ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳಿಸಿದ್ದ ಆ ಮೆಸೇಜ್‌ ಏನು? ನಟ ದರ್ಶನ್‌ ಕೋಪ ನೆತ್ತಿಗೇರಿದ್ದೇಕೆ?

Wed, 12 Jun 2024-1:25 pm,

ನಟ ದರ್ಶನ್‌ ಮತ್ತು ಪವಿತ್ರಾ ಗೌಡ ಸಂಬಂಧದ ವಿಚಾರ ಇದೇ ವರ್ಷ ಜನವರಿಯಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ನಮ್ಮದು 10 ವರ್ಷಗಳ ಸಂಬಂಧ ಎಂದು ಪವಿತ್ರಾ ಗೌಡ ಪೋಸ್ಟ್‌ ಹಾಕಿದ್ದರು.   

ಈ ಪೋಸ್ಟ್‌ ದರ್ಶನ್‌ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಕಣ್ಣುಕುಕ್ಕಿತ್ತು. ದರ್ಶನ್‌ ಮತ್ತು ಪತ್ನಿ ವಿಜಯಲಕ್ಷ್ಮಿ ನಡುವೆ ಪವಿತ್ರಾ ಗೌಡ ಬಂದ ವಿಚಾರ ರೇಣುಕಾಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತಂತೆ. 

ಇದೇ ಪವಿತ್ರಾ ಗೌಡ ಅವರಿಗೆ ಕೆಟ್ಟ ಮೆಸೇಜ್‌ ಮಾಡಲು ಪ್ರೇರೆಪಿಸಿದ್ದಂತೆ ಎಂಬ ಅನೇಕ ಊಹಾಪೋಹಗಳು ಹರಿದಾಡುತ್ತಿವೆ.  

ಪವಿತ್ರಾ ಗೌಡ ಅವರಿಗೆ ಏನಂತ ಮೆಸೇಜ್‌ ಮಾಡಿದ್ದರು ಎಂಬುದು ಹಲವರ ಪ್ರಶ್ನೆಯಾಗಿದೆ. ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದರಂತೆ ಎಂದು ಆರೋಪಿಸಲಾಗಿದೆ. 

ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಫೋಟೋವನ್ನು ಸಹ ಕಳಿಸಿದ್ದನಂತೆ ಎಂಬ ಆರೋಪವಿದೆ ಎನ್ನಲಾಗಿದೆ. ಇದೇ ಪವಿತ್ರಾ ಗೌಡ ಮತ್ತು ದರ್ಶನ್‌ ಕೋಪಕ್ಕೆ ಕಾರಣವಾಗಿತ್ತಂತೆ ಎಂದು ಹೇಳಲಾಗಿದೆ. 

ಈ ರೀತಿ ಇನ್ಮೇಲೆ ಮಾಡಬೇಡ ಎಂಬ ವಾರ್ನಿಂಗ್‌ ಕೊಟ್ಟು ಕಳುಹಿಸಲು ರೇಣುಕಾಸ್ವಾಮಿಯನ್ನು ಕರೆಸಿದ್ದರಂತೆ. ಆದರೆ ಇದೇ ವಿಚಾರ ಈಗ ಕೊಲೆಯಾಗಿ ದರ್ಶನ್‌ ಬಂಧನದ ವರೆಗೂ ಬಂದು ನಿಂತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link