದ ದಿನಗಳಲ್ಲಿ ಅವರಿಗೆ ಸಿನಿಮಾ ಆಫರ್ ಕೊಟ್ಟ ನಿರ್ದೇಶಕರು, ಅವರ ಜತೆ ಪಯಣಿಸಿದ ನಟರನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.   

ತಮ್ಮ ಸಿನಿಮಾ ಪಯಣದಲ್ಲಿ ಎದುರಾದ ಸವಾಲುಗಳು, ಟೀಕೆಗಳ ನಡುವೆಯೂ ತಾವು ನಂಬಿದ ಸಿದ್ಧಾಂತವನ್ನು ಇಂದಿನ ಯುವ ನಟರಿಗೆ ಹೇಳಿ ಇನ್ನಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಇದರ ನಡುವೆ Insta ನಲ್ಲಿ ಚಿರಂಜೀವಿ ಅವರ ಇತ್ತೀಚಿನ ವಿಶೇಷ ಪೋಸ್ಟ್ ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ.  

ಚಿರಂಜೀವಿ ನಾಯಕನಾಗಿ ನಟಿಸಿದ ಮೊದಲ ಚಿತ್ರ ಅಡಿಗಲ್ಲು. ಈ ಸಿನಿಮಾದ ಮೂಲಕ ಬೆಳ್ಳಿತೆರೆಗೆ ನಾಯಕನಾಗಿ ಪಾದಾರ್ಪಣೆ ಮಾಡಿದ ಚಿರು, ಡಿಗ್ರಿ ಎರಡನೇ ವರ್ಷ ಓದುತ್ತಿರುವಾಗ ‘ರಜಿನಾಮ’ ಎಂಬ ನಾಟಕ ಪ್ರದರ್ಶಿಸಿದ್ದರು. ಈ ನಾಟಕಕ್ಕಾಗಿ ಚಿರಂಜೀವಿ ಕಾಲೇಜಿನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಇದರ ನೆನಪಿಗಾಗಿ ಚಿರು ಆಗ ತೆಗೆದ ಫೋಟೋವನ್ನು ಈಗ ಶೇರ್ ಮಾಡಿದ್ದಾರೆ.    

“1974-75ರ ಅವಧಿಯಲ್ಲಿ ನರಸಾಪುರದ ವೈಎನ್‌ಎಂ ಕಾಲೇಜಿನಲ್ಲಿ ನಡೆದ ಮೊದಲ ನಾಟಕ ‘ರಜಿನಾಮ’. ಕೋನ ಗೋವಿಂದ ರಾವ್ ಅವರ ಈ ನಾಟಕದಲ್ಲಿ ನಟನಾಗಿ ಮೊದಲ ಮನ್ನಣೆ. ಅತ್ಯುತ್ತಮ ನಟ ಎಂಬ ಪ್ರಶಸ್ತಿ ಬಂದಿರುವುದು ಕೂಡ ದೊಡ್ಡ ಪ್ರೋತ್ಸಾಹ. 50 ವರ್ಷಗಳ ಅಭಿನಯದ ವೈಭವ.. ಕೊನೆಯಿಲ್ಲದ ಸಂತೋಷ”. ಎಂದು ಚಿರು ಫೊಟೋಸ್‌ ಹಂಚಿಕೊಂಡು ಹಿಂದಿನ ದಿನಗಳನ್ನು ನೆನೆದಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link