ಇಂದಿನಿಂದ ಈ ರಾಶಿಯವರಿಗೆ ಒಲಿದು ಬರುವುದು ಅಷ್ಟೈಶ್ವರ್ಯ! ಬೆನ್ನಿಗೆ ನಿಲ್ಲುವುದು ಅದೃಷ್ಟ

Wed, 17 May 2023-9:00 am,

ಗುರು ಮತ್ತು ಚಂದ್ರನ ಸಂಯೋಗದಿಂದ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ಪ್ರಸ್ತುತ ದೇವಗುರು ಬೃಹಸ್ಪತಿ ಸ್ವರಾಶಿ ಮೀನ ರಾಶಿಯಲ್ಲಿದ್ದಾರೆ. ಇಂದು ಚಂದ್ರ ಕೂಡಾ ಸಂಕ್ರಮಿಸಿದ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಇದರಿಂದ ಮೇಷ ರಾಶಿಯಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತಿದೆ.ಈ ರಾಜಯೋಗ 3 ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ. 

ಗುರು ಮತ್ತು ಚಂದ್ರರು ಯಾವುದೇ ರಾಶಿಯಲ್ಲಿ ಸೇರಿದಾಗ ಗಜಕೇಸರಿ ರಾಜಯೋಗ ಉಂಟಾಗುತ್ತದೆ.  ಹೀಗೆ ಗಜ ಕೇಸರಿ ಯೋಗ ರೂಪುಗೊಂಡಾಗ ಕೆಲವು ರಾಶಿಯವರ ಅದೃಷ್ಟ ಬೆಳಗುತ್ತದೆ. ಕೆಲಸ ಕಾರ್ಯಗಳಲ್ಲಿ  ಅದ್ಭುತ, ಯಶಸ್ಸು, ಮತ್ತು ಸಂತೋಷದ ಜೀವನ ಪ್ರಾಪ್ತಿಯಾಗುತ್ತದೆ. ಗಜಕೇಸರಿ ಯೋಗವು ಈ ರಾಶಿಯವರಿಗೆ ಅದೃಷ್ಟವನ್ನು ಉಜ್ವಲಗೊಳಿಸುತ್ತದೆ . 

ಮೇಷ ರಾಶಿ : ಗಜಕೇಸರಿ ರಾಜಯೋಗವು ಮೇಷ ರಾಶಿಯವರಿಗೆ ಅಪಾರ ಲಾಭವನ್ನು ನೀಡುತ್ತದೆ. ಈ ಜನರು ಬಹಳಷ್ಟು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಹಣ ಪಡೆಯಲು ಹೊಸ ಮಾರ್ಗಗಳು  ಸೃಷ್ಟಿಯಾಗುತ್ತವೆ. ನೀವು ಮಾಡುವ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ.   

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕೂಡಾ ಗಜಕೇಸರಿ ಯೋಗ ಅದೃಷ್ಟದ ಬಾಗಿಲು ತೆರೆಯುತ್ತದೆ. ಈ ರಾಶಿಯವರು ಸಮಾಜದಲ್ಲಿ ಗೌರವ ಮತ್ತು ಖ್ಯಾತಿಯನ್ನು ಪಡೆಯುತ್ತಾರೆ. ಉನ್ನತ ಸ್ಥಾನಕ್ಕೆ ಏರುತ್ತಾರೆ. ಹೊಸ ಉದ್ಯೋಗ ಅಥವಾ ಬಡ್ತಿ ಪಡೆಯಬಹುದು. ಆದಾಯ ಹೆಚ್ಚಾಗಲಿದೆ. ಉದ್ಯಮಿಗಳಿಗೆ, ಈ ಸಮಯವು ದೊಡ್ಡ ಮಟ್ಟದ ಲಾಭವನ್ನು ನೀಡುತ್ತದೆ.   

ತುಲಾ ರಾಶಿ: ಗಜಕೇಸರಿ ಯೋಗವು ತುಲಾ ರಾಶಿಯವರಿಗೆ ಯಶಸ್ಸು ಮತ್ತು ಸಂಪತ್ತನ್ನು ನೀಡುತ್ತದೆ. ವ್ಯಾಪಾರ-ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ನಿರಂತರವಾಗಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುವುದು ಸಾಧ್ಯವಾಗುತ್ತದೆ. ನಿಮಗೇ ಗೊತ್ತಿಲ್ಲದ ಮೂಲದಿಂದ ಹಣ ಹರಿದು ಬರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link