ಕೇವಲ 11 ರೂ. ಜೇಬಿನಲ್ಲಿ ಇಟ್ಟುಕೊಂಡು ಒಂದು ಕಾಲದಲ್ಲಿ ತುತ್ತು ಊಟಕ್ಕೂ ಪರದಾಡಿದ್ದರಂತೆ ಈ ಸ್ಟಾರ್‌ ನಟ..! ಇಂದು ಕೋಟಿ ಆಸ್ತಿಯ ಒಡೆಯ

Sat, 17 Aug 2024-3:09 pm,

ಹಣೆ ಬರಹ ಎನ್ನುವುದೇ ಹಾಗೆ ಅಲ್ವಾ ಯಾವಗ ಯಾರ ಲಕ್‌ ಹೇಗೆ ಬದಲಾಗುತ್ತೆ ಎನ್ನುವುದನ್ನು ಊಹಿಸೋಕೆ ಆಗಲ್ಲ. ಇದಕ್ಕೆ ಉದಾಹರಣೆ ಈ ಸ್ಟಾರ್‌ ನಟನ ಜೀವನ, ಒಂದು ಕಾಲದಲ್ಲಿ ಕೇವಲ 11 ರೂ. ಜೇಬಿನಲ್ಲಿಟುಕೊಂಡು, ಊಟಕ್ಕೆ ಪರದಾಡಿದ್ದ ಈ ನಟ ಇಂದು ಕೋಟಿ ಆಸ್ತಿಯ ಸ್ಟಾರ್‌ ಹೀರೋ.

ಸಾಮಾನುವಾಗಿ ಜನರು ಸಿನಿಮಾದಲ್ಲಿ ನಟಿಸಬೇಕು ಎಂದರೆ ಹಲವು ವರ್ಷಗಳ ತಪಸ್ಸು ಮಾಡುತ್ತಾರೆ, ಸಿನಿಮಾದಲ್ಲಿ ಇಂದಲ್ಲ ನಾಳೆ ಒಂದು ಚ್ಯಾನ್ಸ್‌ ಸಿಕ್ಕೆ ಸಿಗುತ್ತದೆ ಎನ್ನುವ ನಂಬಿಕೆಯಿಂದ ಮನೆ ಮಟ ಎಲ್ಲವನ್ನೂ ತೊರೆದು ನಗರದ ಕಡೆಗೆ ಪ್ರಯಾನ ಮಾಡುತ್ತಾರೆ.  

ಸಾಮಾನ್ಯವಾಗಿ ಮೊದಲ ಸಂಬಳ ಎನ್ನುವುದು ಎಲ್ಲರಿಗೂ ತುಂಬಾ ವಿಶೇಷವಾದದ್ದು, ಮೊದಲ ಸಂಬಳದಲ್ಲಿ ಸಾಮಾನ್ಯವಾಗಿ ತಮ್ಮ ತಂದೆ ತಾಯಿಗೆ ವಿಶೇಷವಾದ ಉಡುಗೊರೆ ಕೊಳ್ಳುವುದುಂಟು ಆದರೆ ಈ ನಟ ಮೊದಲ ಸಂಬಳದಲ್ಲಿ ಕೊಂಡದ್ದು ಏನು ಅಂತಾ ಗೊತ್ತಾದರೆ ನೀವು ಶಾಕ್‌ ಆಗುತ್ತೀರಾ.  

ಅಷ್ಟಕ್ಕೂ ನಾವಿಂದು ಹೇಳುತ್ತಿರುವುದು ರಾಜ್‌ಕುಮಾರ್‌ ರಾವ್‌ ಅವರ ಬಗ್ಗೆ ಈ ನಟ ಸದ್ಯ ಶ್ರದ್ಧಾ ಕಪೂರ್‌ ಅವರೊಂದಿಗೆ ನಟಿಸಿರುವ ಸ್ತ್ರೀ 2 ಚಿತ್ರದ ಪ್ರಚಾರದಲ್ಲಿದ್ದಾರೆ.  

ಒಂದು ಹೊಸ ವಿಭಿನ್ನ ಪ್ರಯತ್ನದೊಂದಿಗೆ ರಾಜ್‌ಕುಮಾರ್‌ ಹಾಗೂ ಶ್ರದ್ಧ ಜೋಡಿ ಪ್ರೇಕ್ಷಕರನ್ನು ತೆರೆಯ ಮೇಲೆ ರಂಜಿಸಲು ಸಜ್ಜಾಗಿದ್ದಾರೆ.  

