Guru Gochar 2024: ಹನ್ನೆರಡು ವರ್ಷಗಳ ಬಳಿಕ ಯುವಾವಸ್ಥೆಯಲ್ಲಿ ಬೃಹಸ್ಪತಿಯ ನಡೆ, ಈ ಜನರ ಧನ-ಸಂಪತ್ತಿನಲ್ಲಿ ಭಾರಿ ಹೆಚ್ಚಳ!

Tue, 23 Jan 2024-5:57 pm,

Guru Yuvavasthe Movement 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಫೆಬ್ರುವರಿ 19ರಂದು ದೇವಗುರು ಬೃಹಸ್ಪತಿ ಯುವಾವಸ್ಥೆಗೆ ಪ್ರವೇಶಿಸಲಿದ್ದು, ಇದರಿಂದ ಕೆಲ ರಾಶಿಗಳ ಜನರಿಗೆ ಭಾಗ್ಯದ ಭಾರಿ ಬೆಂಬಲ ಸಿಗಲಿದ್ದು, ಅವರಿಗೆ ಅಪಾರ ಸಿರಿಸಂಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)  

ಮೇಷ ರಾಶಿ: ನಿಮ್ಮ ಜಾತಕದ ಭಾಗ್ಯ ಸ್ಥಾನಕ್ಕೆ ಗುರು ಅಧಿಪತಿಯಾಗಿದ್ದಾನೆ. ಇದರ ಜೊತೆಗೆ ಆತ ಲಗ್ನ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ನಿಮಗೆ ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಸಂತಾನ ಭಾಗ್ಯ ಪ್ರಾಪ್ತಿ ಕೂಡ ಆಗಬಹುದು. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಅಪಾರ ಬೆಂಬಲ ಪ್ರಾಪ್ತಿಯಾಗಲಿದೆ. ಜ್ಞಾನ ವೃದ್ಧಿಯೂ ಕೂಡ ಆಗಲಿದೆ.   

ಧನು ರಾಶಿ: ಗುರುವಿನ ಈ ಯುವಾವಸ್ಥೆ ಸಂಚಾರ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಗುರು ನಿಮ್ಮ ರಾಶಿಯ ರಾಶ್ಯಾಧಿಪನಾಗಿದ್ದಾನೆ. ಅರ್ಥಾತ್ ಸುಖ-ಸೌಕರ್ಯ ಹಾಗೂ ಆಸ್ತಿಪಾಸ್ತಿಯ ಅಧಿಪತಿಯಾಗಿ, ಪಂಚಮ ಭಾವದಲ್ಲಿ ಸ್ಥಿತನಾಗಿದ್ದಾನೆ. ಹೀಗಾಗಿ ಬುದ್ಧಿ ಈ ಅವಧಿಯಲ್ಲಿ ಸಾಕಷ್ಟು ತೀಕ್ಷ್ಣವಾಗಿರಲಿದೆ. ಸ್ವಾಭಿಮಾನದಿಂದ ಕೆಲಸ ತೆಗೆಯುವಲ್ಲಿ ನೀವು ಯಶಸ್ವಿಯಾಗುವಿರಿ. ನೀವು ಅಂದುಕೊಂಡ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ. ಗುರುವಿನ ಪಂಚಮ ದೃಷ್ಟ ಭಾಗ್ಯದ ಮೇಲೆ ನವಮ ದೃಷ್ಟಿ ಲಗ್ನ ಭಾವದ ಮೇಲೆ ಇರುವ ಕಾರಣ ವಕೀಲ, ಜೋತಿಷ್ಯ, ನ್ಯಾಯಾಧೀಶ, ಸಂಪಾದಕ, ಲೇಖಕ, ಶಿಕ್ಷಕ, ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಉತ್ತಮ ಲಾಭ ಸಿಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಸಮಯ ಅತ್ಯುತ್ತಮ ವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುವ ಬಲವಾದ ಸಂಕೇತಗಳಿವೆ.   

ಮೀನ ರಾಶಿ: ನಿಮ್ಮ ಜಾತಕದ ಕರ್ಮ ಹಾಗೂ ಸ್ಥಾನಮಾನ ಭಾವದ ಅಧಿಪತಿ ಗುರು ಆಗಿದ್ದು ಆತ ಧನ ಭಾವದಲ್ಲಿ ಸ್ಥಿತನಾಗಿರಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅಪಾರ ಆಕಸ್ಮಿಕ ಧನಲಾಭ ಉಂಟಾಗಲಿದೆ. ಧನ ಸಂಪತ್ತು ಹೆಚ್ಚಾಗಲಿದೆ,ತಂದೆ ತಾಯಿಯರ ಬೆಂಬಲ ಮತ್ತು ಆಶೀರ್ವಾದದಿಂದ ನೀವು ದಯಾಳು, ಪರೋಪಕಾರಿ, ಬುದ್ಧಿಶಾಲಿ, ಮಧುರಭಾಷಿಗಲಾಗಲಿದ್ದೀರಿ. ಇದರ ಜೊತೆಗೆ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಚೈತನ್ಯ ನೀವು ಕಾಣುವಿರಿ. ವೃತ್ತಿಯಲ್ಲಿ ಉನ್ನತಿಯ ಎಲ್ಲಾ ಸಂಕೇತಗಳು ಕಂಡುಬರುತ್ತಿವೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link