Darshan : ಮೊದಲ ಬಾರಿ ದರ್ಶನ್‌ ಬಾಯಲ್ಲಿ ಸುದೀಪ್‌ ಹೆಸರು, ವೈರಲ್‌ ಆದ ಹೇಳಿಕೆ

Tue, 13 Dec 2022-7:10 pm,

ದರ್ಶನ್‌ ಅಭಿನಯದ ಕ್ರಾಮತಿ ಸಿನಿಮಾ ಬಿಡುಗಡೆಗೆ ಎಲ್ಲರೂ ಕಾದು ಕುಳಿತಿದ್ದಾರೆ. ಈ ಮಧ್ಯೆ ಸಿನಿಮಾದ ಪ್ರಮೋಷನ್‌ನಲ್ಲಿ ದರ್ಶನ್‌ ಬ್ಯುಸಿಯಾಗಿದ್ದಾರೆ. 

ಚಿತ್ರದ ಪ್ರಚಾರದ ವೇಳೆ ಮೊದಲ ಬಾರಿಗೆ ದರ್ಶನ್‌ ಬಾಯಿಯಲ್ಲಿ ಸುದೀಪ್‌ ಹೆಸರು ಕೇಳಿಬಂದಿದೆ. ಕ್ರಾಂತಿ ಚಿತ್ರದ ಬಗ್ಗೆ ಮೀಡಿಯಾ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶನ್‌ ಈ ಮಾತು ಹೇಳಿದ್ದಾರೆ. 

ರಚಿತಾ ರಾಮ್‌ ಬಗ್ಗೆ ನಿರೂಪಕ ಕೇಳಿದ ಪ್ರಶ್ನೆಗೆ, ''ಒಬ್ಬ ನಾಯಕಿ ಚಿತ್ರರಂಗದಲ್ಲಿ 10 ವರ್ಷ ಪೂರೈಸುವುದು ಸುಲಭದ ಮಾತಲ್ಲ. ಅದು ನಿಜವಾಗಲೂ ದೊಡ್ಡ ವಿಚಾರ. ರಚಿತಾ ದೊಡ್ಡ ದೊಡ್ಡ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಪ್ಪು, ಸುದೀಪ್‌, ಶಿವಣ್ಣ ಹೀಗೆ ಅನೇಕರ ಜೊತೆಗೆ ಕೆಲಸ ಮಾಡಿದ್ದಾರೆ'' ಎಂದು ದರ್ಶನ್‌ ಹೇಳುತ್ತಾರೆ. 

ದರ್ಶನ್‌ ಅವರ ಈ ಹೇಳಿಕೆ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.    

ಜನವರಿ 26 ರಂದು ಕ್ರಾಂತಿ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link