ಶ್ರಾವಣದಲ್ಲಿ ಈ ರಾಶಿಯವರ ಮೇಲಿರಲಿದೆ ಲಕ್ಷ್ಮೀ ಕಟಾಕ್ಷ , ಕಂಡರಿಯದ ಮೂಲಗಗಳಿಂದಲೂ ಆಗುವುದು ಧನ ಲಾಭ ..!

Thu, 14 Jul 2022-12:14 pm,

ಮಿಥುನ ರಾಶಿ : ಶ್ರಾವಣ ಮಾಸವು ಮಿಥುನ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಹಣ ಸಿಗುತ್ತದೆ. ವಿವಾದಗಳು ಇತ್ಯರ್ಥವಾಗಲಿವೆ. ಅವಕಾಶ ಸಿಕ್ಕಾಗಲೆಲ್ಲಾ, ಅಗತ್ಯವಿರುವವರಿಗೆ ಸಹಾಯ ಮಾಡಿ. ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.  

ತುಲಾ ರಾಶಿ - ಈ ಸಮಯ ತುಲಾ ರಾಶಿಯವರಿಗೆ ಸ್ಥಾನ, ಧನ, ಪ್ರತಿಷ್ಠೆ ಎಲ್ಲವನ್ನೂ ತಂದುಕೊಡುತ್ತದೆ. ಲಕ್ಷ್ಮೀ ಕೃಪೆಯಿಂದ ಹಣ ಸಿಗುತ್ತದೆ. ಮತ್ತೊಂದೆಡೆ, ತಾಯಿ ಸರಸ್ವತಿಯ ಕೃಪೆಯಿಂದ, ಎಲ್ಲಾ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದು ಸಾಧ್ಯವಾಗುತ್ತದೆ. 

ಸಿಂಹ - ಶ್ರಾವಣ ಮಾಸವು ಸಿಂಹ ರಾಶಿಯವರಿಗೆ ಬಹಳ ಸಂತೋಷವನ್ನು ನೀಡುತ್ತದೆ.  ಇದ್ದಕ್ಕಿದ್ದಂತೆ ಯಾವುದೋ ಮೂಲದಿಂದ ಹಣ ಸಿಗುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ.

ಧನು ರಾಶಿ -  ಧನು ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ವಿಶೇಷ  ಆಶೀರ್ವಾದ ಇರುತ್ತದೆ. ಹೊಸ ಉದ್ಯೋಗವನ್ನು ಪಡೆಯಬಹುದು ಅಥವಾ ಬಡ್ತಿ ಪಡೆಯಬಹುದು. ಆದಾಯ ಹೆಚ್ಚಲಿದೆ. ಆಸ್ತಿ ಖರೀದಿ ಯೋಜನೆ ಪೂರ್ಣಗೊಳ್ಳಲಿದೆ.   

ಮೀನ ರಾಶಿ - ಈ ಮಾಸವು ಮೀನ ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ತರುತ್ತಿದೆ. ಹಣಕಾಸಿನ  ಪ್ರಯೋಜನವಾಗಲಿದೆ. ಕಾರೂ ಖರೀದಿ ಯೋಗ ಇರಲಿದೆ.  ಜನರಿಗೆ ಸಹಾಯ ಮಾಡುವ ಅಥವಾ ದಾನ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link