ಐದು ಶತಮಾನಗಳ ಬಳಿಕ ದೀಪಾವಳಿಯಂದು ಅದ್ಭುತ ಯೋಗಗಳ ರಚನೆ, ತಾಯಿ ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು-ಪದೋನ್ನತಿ ಪ್ರಾಪ್ತಿ!

Tue, 07 Nov 2023-9:47 pm,

Diwali 2023 Horoscope: ಈ ಬಾರಿಯ ದೀಪಾವಳಿ ಹಬ್ಬದ ದಿನ ಐನೂರು ವರ್ಷಗಳ ಬಳಿಕ ಹಲವು ಅದ್ಭುತ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗಗಳ ಕಾರಣ ಮೇಷ, ಧನು ಸೇರಿದಂತೆ ಹಲವು ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭಗೊಳ್ಳಲಿದೆ. (Spiritual News In Kannada)

ಮೇಷ ರಾಶಿ: ದೀಪಾವಳಿಯ ಸಂದರ್ಭದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಶುಭ ಯೋಗಗಳು ಮೇಷ ರಾಶಿಯ ಜನರ ಪಾಲಿಗೆ ತುಂಬಾ ವಿಶೇಷ ಫಲಗಳನ್ನು ನೀಡಲಿವೆ. ಪ್ರಸ್ತುತ ಗುರು ಬೃಹಸ್ಪತಿ ನಿಮ್ಮ ರಾಶಿಯಲ್ಲಿ ವಿರಾಜಮಾನನಾಗಿರುವ ಕಾರಣ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಪ್ರಬಲವಾಗಿರಲಿದೆ. ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ಇದಲ್ಲದೆ ನೀವು ಹಣ ಉಳಿತಾಯ ಮಾಡುವಲ್ಲಿಯೂ ಕೂಡ ಯಶಸ್ಸನ್ನು ಸಾಧಿಸುವಿರಿ. ಭಾಗ್ಯದ ಸಂಪೂರ್ಣ ಬೆಂಬಲ ನಿಮಗೆ ಇರಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಹಣ ಹೂಡಿಕೆಗಾಗಿ ಯೋಚಿಸುತ್ತಿದ್ದರೆ, ಈ ಅವಧಿಯಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಸಾಬೀತಾಗಲಿದೆ. ನೌಕರ ವರ್ಗದ ಜನರಿಗೆ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ದಾಂಪತ್ಯ ಜೀವನ ಹಾಗೂ ಲವ್ ಲೈಫ್ ಕೂಡ ಬಂಬಾಟಾಗಿರಲಿದೆ. 

ಧನು ರಾಶಿ: ಈ ಶುಭ ಯೋಗಗಳ ನಿರ್ಮಾಣದಿಂದ ಧನು ರಾಶಿಯ ಜಾತಕದವರಿಗೆ ಲಾಭವೋ ಲಾಭ ಉಂಟಾಗಲಿದೆ. ನಿಮ್ಮ ಜೀವನದಲ್ಲಿ ಅಪಾರ ಖುಷಿಗಳ ಆಗಮನವಾಗಲಿದೆ. ಆರ್ಥಿಕ ಸ್ಥಿತಿ ವೇಗ ಪಡೆದುಕೊಳ್ಳಲಿದೆ ಮತ್ತು ನಿಂತುಹೋದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಹೊಸ ಬಿಸ್ನೆಸ್ ಆರಂಭಿಸಲು ಯೋಚಿಸುತ್ತಿದ್ದರೆ, ಈ ಅವಧಿ ನಿಮ್ಮ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ. ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ವಾಹನ, ಸಂಪತ್ತು, ಮನೆ ಇತ್ಯಾದಿಗಳನ್ನು ಖರೀದಿಸುವ ನಿಮ್ಮ ಕನಸು ನನಸಾಗುವ ಸಂಕೇತಗಳಿವೆ. ಆರ್ಥಿಕ ಸ್ಥಿತಿ ಕೂಡ ಬಲವಾಗಲಿದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ನೌಕರವರ್ಗದ ಜನರಿಗೆ ಬಡ್ತಿ ಭಾಗ್ಯ, ಬೋನಸ್ ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ ಹೊಸ ನೌಕರಿಯ ನಿಮ್ಮ ಹುಡುಕಾಟಕ್ಕೆ ತೆರೆಬೀಳುವ ಸಾಧ್ಯತೆಗಳಿವೆ. 

cಮಕರ ರಾಶಿ: ನಿಮ್ಮ ಜಾತಕಕ್ಕೆ ಶನಿ ಅಧಿಪತಿ, ಪ್ರಸ್ತುತ ಆಟ ಕುಂಭ ರಾಶಿಯಲ್ಲಿ ವಿರಾಜಮಾನನಾಗಿರುವ ಕಾರಣ ಹಲವು ಶುಭಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದ ಮಕರ ರಾಶಿಯ ಜಾತಕದವರಿಗೂ ಕೂಡ ವಿಶೇಷ ಲಾಭಗಳು ಸಿಗಲಿವೆ. ಭವಿಷ್ಯಕ್ಕೆ ಸಂಬಂಧಿಸಿದಂತೆ ನೀವು ಮಹತ್ವದ ನಿರ್ಧಾರ ಕೈಗೊಳ್ಳುವಿರಿ. ಇದರಿಂದ ಮುಂಬರುವ ದಿನಗಳಲ್ಲಿ ನಿಮಗೆ ಲಾಭ ಸಿಗಲಿದೆ. ವೃತ್ತಿಜೀವನದ ದೃಷಿಯ ಕುರಿತು ಹೇಳುವುದಾದರೆ, ಉತ್ತಮವಾಗಿರಲಿದೆ. ಹೊಸ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ನಿಮ್ಮ ಪರಿಶ್ರಮದಿಂದ ನೀವು ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಬಹುದು. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link