ಇನ್ನೊಂದೇ ತಿಂಗಳಲ್ಲಿ ಈ ರಾಶಿಯವರ ಜೀವನದಲ್ಲಿ ಒಲಿದು ಬರುವಳು ವಿಜಯಲಕ್ಷ್ಮೀ ! ತುಂಬಿ ತುಳುಕುವುದು ಸುಖ ಸಂಪತ್ತು

Fri, 28 Jul 2023-9:50 am,

ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾದ ದೇವಗುರು  ಶೀಘ್ರದಲ್ಲೇ ತನ್ನ ನಡೆಯನ್ನು ಬದಲಿಸಲಿದ್ದಾನೆ. ಗುರುವು ಸೆಪ್ಟೆಂಬರ್ 4 ರಂದು ಹಿಮ್ಮುಖವಾಗಿ ಚಲಿಸಲು ಆರಂಭಿಸಲಿದೆ. ಗುರುಗ್ರಹದ  ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದೆ. ವಕ್ರಿ ಗುರುವಿನ ಪ್ರಭಾವದಿಂದ ಜೀವನದಲ್ಲಿ ಧನ ಸಂಪತ್ತು ಹೆಚ್ಚಲಿದೆ.   

ಮೇಷ ರಾಶಿಯವರ ಮೇಲೆ ಗುರುವಿನ ವಿಶೇಷ ಕೃಪೆ ಇರುತ್ತದೆ. ಗುರುವಿನ ಹಿಮ್ಮುಖ ಚಲನೆ ಆರಂಭವಾದಾಗ ಈ ರಾಶಿಯವರಿಗೆ ಗೆಲುವು ಸಿಗುವುದು.  ಆರ್ಥಿಕ ಪ್ರಗತಿಯ ಸಾಧ್ಯತೆಗಳಿವೆ. ಇದ್ದಕ್ಕಿದ್ದಂತೆ ದೊಡ್ಡ ಮಟ್ಟದ ಲಾಭವಾಗುವುದು. ಇದರಿಂದ ಮನೆಯಲ್ಲಿ ಸಂತೋಷದ ವಾತಾವರಣ ನೆಲೆಯಾಗುವುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. 

ದೇವಗುರು ಗುರುವಿನ ಹಿಮ್ಮುಖ ಚಲನೆಯು ಮಿಥುನ ರಾಶಿಯವರಿಗೆ ಹೊಸ ಅವಕಾಶಗಳನ್ನು ನೀಡಲಿದೆ. ಈ ರಾಶಿಯವರಿಗೆ ಸರ್ಕಾರಿ ನೌಕರಿ ಸಿಗುತ್ತದೆ. ಲಕ್ಷ್ಮೀ ದೇವಿಯು ಈ ರಾಶಿಯವರ ಮೇಲೆ ವಿಶೇಷ ದಯೆ ತೋರುತ್ತಾಳೆ. ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಗುರುವು  ಮಿಥುನ ರಾಶಿಯ ಆದಾಯದ ಅರ್ಥದಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಈ ರಾಶಿಯವರ ಆದಾಯ ಹೆಚ್ಚಳವಾಗುವ ಸೂಚನೆಗಳಿವೆ. 

ಗುರುವಿನ ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ, ಸಿಂಹ ರಾಶಿಯವರ ಅದೃಷ್ಟವೇ ಬದಲಾಗುವುದು. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಶು ಕಟ್ಟಿಟ್ಟ ಬುತ್ತಿ. ಹೆಜ್ಜೆ ಹೆಜ್ಜೆಗೂ ಅದೃಷ್ಟ ಇವರ ಕೈ ಹಿಡಿಯಲಿದೆ. ಈ ಅವಧಿಯಲ್ಲಿ ಮನಸ್ಸಿನ ಎಲ್ಲಾ ಆಸೆಗಳು ಬಹುತೇಕ ಈಡೇರುತ್ತವೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರು ಉತ್ತಮ ಉದ್ಯೋಗದ ಅವಕಾಶ ಪಡೆಯುವರು.   

ಗುರುವಿನ ನಡೆ ಬದಲಾವಣೆಯೊಂದಿಗೆ ಈ ರಾಶಿಯವರು ಹಠಾತ್ ಹಣವನ್ನು ಪಡೆಯುತ್ತಾರೆ. ಇದು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಕೆಲಸದ ಸ್ಥಳದಲ್ಲಿ ಸ್ಥಾನಮಾನ ಮತ್ತು ಗೌರವ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳಿರುತ್ತವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link