ಶ್ರಾವಣದಲ್ಲಿ ಶಿವಪೂಜೆ ಮಾಡುವಾಗ ಈ ಐದು ನಿಯಮಗಳನ್ನು ತಪ್ಪದೆ ಪಾಲಿಸಿ

Tue, 26 Jul 2022-12:05 pm,

ಶಿವಲಿಂಗಕ್ಕೆ ಕುದಿಸಿದ ಹಾಲಿನ ಅಭಿಷೇಕ ಮಾಡಬೇಡಿ. ಶಿವರಾತ್ರಿಯ ದಿನ ಶಿವನನ್ನು ಪ್ರತಿಷ್ಠಾಪಿಸುವಾಗ, ಹಾಲನ್ನು ಕುದಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಶಿವಲಿಂಗಕ್ಕೆ ಯಾವಾಗಲೂ ತಣ್ಣೀರು ಮತ್ತು ಹಸಿ ಹಾಲಿನಿಂದ ಅಭಿಷೇಕ ಮಾಡಬೇಕು.  

ಅರಿಶಿನವನ್ನು ಅರ್ಪಿಸಬಾರದು:  ಅರಿಶಿನವನ್ನು ಶಿವನಿಗೆ ಅರ್ಪಿಸುವುದಿಲ್ಲ. ಅರಿಶಿನವು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ್ದಾಗಿದ್ದು ಶಿವನಿಗೆ ಅರ್ಪಣೆ ಮಾಡಬಾರದು. ನೀವು ಹೀಗೆ ಮಾಡಿದರೆ ನಿಮ್ಮ ರಾಶಿಯಲ್ಲಿನ ಚಂದ್ರನು ದುರ್ಬಲನಾಗಲು ಪ್ರಾರಂಭಿಸುತ್ತಾನೆ.  

ಶಿವಲಿಂಗಕ್ಕೆ ತುಳಸಿಯನ್ನು ಅರ್ಪಿಸಬೇಡಿ: ವಿಷ್ಣುವು ತುಳಸಿಯನ್ನು ತನ್ನ ಪತ್ನಿಯಾಗಿ ಸ್ವೀಕರಿಸಿದ್ದಾನೆ. ಹೀಗಾಗಿ ಶಿವನಿಗೆ ತುಳಸಿಯಿಂದ ಅರ್ಪಿಸಿ ಪೂಜಿಸುವುದಿಲ್ಲ.   

ಪಾತ್ರೆಯು ತಾಮ್ರದಿಂದ ಮಾಡಿರಬೇಕು: ಶಿವನಿಗೆ ನೀರನ್ನು ಅರ್ಪಿಸುವಾಗ ತಾಮ್ರದ ಪಾತ್ರೆಯನ್ನು ಬಳಕೆ ಮಾಡಬೇಕು. ತಾಮ್ರದ ಪಾತ್ರೆಯಲ್ಲಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಲಾಗುತ್ತದೆ. ಹಿತ್ತಾಳೆಯ ಪಾತ್ರೆಯಿಂದ ಹಾಲು ನೈವೇದ್ಯವನ್ನು ಸಮರ್ಪಿಸಲಾಗುತ್ತದೆ. 

ಶಿವನಿಗೆ ಎಳ್ಳನ್ನು ಅರ್ಪಿಸಬೇಡಿ: ಎಳ್ಳು ಅಥವಾ ಎಳ್ಳಿನಂತಹ ವಸ್ತುವು ವಿಷ್ಣುವಿನ ಕೊಳಕಿನಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಇದನ್ನು ಶಿವನಿಗೆ ಅರ್ಪಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link