ಪುಲಿಕೇಶಿ ನಗರದಲ್ಲಿ ಅಭಿವೃದ್ಧಿ ಪರ್ವ; ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದ ಶಾಸಕ ಎ.ಸಿ.ಶ್ರೀನಿವಾಸ್
![ಹಲವು ಅಭಿವೃದ್ಧಿ ಕಾರ್ಯ Pulikeshi Nagar MLA AC Srinivas](https://kannada.cdn.zeenews.com/kannada/sites/default/files/2025/01/28/489390-pulikeshi-nagar-1.png?im=FitAndFill=(500,286))
ಬೆಂಗಳೂರಿನ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದ್ದು, ಇಲ್ಲಿನ ನಿವಾಸಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಶಾಸಕ ಎ.ಸಿ.ಶ್ರೀನಿವಾಸ್ ನೇತೃತ್ವದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
![ಪೂಜಾ ಕಾರ್ಯಕ್ರಮ Pulikeshi Nagar MLA AC Srinivas](https://kannada.cdn.zeenews.com/kannada/sites/default/files/2025/01/28/489391-pulikeshi-nagar-2.png?im=FitAndFill=(500,286))
ಮಂಗಳವಾರ ಪುಲಿಕೇಶಿ ನಗರ ಕ್ಷೇತ್ರ ವ್ಯಾಪ್ತಿಯ ಕಾವಲ್ ಬೈರಸಂದ್ರ ವಾರ್ಡ್ನ ನಾಗಮ್ಮ ಲೇಔಟ್, ನಂದಗೋಕುಲ ಲೇಔಟ್ ಹಾಗೂ ಆದರ್ಶ ಲೇಔಟ್ನಲ್ಲಿ ಶಾಸಕ ಎ.ಸಿ.ಶ್ರೀನಿವಾಸ್ ನೇತೃತ್ವದಲ್ಲಿ ರಸ್ತೆಗಳಿಗೆ ಡಾಂಬರೀಕರಣದ ಪೂಜಾ ಕಾರ್ಯಕ್ರಮದಲ್ಲಿ ನಡೆಯಿತು.
![ರಸ್ತೆಗಳಿಗೆ ಡಾಂಬರೀಕರಣ Pulikeshi Nagar MLA AC Srinivas](https://kannada.cdn.zeenews.com/kannada/sites/default/files/2025/01/28/489392-pulikeshi-nagar-3.png?im=FitAndFill=(500,286))
ಇದೇ ವೇಳೆ ಗುಣಮಟ್ಟದ ರಸ್ತೆ ನಿರ್ಮಾಣ ಕಾರ್ಯವನ್ನು ಖುದ್ದು ಶಾಸಕ ಎ.ಸಿ.ಶ್ರೀನಿವಾಸ್ ಅವರು ಪರಿಶೀಲನೆ ನಡೆಸಿದರು. ಚೆನ್ನಾಗಿ ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಇದೇ ವೇಳೆ ಸೂಚಿಸಿದರು.
ಸಾರ್ವಜನಿಕರಿಗೆ ಯಾವುದೇ ರೀತಿ ಅಡಚಣೆಯಾಗದ ರೀತಿಯಲ್ಲಿ ಡಾಂಬರೀಕರಣ ಹಾಗೂ ಗುಣಮಟ್ಟದ ಕಾಮಗಾರಿಯನ್ನ ತ್ವರಿತಗತಿಯಲ್ಲಿ ನಡೆಸಬೇಕು ಎಂದು ಗುತ್ತಿಗೆದಾರರಿಗೆ ಶಾಸಕ ಎ.ಸಿ.ಶ್ರೀನಿವಾಸ್ ಸೂಚಿಸಿದರು.
ಇದೇ ವೇಳೆ ಶಾಸಕ ಎ.ಸಿ.ಶ್ರೀನಿವಾಸ್ ಅವರಿಗೆ ಅಭಿಮಾನಿಗಳು ಹಾರ ಹಾಕಿ ಸನ್ಮಾನಿಸಿದರು. ಪುಲಕೇಶಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕಂಡು ಕ್ಷೇತ್ರದ ಜನರು ಖುಷಿ ವ್ಯಕ್ತಪಡಿಸಿದ್ದಾರೆ.