ದೀಪಾವಳಿ ಹೊತ್ತಿನಲ್ಲಿ ಕೋಟ್ಯಾಧಿಪತಿಯಾಗುವ ಯೋಗ ! ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿ ಮಳೆ

Fri, 01 Sep 2023-10:06 am,

ದೀಪಾವಳಿಗೂ ಮುನ್ನ ಅದೃಷ್ಟ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ 04 ರಂದು, ನ್ಯಾಯದ ಅಧಿಪತಿ ಶನಿ ದೇವ ಕುಂಭ ರಾಶಿಯಲ್ಲಿ ನೇರ ನಡೆಗೆ ಮರಳುತ್ತಾನೆ.  ಶನಿ ಮಹಾತ್ಮ ವಕ್ರ ನಡೆಯಿಂದ ಮತ್ತೆ ನೇರ ನಡೆಗೆ ಮರಳುವುದನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ. 

ಶನಿಯಿಂದ ಕುಬೇರ ಯೋಗ: ಶನಿ ದೇವ ಮತ್ತೆ ನೇರ ನಡೆಗೆ ಮರಳುವುದರಿಂದ ಮೂರು ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ಕುಬೇರ ಯೋಗದ  ಮೂಲಕ ಈ  ರಾಶಿಯವರ ಅದೃಷ್ಟವೇ ಬದಲಾಗುವುದು.

ವೃಷಭ ರಾಶಿ : ಈ ಅವಧಿಯಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಒದಗಿ ಬರುತ್ತದೆ. ಅನೇಕ ಸಮಸ್ಯೆಗಳು ಬಗೆಹರಿಯುತ್ತದೆ. ಇದರೊಂದಿಗೆ, ಉದ್ಯೋಗಾಕಾಂಕ್ಷಿಗಳು ಈ ಅವಧಿಯಲ್ಲಿ ಯಶಸ್ವಿಯಾಗಬಹುದು.

ಕರ್ಕ ರಾಶಿ : ಕರ್ಕಾಟಕ ರಾಶಿಯವರು ಶನಿಯ ಸಂಚಾರದಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ. ಹೊಸ ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ. ಶನಿಯ ಸಂಚಾರದಿಂದಾಗಿ, ಕರ್ಕ ರಾಶಿಯವರು ಕುಟುಂಬ ಮತ್ತು ಸ್ನೇಹಿತರ ಸಂಪೂರ್ಣ ಬೆಂಬಲ ಪಡೆಯುತ್ತಾರೆ. 

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಈ ಸಮಯದಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಸಿಗುವುದು. ಇದರೊಂದಿಗೆ ಕ್ಷೇತ್ರದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಆರ್ಥಿಕವಾಗಿ ಬಹಳಷ್ಟು ಲಾಭವಾಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಗಳನ್ನು ಪಡೆಯುತ್ತಾರೆ. ಉದ್ಯೋಗಾಕಾಂಕ್ಷಿಗಳಿಗೆ ಶನಿಯ ಸಂಚಾರವೂ ಅನುಕೂಲಕರವಾಗಿರುತ್ತದೆ.

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link