ಈ ಸಿನಿಮಾದ ಪರಚಾರದ ವೇಳೆ ತಮ್ಮ ಜೀವನದ ಕಹಿ ಘಟನೆಗಳ ಕುರಿತು ನಟ ನೆನಪಿಸಿಕೊಂಡಿದ್ದು, ತಾನು 11 ರೂ. ಜೇಬಿನಲ್ಲಿಟ್ಟುಕೊಂಡು ಒಂದು ಕಾಲದಲ್ಲಿ ಊಟಕ್ಕೂ ಪರದಾಡಿದ ಕಥೆಯನ್ನು ಹಂಚಿಕೊಂಡಿದ್ದಾರೆ.  

ಮೊದಲ ಸಂಬಳದಲ್ಲಿ ನಟ ತಾನು ಏನನ್ನು ಕರೀದಿಸಿದ್ದ ಎಂಬ ಶಾಕಿಂಗ್‌ ಮಾಹಿತಿಯನ್ನು ಬಿಚ್ಚಟ್ಟಿದ್ದು, ನಟ ಮೊದಲನೆ ಸಂಬಳದಲ್ಲಿ ದೇಸಿ ತುಪ್ಪವನ್ನು ಖರೀದಿಸಿದ್ದರಂತೆ.  

ಇತ್ತೀಚೆಗೆ ಶ್ರದ್ಧಾ ಕಪೂರ್‌ ಹಾಗೂ ರಾಜ್‌ಕುಮಾರ್‌ ಆಪ್ಕಾ ಅಪ್ನಾ ಝಾಕಿರ್‌ನ ಸಂಚಿಕೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಟರ ಮೊದಲ ಸಂಬಳದ ಕುರಿತು ನಿರೂಪಕರು ಕೇಳಿದ ಪ್ರಶ್ನೆಗೆ ನಟ ರಾಜ್‌ಕುಮಾರ್‌ ಭಾವುಕಾದರು.  

ಇದೇ ಸಂದರ್ಭದಲ್ಲಿ ಉತ್ತರಿಸಿದ ನಟ "ನಾನು ಪ್ರೌಡಶಾಲೆಯಲ್ಲಿದ್ದಾಗ ನಮ್ಮ ಮನೆಯ ಪರಿಸ್ಥಿತಿ ಅಷ್ಟೆನು ಚೆನ್ನಾಗಿರಲಿಲ್ಲ, ಏಳನೇ ವಯಸ್ಸಿನ ಹುಡುಗಿಗೆ ನಾನು ನೃತ್ಯ ಕಲಿಸಲು ಅವರ ಮನೆಗೆ ಹೋಗುತ್ತಿದೆ, ತಿಂಗಳಿಗೆ 300 ಸಂಬಳ ಕೊಡುತ್ತಿದ್ದರು. ಇದೇ ಸಂಪಾದನೆಯಲ್ಲಿ ಮನೆಯನ್ನು ಸಾಗಿಸಬೇಕಿತ್ತು".  

" ಮನೆಯಲ್ಲಿ ಇದ್ದ ಪರಿಸ್ಥಿತಿಯಲ್ಲಿ ನನಗೆ ಬಂದ ಮೊದಲ ಸಂಬಳದಲ್ಲಿ ನಾನು ಮನೆಗೆ ಬೇಕಾದಾ ದಿನಸಿಯನ್ನು ಖರೀದಿಸಿದ್ದೆ, ನಂತರ ಉಳಿದ ಹಣದಲ್ಲಿ ದೇಸಿ ತುಪ್ಪವನ್ನು ಖರೀದಿಸಿದ್ದೆ, ಆಗಿನ ಕಾಲಕ್ಕೆ ನಮ್ಮ ಮನೆಯಲ್ಲಿ ಇದ್ದ ಪರಿಸ್ಥಿತಿಗೆ ನಾವು ರೊಟ್ಟಿಗೆ ತುಪ್ಪ ಹಚ್ಚಿ ತಿನ್ನುವುದು ದೊಡ್ಡ ವಿಶಯವಾಗಿತ್ತು" ಎಂದು ತಮ್ಮ ಆ ಕಷ್ಟಕರ ದಿನಗಳನ್ನು ನೆನಪಿಸಿಕೊಂಡಿದ್ದಾರೆ.  

ಆಗ ಒಂದು ದಿನ ಊಟಕ್ಕೂ ಪರದಾಡಿದ್ದ ಈ ನಟ ಇಂದು ಸ್ಟಾರ್‌ ನಟ ಅಷ್ಟೆ ಅಲ್ಲ ಕೋಟಿ ಆಸ್ತಿಯ ಒಡೆಯ ಕೂಡ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link