ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ದಾನ ಮಾಡಿದರೆ ಪ್ರಾಪ್ತಿಯಾಗುವುದು ಶಿವನ ವಿಶೇಷ ಕೃಪೆ

Tue, 19 Jul 2022-12:39 pm,

ಹೊಸ ಮತ್ತು ಹಳೆಯ ವಸ್ತ್ರಗಳ ದಾನ: ವಸ್ತ್ರದಾನವೂ ಬಹಳ ಮುಖ್ಯ ದಾನವಗಿದೆ. ಆಯುಷ್ಯವನ್ನು ಹೆಚ್ಚಿಸಲು ವಸ್ತ್ರಗಳನ್ನು ದಾನ ಮಾಡಲಾಗುತ್ತದೆ ಎಂದು ನಂಬಲಾಗಿದೆ. ಹೊಸ ಬಟ್ಟೆಗಳನ್ನು ದಾನ ಮಾಡುತ್ತಿದ್ದರೆ, ಜ್ಯೋತಿಷಿಗಳಿಂದ  ಸಲಹೆಯನ್ನು ತೆಗೆದುಕೊಳ್ಳಿ. ಅದೇ ಹಳೆಯ ಬಟ್ಟೆಗಳನ್ನು ದಾನ ಮಾಡುವುದಾದರೆ ಅವುಗಳನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.   

ರುದ್ರಾಕ್ಷಿ ದಾನ: ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರಾವಣದಲ್ಲಿ ರುದ್ರಾಕ್ಷಿಯ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ಶ್ರಾವಣದಲ್ಲಿ ರುದ್ರಾಕ್ಷಿಯನ್ನು ದಾನ ಮಾಡುವುದರಿಂದ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳು ದೂರವಾಗುತ್ತವೆ. 

ತುಪ್ಪ ದಾನ: ದಾನದ ಪ್ರಕಾರ ತುಪ್ಪವನ್ನು ಅತ್ಯಂತ ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಔಷಧೀಯ ಗುಣಗಳು ಕಂಡುಬರುತ್ತವೆ. ಶಿವನಿಗೆ ತುಪ್ಪದ ಅಭಿಷೇಕವೂ ಮಂಗಳಕರ ಎಂಬ ನಂಬಿಕೆಯಿದೆ. ತುಪ್ಪವನ್ನು ದಾನ ಮಾಡಿದರೆ ರೋಗಗಳು ದೂರವಾಗುತ್ತವೆ. 

ಕಪ್ಪು ಎಳ್ಳು: ಶ್ರಾವಣದಲ್ಲಿ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ರಾಹು-ಕೇತು ಮತ್ತು ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಬಹುದು. ವಿಶೇಷವಾಗಿ ಶನಿಯ ಸಾಡೇ ಸಾತಿ , ಧೈಯ್ಯಾದಿಂದ ತೊಂದರೆಗೊಳಗಾದವರು ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸಬೇಕು. ಮತ್ತು ಕಪ್ಪು ಎಳ್ಳನ್ನು ಬಡವರಿಗೆ ದಾನ ಮಾಡಿ. 

ಉಪ್ಪು: ಹಿಂದೂ ಧರ್ಮದಲ್ಲಿ ಉಪ್ಪಿನ ವಿಶೇಷ ಮಹತ್ವವನ್ನು ಹೇಳಲಾಗಿದೆ. ದಾನದಲ್ಲಿಯೂ ಇದು ವಿಶೇಷ ಮಹತ್ವವನ್ನು ಹೊಂದಿದೆ.ಉಪ್ಪನ್ನು ಧನಾತ್ಮಕ ಶಕ್ತಿಯ ಸಂಕೇತವೆಂದು ನಂಬಲಾಗಿದೆ. ಬಡವರಿಗೆ ಉಪ್ಪು ದಾನ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link