Pavithra gowda: ದರ್ಶನ್‌ ವಿವಾದದಲ್ಲಿ ಕೇಳಿಬರುತ್ತಿರುವ ಪವಿತ್ರ ಗೌಡ ಯಾರು? ಇವರ ಹಿನ್ನಲೆ ಏನು?

Tue, 11 Jun 2024-1:04 pm,

ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.. ಮಾಹಿತಿ ಪ್ರಕಾರ ಮೃತ ವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ಬಳಿಕ ಆ ಮೃತ ದೇಹವನ್ನು ಕಾಮಾಕ್ಷಿಪಾಳ್ಯದ ಮೋರಿಯಲ್ಲಿ ಎಸೆಯಲಾಗಿದೆ..  ನಿನ್ನೆ‌ ಬೆಳಗ್ಗೆ ಮೃತ ದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸ್‌ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ..   

ಇನ್ನು ಈ ದರ್ಶನ್‌ ಅರೆಸ್ಟ್‌ ಪ್ರಕರಣದಲ್ಲಿ ಪವಿತ್ರಾ ಗೌಡ ಹೆಸರು ಕೇಳಿಬಂದಿದ್ದು, ಇವರಿಗೆ ಅಶ್ಲೀಲ ಕಾಮೆಂಟ್‌ ಮಾಡಿದ್ದಕ್ಕಾಗಿ ಆತನ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.. ಇದೇ ವೇಳೆ ವಿವಾದಲ್ಲಿ ಪದೇ ಪದೇ ಉಲ್ಲೇಖವಾಗುತ್ತಿರುವ ಪವಿತ್ರಾ ಗೌಡ ಯಾರು? ಅವರ ಹಿನ್ನಲೆ ಏನು?  

ಪವಿತ್ರಾ ಗೌಡ ರೂಪದರ್ಶಿ ಹಾಗೂ ನಟಿ.. ಸಿನಿಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ.. ಇವರಿಗೆ ಖುಷಿ ಎನ್ನುವ ಒಬ್ಬ ಹೆಣ್ಣು ಮಗಳಿದ್ದಾಳೆ. ಆದರೆ ನಟಿ ತಮ್ಮ ಪತಿಯಿಂದ ದೂವಾಗಿ ಹಲವಾರು ವರ್ಷಗಳಾಗಿವೆ ಎನ್ನುವ ಮಾತುಗಳು ಕೇಳಿಬಂದಿವೆ..   

ಛತ್ರಿಗಳು ಸರ್‌ ಛತ್ರಿಗಳು, ಸಾಗುವ ದಾರಿ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿ ಪವಿತ್ರಾ ಗೌಡ ನಟಿಸಿದ್ದಾರೆ.. ಆದರೆ ಸಿನಿಮಾಗಳಲ್ಲಿ ಅಷ್ಟಾಗಿ ಹೆಸರು ಮಾಡದ ನಟಿ ಪವಿತ್ರಾ ಗೌಡ ಹೆಚ್ಚು ಖ್ಯಾತಿ ಪಡೆದಿದ್ದು ದರ್ಶನ್‌ ವಿಚಾರವಾಗಿಯೇ..   

ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಪವಿತ್ರ ಗೌಡ ಆಗ್ಗಾಗೆ ತಮ್ಮ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ನಟಿ ತಾವು ಹಾಗೂ ದರ್ಶನ್‌ ಒಟ್ಟಿಗೆ ಇರುವ ಪೋಟೋ ಹಂಚಿಕೊಂಡು ಶಾಕ್‌ ನೀಡಿದ್ದರು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link