ದೀಪಾವಳಿಗೆ ಸರ್ಕಾರ ನೀಡಲಿದೆ ಉಚಿತ LPG ಸಿಲಿಂಡರ್!ತಕ್ಷಣ ಈ ರೀತಿ ಅಪ್ಲೈ ಮಾಡಿ !

Mon, 28 Oct 2024-9:38 am,

ದೀಪಾವಳಿಯಂದು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಸರ್ಕಾರ ಘೋಷಣೆ ಮಾಡಿದೆ.  ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ, ಅನಿಲ ಸಂಪರ್ಕ ಹೊಂದಿರುವವರಿಗೆ ದೀಪಾವಳಿಯಂದು ಉಚಿತ ಸಿಲಿಂಡರ್ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯನ್ನು ಘೋಷಿಸಿತು.ನಂತರ ಆಂಧ್ರಪ್ರದೇಶ ಮತ್ತು ಉತ್ತರಾಖಂಡ  ಸರ್ಕಾರ ಕೂಡಾ ದೀಪಾವಳಿಯಂದು ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸುವುದಾಗಿ ಘೋಷಿಸಿದೆ.  

ಹೋಳಿ ಮತ್ತು ದೀಪಾವಳಿಯಂದು ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಗಳನ್ನು  1 ಲಕ್ಷದ 84 ಸಾವಿರದ 39 ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್‌ನ ಪ್ರಯೋಜನವನ್ನು ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. 

ಈ ಪ್ರಯೋಜನವನ್ನು ಪಡೆಯಲು, ಸಂಪರ್ಕ ಹೊಂದಿರುವವರು ಗ್ಯಾಸ್ ಸಿಲಿಂಡರ್‌ನ ಸಂಪೂರ್ಣ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ.  ಮೂರ್ನಾಲ್ಕು ದಿನಗಳ ನಂತರ ಗ್ರಾಹಕರ ಬ್ಯಾಂಕ್ ಖಾತೆಗೆ ಮರುಪಾವತಿ ಮೊತ್ತವನ್ನು ವರ್ಗಾಯಿಸಲಾಗುತ್ತದೆ.  

ಈ ಯೋಜನೆಯ ಪ್ರಯೋಜನವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಾಗಿರುವ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ.ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರುವ ಗ್ರಾಹಕರಿಗೆ ಈಪ್ರಯೋಜನ ಸಿಗಲಿದೆ.    

eKYC ಮಾಡಿಲ್ಲ ಎಂದಾದರೆ ಸಂಬಂಧಿತ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ಮತ್ತು ಆಧಾರ್ ಪರಿಶೀಲನೆಯನ್ನು ಮಾಡಿಸಬಹುದಾಗಿದೆ. 

ಈ ಯೋಜನೆಗೆ ಅರ್ಜಿ ಸಲ್ಲಿಸಲು, ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ LPG ವಿತರಕರನ್ನು ಭೇಟಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಸರಕಾರ ಮಹಿಳೆಯರಿಗಾಗಿ ಈ ಯೋಜನೆ ಆರಂಭಿಸಿದೆ. ಅಗತ್ಯ ಷರತ್ತುಗಳನ್ನು ಪೂರೈಸಿದ ನಂತರ, ಈ ಸಂಪರ್ಕ ಸಿಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link