Hanuman Jayanti 2022: ಹನುಮ ಜಯಂತಿಯ ದಿನ ಈ 5 ಕೆಲಸಗಳನ್ನು ಮಾಡಲು ಮರೆಯಬೇಡಿ, ಜೀವನದ ಎಲ್ಲಾ ಸಂಕಷ್ಟ ಪರಿಹಾರವಾಗುತ್ತದೆ

Sat, 09 Apr 2022-3:47 pm,

1. ನಕಾರಾತ್ಮಕ ಶಕ್ತಿ ತೊಲಗಿಸಲು ಏನು ಮಾಡಬೇಕು - ಧಾರ್ಮಿಕ ನಂಬಿಕೆಗಳ ಪ್ರಕಾರ ಹನುಮ ಜಯಂತಿಯ ದಿನ ಹನುಮಂತದ ದೋಹಾ ಪಠಿಸುವವರ ಹತ್ತಿರ ಭೂತ, ಪ್ರೇತ ಹಾಗೂ ನಕಾರಾತ್ಮಕ ಶಕ್ತಿಗಳು ಸುಳಿಯುವುದಿಲ್ಲ. ಹೀಗಾಗಿ 'ಬೂತ-ಪ್ರೇತ ನಿಕಟ ನಹಿ ಆವೆ, ಮಹಾವೀರ ಜಬ ನಾಮ ಸುನಾವೆ' ಪಠಿಸಿ.  

2. ಭಯವನ್ನು ದೂರಗೊಳಿಸಲು ಈ ಕೆಲಸ ಮಾಡಿ - ಹಲವು ಬಾರಿ ಜನರಿಗೆ ಕೆಲ ಸಂಗತಿಗಳ ಭಯ ಕಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹನುಮ ಜಯಂತಿಯ ದಿನ ಬೆಳಗ್ಗೆ ಆಂಜನೇಯ ಸ್ವಾವಿ ದೇವಸ್ಥಾನಕ್ಕೆ ತೆರಳಿ 1100 ಬಾರಿ ಈ ಕೆಳಗೆ ನೀಡಲಾಗಿರುವ ಮಂತ್ರವನ್ನು ಜಪಿಸಿ. ಜಪಕ್ಕೆ ರುದ್ರಾಕ್ಷ ಮಾಲೆಯನ್ನು ಉಪಯೋಗಿಸಿ. ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತವೆ. ಮಂತ್ರ - ಓಂ ಹಂ ಹನುಮಂತಯೇನಮಃ   

3. ರೋಗಗಳಿಂದ ಮುಕ್ತಿಪಡೆಯಲು - ಕೆಲ ಜನರಿಗೆ ಪದೇ ಪದೇ ಅನಾರೋಗ್ಯ ಕಾಡುತ್ತದೆ. ಹೀಗಿರುವಾಗ ಹನುಮ ಜಯಂತಿಯ ದಿನ ಈ ಕೆಳಗೆ ನೀಡಲಾಗಿರುವ ಚೌಪಾಯಿಯನ್ನು ಪಠಿಸಿ. ಇದಲ್ಲದೆ ನಿಯಮಿತವಾಗಿ ಈ ಚೌಪಾಯಿಯನ್ನು ಪಠಿಸುವವರ ಮೇಲೆ ಹನುಮನ ವಿಶೇಷ ಕೃಪೆ ಇರುತ್ತದೆ. ಚೌಪಾಯಿ - 'ನಾಸೌ ರೋಗ ಹರೈ ಸಬ್ ಪೀರಾ, ಜಪತ್ ನಿರಂತರ ಹನುಮತ ಬೀರಾ'  

4. ಇಷ್ಟಾರ್ಥ ಸಿದ್ಧಿಗಾಗಿ ಈ ಕೆಲಸ ಮಾಡಿ -  ಯಾವುದೇ ಒಂದು ವಿಶಿಷ್ಟ ಮನೋಕಾಮನೆ ಪೂರ್ತಿಗಾಗಿ ಹನುಮಾನ ಜಯಂತಿಯ ದಿನ 'ಓಂ ಮಹಾಬಲಾಯ ವಿರಾಯ ಚೀರಂಜೀವಿನ ಉದ್ದತೆ, ಹರಿಣೆ ವಜ್ರ ದೇಹಾಯ ಚೋಲಾಂಗ್ಧಿತ್ ಮಹಾವ್ಯಯೇ' ಈ ಮಂತ್ರವನ್ನು 108 ಬಾರಿ ಜಪಿಸಿ.

5. ವಿದ್ಯೆ ಹಾಗೂ ಜ್ಞಾನ ಪ್ರಾಪ್ತಿಗಾಗಿ ಈ ಕೆಲಸ ಮಾಡಿ -ವಿದ್ಯಾರ್ಥಿಗಳು ಶ್ರೀ ಆಂಜನೇಯನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ಹನುಮಾನ ಜಯಂತಿಯ ದಿನ ಹನುಮಾನ್ ಚಾಲಿಸಾ ಪಠಿಸಬೇಕು. ನಂಬಿಕೆಗಳ ಪ್ರಕಾರ, ಈ ರೀತಿ ಮಾಡುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆ ಹಾಗೂ ಶಿಕ್ಷಣದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಮಂತ್ರ - ವಿದ್ಯಾವಾನ ಗುಣಿ ಅತಿ ಚತುರ ರಾಮ ಕಾಜ ಕರಿಬೇಕೋ ಆತುರ'

ZEENEWS TRENDING STORIES

By continuing to use the site, you agree to the use of cookies. You can find out more by Tapping this link