Actor shobaraj: ನೂರಾರು ಸಿನಿಮಾಗಳ ಖಡಕ್‌ ವಿಲನ್‌ ಶೋಭರಾಜ್‌ ಸಿನಿರಂಗದಿಂದ ಕಣ್ಮರೆಯಾಗಿದ್ದೇಕೆ ಗೊತ್ತಾ?

Tue, 23 Apr 2024-11:26 am,

ನಟ ಶೋಭರಾಜ್‌ ಹೆಸರು ಕೇಳುತ್ತಿದ್ದಂತೆ ನೆನಪಾಗುವುದು ಅವರ ಖಡಕ್‌ ವಿಲನ್‌ ಪಾತ್ರಗಳು... ಇವರಿಗೆ ಚಿಕ್ಕಂದಿನಿಂದಲೂ ನಟನಾಗಬೇಕೆಂಬ ಬಯಕೆ ಇತ್ತು.. ಆದರೆ ನಮಗೆಲ್ಲ ಯಾರು ಸಿನಿಮಾ ಅವಕಾಶ ಕೊಡುತ್ತಾರೆ ಎಂದು ಸುಮ್ಮನಾಗಿದ್ದರಂತೆ... ಅಂತಹ ಸಂದರ್ಭದಲ್ಲಿ ಅವರ ಕೈ ಹಿಡಿದಿದ್ದು ಶೃಂಗಾರ ಕಾವ್ಯ ಖ್ಯಾತಿಯ ನಟ ರಘುವೀರ್..  

‌ ಹೌದು ಶೋಭರಾಜ್‌ ಅವರಿಗೆ ಸಿನಿಮಾದ ಮೇಲೆ ಎಲ್ಲಿಲ್ಲದ ಹುಚ್ಚು.. ಯಾವುದೇ ಸಿನಿಮಾ ಬಿಡುಗಡೆಯಾದರೂ ಫಸ್ಟ್‌ ಡೇ ಫಸ್ಟ್‌ ಶೋ ನೋಡಬೇಕೆನ್ನುವ ಹಂಬಲ.. ಇದೇ ಸಂದರ್ಭದಲ್ಲಿ ನಟ ಶೋಭರಾಜ್‌ ಅವರಿಗ ರಘುವೀರ್‌ ಅವರ ಪರಿಚಯವಾಯಿತು.. ನಂತರ ಸ್ನೇಹ ಚಿಗುರಿ.. ಸ್ನೇಹಿತರೆಲ್ಲ ಸಿನಿಮಾ ಮಾಡಲು ಮುಂದಾಗುತ್ತಾರೆ..   

ಶೋಭರಾಜ್‌ ಅವರೊಳಗೆ ಇದ್ದ ಅದ್ಭುತ ನಟನೆಯನ ಕಲೆಯನ್ನು ಗುರುತಿಸಿದ ಖ್ಯಾತಿ ರಘುವೀರ್‌ ಅವರಿಗೆ ಸಲ್ಲುತ್ತದೆ.. ತಮಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ನಟ ಶೋಭರಾಜ್‌ ಚೈತ್ರದ ಪ್ರೇಮಾಂಜಲಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು..   

 ಆ ಸಿನಿಮಾದಲ್ಲಿ ಖಡಕ್‌ ಪಾತ್ರದ ಮೂಲಕ ಅಭಿನಯಿಸಿದ್ದ ಶೋಭರಾಜ್‌ ಅವರಿಗೆ ಇದರಿಂದ ಸಾಲು ಸಾಲು ಸಿನಿಮಾ ಅವಕಾಶಗಳು ಬರಾಲಾರಂಭಿಸಿದವು.. ಹೀಗೆ ತಮ್ಮ ಅದ್ಭುತ ಅಭಿನಯ ಹಾಗೂ ವಿಭಿನ್ನ ಶೈಲಿಯ ನಟನೆಯಿಂದ ಅಭಿಮಾನಿಗಳ ಹೃದಯ ಗೆದ್ದ ಶೋಭರಾಜ್‌ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ..   

ಇನ್ನು ನಟ ಶೋಭರಾಜ್‌ 2021ರಲ್ಲಿ ಸಕ್ಕತ್ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದರು.. ಆನಂತರ ಅವರಿಗೆ ಉತ್ತನ ಅವಕಾಶಗಳು ಸಿಗದ ಕಾರಣ ಸಿನಿರಂದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.. ಆದರೆ ಸಾಕಷ್ಟು ನೆಗೆಟಿವ್‌ ರೋಲ್‌ಗಳಲ್ಲಿ ಅದ್ಭುತವಾಗಿ ನಟಿಸಿದ್ದ ಈ ಕಲಾವಿದನನ್ನು ಕನ್ನಡ ಸಿನಿ ರಂಗ ಕಡೆಗಣಿಸಿದೆ ಎಂದೇ ಹೇಳಬಹುದು.. ಶೋಭರಾಜ್‌ ಇಂದಿಗೂ ಸಿನಿಮಾಗಳಲ್ಲಿ ನಟಿಸುವ ಸಾಮರ್ಥ್ಯ ಹೊಂದಿದ್ದಾರೆ.. ಮುಂದಿನ ದಿನಗಳಲ್ಲಾದರೂ ಅವರಿಗೆ ಚಂದನವನ ಒಳ್ಳೆಯ ಅವಕಾಶಗಳನ್ನು ನೀಡಿ ಕೈ ಬೀಸಿ ಕರೆಯುತ್ತಾ ಕಾದು ನೋಡಬೇಕಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link