ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ! ದಿನವಿಡೀ ಬ್ಲಡ್‌ ಶುಗರ್‌ ನಿಯಂತ್ರಣದಲ್ಲಿರುತ್ತದೆ..ಮತ್ತೆಂದೂ ಹೆಚ್ಚಾಗುವುದೇ ಇಲ್ಲ

Thu, 03 Oct 2024-11:23 am,

Blood Sugar Control Tips: ನಾವು ದಿನದಲ್ಲಿ ಸೇವಿಸುವ ಆಹಾರವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಬೆಳಿಗ್ಗೆ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ದಿನವಿಡೀ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ.   

ಸಕ್ಕರೆ ಕಾಯಿಲೆ ಎಂದರೆ ಊಹಿಸಲು ಆಗದ ಒಂದು ಸಮಸ್ಯೆ, ಶುಗರ್‌ ಇದ್ದವರಿಗೆ ಯಾವಾಗ ಇದರ ಲೆವೆಲ್‌ ಹೆಚ್ಚಾಗುತ್ತದೆ, ಯಾವಾಗ ಕಡಿಮೆಯಾಗುತ್ತೆ ಅಂತ ಗೆಸ್‌ ಮಾಡೋಕು ಕೂಡ ಸಾಧ್ಯವಾಗುವುದಿಲ್ಲ. ಅದರಿಂದ ಬೆಳಗ್ಗಿನ ಜಾಲ ನೀವು ಸೇವಿಸುವ ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವುದರಿಂದ ನೀವು ಮದೂಮೇಹವನ್ನು ಕಂಟ್ರೋಲ್‌ನಲ್ಲಿಡಬಹುದು.   

ನೀವು ಬೆಳಗ್ಗಿನ ಜಾವ ಸೇವಿಸುವ ಆಹಾರ ಮುಖ್ಯ ಪಾತ್ರ ವಹಿಸುತ್ತದೆ, ಅದು ನಿಮ್ಮ ದಿನಚರಿಯನ್ನು ಡಿಸೈಡ್‌ ಮಾಡುತ್ತದೆ, ಯಾಕೆಂದರೆ ಮಧುಮೇಹ ಸಮಸ್ಯೆ ಇರುವವರು, ಕೆಲವು ಆಹಾರಗಳನ್ನು ಸೇವಿಸುವುದರಿಂದ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡಬಹುದು, ಇದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ.   

ಬೆಳಗ್ಗಿನ ಜಾವ ಪ್ರೋಟೀನ್, ಉತ್ತಮ ಕೊಬ್ಬು, ನಾರಿನಂಶದಿಂದ ಕೂಡಿರುವ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ದಿನವೀಡಿ ನೀವು ಆರೋಗ್ಯವಾಗಿರಬಹುದು.   

ಯಕೃತ್ತಿನಲ್ಲಿ ಬೆಳಿಗ್ಗೆ ಗ್ಲೂಕೋಸ್ ಉತ್ಪತ್ತಿಯಾಗುವುದರಿಂದ, ದಿನವಿಡೀ ನೀವು ಶಕ್ತಿಯುತವಾಗಿರುವಂತೆ ಮಾಡುತ್ತದೆ, ಅತಿಯಾದ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ದಿನವಿಡೀ ತಲೆತಿರುಗುವಿಕೆ ಈ ಎಲ್ಲಾ ಸಮಸ್ಯೆಗಳು ಅಧಿಕ ರಕ್ತದ ಸಕ್ಕರೆಯ ಸಂಕೇತ.   

ಬೆಳಿಗ್ಗಿನ ಜಾವ ತುಪ್ಪದೊಂದಿಗೆ, ಚಿಟಿಕೆ ಅರಿಶಿನ ಪುಡಿಯನ್ನು ಬೆರಸಿ ಸೇವಿಸುವುದರಿಂದ, ಇದು ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ತುಪ್ಪವು ಮಧುಮೇಹಿಗಳಿಗೆ ಬಹಳ ಮುಖ್ಯವಾದ ಆಹಾರ ಪದಾರ್ಥವಾಗಿದೆ ಏಕೆಂದರೆ ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಕಷ್ಟು ಸಹಾಯ ಮಾಡುತ್ತದೆ.   

ಈ ರೀತಿ ತುಪ್ಪವನ್ನು ಹರಿಶಿಣದಲ್ಲಿ ಬೆರಸಿ ಸೇವಿಸುವುದರಿಂದ ಸಕ್ಕರೆಯ ಮಟ್ಟ ದಿನವಿಡೀ ಶುಗರ್‌ ಹೆಚ್ಚಾಗುವುದಿಲ್ಲ. ಈ ರೀತಿ ಬೆಳಗ್ಗಿನ ಜಾವ ಇದನ್ನು ಸೇವಿಸುವುದು ಉತ್ತಮ ದಿನವೂ ಬೆಳಗ್ಗೆ ಈ ರೀತಿ ತಪ್ಪದ ಜೊತೆ ಅರಿಶಿನವನ್ನು ಸೇವಿಸುವುದರಿಂದ ದಿನವಿಡೀ ನಮ್ಮ ದೇಹದಲ್ಲಿನ ಬ್ಲಡ್‌ ಶುಗರ್‌ ಕಂಟ್ರೋಲ್‌ನಲ್ಲಿರುತ್ತದೆ, ಮತ್ತೆಂದೂ ಅದು ಹೆಚ್ಚಾಗುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link