ಧಾರಾವಾಹಿ ಶೂಟಿಂಗ್‌ ವೇಳೆ ಅಪಘಾತ..! ಖ್ಯಾತ ನಟಿಗೆ ಗಂಭೀರ ಗಾಯ..

Thu, 20 Jun 2024-4:14 pm,

ಮಂಗಳಲಕ್ಷ್ಮಿ ಧಾರಾವಾಹಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಸೀರಿಯಲ್‌ನಲ್ಲಿ ಮಂಗಳಾ ಪಾತ್ರದಲ್ಲಿ ಖ್ಯಾತ ನಟಿ ದೀಪಿಕಾ ಸಿಂಗ್‌ ನಟಿಸುತ್ತಿದ್ದಾರೆ. ಶೂಟಿಂಗ್ ವೇಳೆ ದೀಪಿಕಾ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..   

ದಿಯಾ ಔರ್ ಬಾತಿ ಧಾರಾವಾಹಿಯ ಖ್ಯಾತಿಯ ದೀಪಿಕಾ ಸಿಂಗ್ ಸದ್ಯ ಮಂಗಳಲಕ್ಷ್ಮಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಮಂಗಳಾ ಪಾತ್ರದಲ್ಲಿ ದೀಪಿಕಾ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಈ ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿ ದೀಪಿಕಾ ಗಾಯಗೊಂಡಿದ್ದಾರಂತೆ.  

ಇತ್ತೀಚಿನ ಮಾಹಿತಿಯ ಪ್ರಕಾರ, ಈ ಧಾರಾವಾಹಿಯ ಚಿತ್ರೀಕರಣ ಮುಂಬೈನ ಗೋರೆಗಾಂವ್ ಫಿಲ್ಮ್‌ಸಿಟಿಯಲ್ಲಿ ನಡೆಯುತ್ತಿತ್ತು, ಈ ವೇಳೆ ಸೆಟ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ..  

ಪ್ರಶಸ್ತಿ ಸಮಾರಂಭದ ದೃಶ್ಯವನ್ನು ಚಿತ್ರೀಕರಿಸುವಾಗ, ಬಲವಾದ ಗಾಳಿಗೆ ಹಿಂದೆ ಹಾಕಲಾಗಿದ್ದ ಪ್ಲೈವುಡ್ ಬೋರ್ಡ್ ದೀಪಿಕಾ ಮೇಲೆ ಬಿದ್ದಿದೆ. ಈ ವೇಳೆ ಅವರು ಕಿರುಚುತ್ತಾ ಕೆಳಗೆ ಬಿದ್ದಿದ್ದಾರೆ, ಆಕೆಯ ಕಿರುಚಾಟ ಕೇಳಿ ತಕ್ಷಣ ಅಲ್ಲಿಗೆ ಆಗಮಿಸಿದ ಪ್ರೊಡಕ್ಷನ್ ತಂಡ ನಟಿಯ ಮೇಲೆ ಬಿದ್ದಿದ್ದ ಪ್ಲೈವುಡ್ ಬೋರ್ಡ್ ತೆಗೆದಿದೆ.   

ಘಟನೆಯಿಂದಾಗಿ ದೀಪಿಕಾ ಬೆನ್ನಿಗೆ ಗಂಭೀರ ಗಾಯವಾಗಿದೆಯಂತೆ. ಗಾಯಗೊಂಡ ಸ್ಥಿತಿಯಲ್ಲಿಯೂ ಸಹ, ದೀಪಿಕಾ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.   

ನೋವು ಕಡಿಮೆ ಮಾಡಲು ಐಸ್ ಪ್ಯಾಕ್ ಗಳನ್ನು ನಟಿ ಬಳಸಿದ್ದಾರಂತೆ.. ಆದರೆ ಬೆನ್ನಿನ ಊತ ಹೆಚ್ಚಾದ ಕಾರಣ ಚಿತ್ರೀಕರಣವನ್ನು ಮಧ್ಯದಲ್ಲಿಯೇ ನಿಲ್ಲಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  

ಬೆನ್ನಿಗೆ ತೀವ್ರ ಪೆಟ್ಟಾಗಿರುವ ಕಾರಣ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ದೀಪಿಕಾ ಸಿಂಗ್ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.   

ದಿಯಾ ಔರ್ ಬಾತಿ ಧಾರಾವಾಹಿ ಮೂಲಕ ನಟಿಯಾಗಿ ವೃತ್ತಿ ಜೀವನ ಆರಂಭಿಸಿದ ದೀಪಿಕಾ.. ಅದೇ ಧಾರಾವಾಹಿಯ ನಿರ್ದೇಶಕ ರೋಹಿತ್ ಗೋಯಲ್ ಅವರನ್ನು ಪ್ರೇಮಾ ವಿವಾಹವಾಗಿದ್ದರು. ಅವರಿಗೆ ಒಬ್ಬ ಮಗನಿದ್ದಾನೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link