ಸಿಂಪಲ್‌ಸ್ಟಾರ್‌ಗೆ ತಪ್ಪದ ಸಂಕಷ್ಟ.. ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ಮೇಲೆ ಮತ್ತೊಂದು ದೂರು ದಾಖಲು!

Mon, 15 Jul 2024-10:18 am,

ರಿಷಬ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ನಟಿಸಿದ್ದರು.. 2016ರಲ್ಲಿ ತೆರೆಗೆ ಬಂದ ಈ ಸಿನಿಮಾ ಕಾಪಿರೈಟ್‌ ವಿಚಾರವಾಗಿ ವಿವಾದಕ್ಕೆ ಸಿಲುಕಿತ್ತು..   

 ಇದೀಗ ನಟ ರಕ್ಷಿತ್‌ ಶೆಟ್ಟಿ ಅವರು ನಿರ್ಮಿಸಿರುವ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿನ ʻಗಾಳಿಮಾತುʼ ಹಾಗೂ ʻನ್ಯಾಯ ಎಲ್ಲಿದೆʼ ಎಂಬ ಹಾಡನ್ನು ಕದ್ದಿರುವ ಆರೋಪದ ಜೊತೆಗೆ ನಟ ರಕ್ಷಿತ್‌ ಮೇಲೆ ದೂರು ದಾಖಲಾಗಿದೆ.  

 ‘ಒಮ್ಮೆ ನಿನ್ನನ್ನೂ ಕಣ್ತುಂತ ನೋಡುವಾಸೆ”.. ʻನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್.. ಈ ಹಾಡುಗಳನ್ನು ಕದ್ದಿದ್ದಾರೆ.. ಅನುಮತಿ ಇಲ್ಲದೇ ಬಳಕೆ ಮಾಡಿದ್ದಾರೆ ಎಂದು ಹಾಡುಗಳ ಕಾಪಿರೈಟ್ ಪಡೆದು ಮಾರಟ ಮಾಡುವ ಬ್ಯುಸಿನೆಸ್ ಮೆನ್ ನವೀನ್‌ರಿಂದ ಆರೋಪ ಕೇಳಿ ಬಂದಿದೆ..   

ಸದ್ಯ ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಿರಿಕ್ ಪಾರ್ಟಿ ಬಳಿಕ ಬ್ಯಾಚುಲರ್ ಪಾರ್ಟಿ ವಿವಾದ ಶುರುವಾಗಿದೆ.. ಹೀಗೆ ನಟ ರಕ್ಷಿತ್‌ ಶೆಟ್ಟಿ ಅವರಿಗೆ ತಪ್ಪದೇ ಕಾಡುತ್ತಿದೆ ಈ ಕಾಪಿರೈಟ್‌ ಸಂಕಷ್ಟ..   

ಇನ್ನು ಕಾಮಿಡಿ ಜಾನರ್‌ ಹೊಂದಿರುವ ಈ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜನವರಿ 26 ರಂದು ರಿಲೀಸ್‌ ಆಗಿತ್ತು.. ಇದರಲ್ಲಿ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾ‌ರ್, ನಟಿ ಸಿರಿ ರವಿಕುಮಾರ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.. ಅಲ್ಲದೇ ಈ ಬ್ಯಾಚುಲರ್ ಪಾರ್ಟಿ’ ಸಿನಿಮಾಗೆ  ಕಿರಿಕ್ ಪಾರ್ಟಿ ಸಿನಿಮಾದ ಬರಹಗಾರ ಅಭಿಜಿತ್ ಮಹೇಶ್ ಸಂಭಾಷಣೆ ಬರೆದಿದ್ದರು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link