ಸಂಖ್ಯೆಯಲ್ಲೇನಿದೆ ? ತಿರುಪತಿ ತಿಮ್ಮಪ್ಪನಿಗೆ 1,11,11,111 ರೂಪಾಯಿ ಚೆಕ್ ಕೊಟ್ಟ ಹುಬ್ಬಳ್ಳಿಯ ಭಕ್ತ

Sun, 31 Jan 2021-1:04 pm,

ತಿರುಪತಿಯ ಶ್ರೀ ಗೋವಿಂದರಾಜ ಸ್ವಾಮಿ ದೇವಸ್ಥಾನಕ್ಕೆ ಲಕ್ಷಾಂತರ  ಮೌಲ್ಯದ ಚಿನ್ನದ ಕಿರೀಟಗಳು ಮತ್ತು ಕಿವಿಯೋಲೆಗಳನ್ನು ಪ್ರದಾನ ಮಾಡಲಾಯಿತು.

ಇಲ್ಲಿನ ದೇವಾಲಯಗಳಲ್ಲಿ ಕಾಲಕಾಲಕ್ಕೆ ಭಕ್ತರು ವೆಂಟೇಶ್ವರನಿಗೆ ಭೋಗ, ಬಟ್ಟೆ ಮತ್ತು ಆಭರಣಗಳನ್ನು ಸಮರ್ಪಿಸುತ್ತಾರೆ.

ಹುಬ್ಬಳ್ಳಿಯ ಭಕ್ತರೊಬ್ಬರು,  ಎಸ್‌ವಿಬಿಸಿ (SVBC) ಟ್ರಸ್ಟ್ಗೆ ಒಂದು ಕೋಟಿಗೂ ಅಧಿಕ  ಮೊತ್ತದ ಚೆಕನ್ನು ನೀಡಿದ್ದಾರೆ. ಇವರು ದೇವರಿಗೆ ಒಂದು ಕೋಟಿ, 11 ಲಕ್ಷ, 11 ಸಾವಿರ, 111 ರೂಪಾಯಿಗಳನ್ನು ಅರ್ಪಿಸಿದ್ದಾರೆ, ಈ ಚೆಕ್ ಕೂಡಾ ಈಗ ಚರ್ಚೆಯ ವಿಷಯವಾಗಿದೆ. 

ಕಳೆದ ತಿಂಗಳು ವೈಕುಂಠ ಏಕಾದಶಿ ಸಂದರ್ಭದಲ್ಲಿ ತಿರುಮಲ ಬೆಟ್ಟಗಳಲ್ಲಿ ಮೂರು ದಿನಗಳ ತಿರುಮಂಜನಂ ಆಯೋಜಿಸಲಾಗಿತ್ತು. ದೇವಾಲಯದ ಪ್ರತಿ ಹಬ್ಬದಲ್ಲೂ ದೇವಾಲಯವನ್ನು ವಿಶೇಷ  ರೀತಿಯಲ್ಲಿ ಶುಚಿಗೊಳಿಸಲಾಗುತ್ತದೆ.  

ಕೋಟ್ಯಂತರ ಭಕ್ತರು ಶ್ರೀದೇವರ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೆ ಇಲ್ಲಿ ದೇವರಿಗೆ ತಮ್ಮ ಮುಡಿಯನ್ನೂ ಸಮರ್ಪಿಸುತ್ತಾರೆ. ಈ ದೇವಾಲಯದಲ್ಲಿ ಶೃದ್ಧಾ ಭಕ್ತಿಯಿಂದ ಏನು ಕೇಳಿದರೂ ತಿಮ್ಮಪ್ಪ ದಯಪಾಲಿಸುತ್ತಾನೆ ಎನ್ನುವುದು ಭಕ್ತರ ನಂಬಿಕೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link