Friday Remedies: ಶುಕ್ರವಾರದ ದಿನ ಈ 5 ಕೆಲಸಗಳನ್ನು ಮಾಡಲೇಬಾರದು

Fri, 15 Sep 2023-8:34 am,

ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರವು ತಾಯಿ ಲಕ್ಷ್ಮಿಗೆ ಮೀಸಲಾದ ದಿನವಾಗಿದೆ. ಈ ದಿನ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ತುಂಬಾ ಪ್ರಾಶಸ್ತ್ರ್ಯವಾದ ದಿನ ಎಂದು ನಂಬಲಾಗಿಡ್ಡು, ಇಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಏನೂಡ್ ಹೇಳಲಾಗುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರದ ದಿನ ಕೆಲವು ಕೆಲಸಗಳನ್ನು ಮಾಡುವುದನ್ನು ಅಮಂಗಳಕರ ಎಂದು ಹೇಳಲಾಗುತ್ತದೆ. 

ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರದಂದು ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಶುಕ್ರವಾರದಂದು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಯೋಣ... 

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಶುಕ್ರವಾರ ಲಕ್ಷ್ಮಿ ಮನೆಗೆ ಬರುವ ದಿನ. ಹಾಗಾಗಿ, ಈ ದಿನ ಯಾರಿಗೂ ಕೂಡ ಹಣ ನೀಡಬಾರದು ಎಂದು ಹೇಳಲಾಗುತ್ತದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಾರದು. ಇದರಿಂದ ನಷ್ಟವಾಗಬಹುದು ಎಂದು ಹೇಳಲಾಗುತ್ತದೆ. 

ಶುಕ್ರವಾರವು ಶುಕ್ರ ಗ್ರಹಕ್ಕೆ ಸಂಬಂಧಿಸಿದ ದಿನವೂ ಆಗಿರುವುದರಿಂದ ಈ ದಿನ ಸಕ್ಕರೆ, ಅಕ್ಕಿ ಹೀಗೆ ಯಾವುದೇ ಬಿಳಿ ವಸ್ತುಗಳನ್ನು ದಾನ ಮಾಡುವುದನ್ನು ತಪ್ಪಿಸಬೇಕು.   

ಶುಕ್ರವಾರದ ದಿನ ಒಣಮೆಣಸಿನಕಾಯಿ, ದನಿಯಾ, ಸೇರಿದಂತೆ ಯಾವುದೇ ರೀತಿಯ ಮಸಾಲೆ ಪದಾರ್ಥಗಳನ್ನು ಖರೀದಿಸುವುದನ್ನು ತಪ್ಪಿಸಿ. 

ಶುಕ್ರವಾರದ ದಿನ ಮಾಂಸಾಹಾರ ಸೇವನೆಯನ್ನು ತಪ್ಪಿಸಬೇಕು. ಇಲ್ಲದಿದ್ದರೆ, ಇದು ಮನೆಯಲ್ಲಿ ಮಾನಸಿಕ ಉದ್ವಿಗ್ನತೆಗೆ ಕಾರಣವಾಗಬಹುದುಎ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link