ನಾಯಕತ್ವ ಕೈ ತಪ್ಪಿದ ಕೋಪ..ಗಂಭೀರ್‌ ಮೇಲೆ ಕೊನೆಗೂ ಸೇಡು ತೀರಿಸಿಕೊಂಡೇ ಬಿಟ್ರು ಹಾರ್ದಿಕ್‌ ಪಾಂಡ್ಯ..!

Mon, 29 Jul 2024-7:57 am,

ಭಾರತ ಟಿ20 ತಂಡದ ನೂತನ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕವಾಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಅನಿರೀಕ್ಷಿತವಾಗಿ ನಾಯಕನ ಪಟ್ಟ ನೀಡಿ ಪಟ್ಟಾಭಿಷೇಕ ಮಾಡಲಾಯಿತು. ಇದರಿಂದ ಹಾರ್ದಿಕ್ ಪಾಂಡ್ಯ ಮಾನಸಿಕವಾಗಿ ನೊಂದಿದ್ದಾರೆ ಎನ್ನಲಾಗಿದೆ. 

ಆದರೆ ಶ್ರೀಲಂಕಾ ಟಿ20 ಸರಣಿಗೆ ಶ್ರೀಲಂಕಾಗೆ ಬಂದು ಇಳಿದಾಗ ವಿಮಾನ ನಿಲ್ಧಾಣದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹಾರ್ದಿಕ್ ಪಾಂಡ್ಯ ಅಪ್ಪಿಕೊಂಡಿದ್ದರು, ಇವರಿಬ್ಬರ ಸ್ನೇಹ ನೋಡಿ ಅಭಿಮಾನಿಗಳು ಶ್ಲಾಘಿಸಿದರು. ಭಾರತ ತಂಡದ ವಿಶ್ರಾಂತಿ ಕೊಠಡಿಯ ವಾತಾವರಣಕ್ಕೆ ಧಕ್ಕೆಯಾಗುವುದಿಲ್ಲ ಎಂದು ಅಭಿಮಾನಿಗಳು ನಿರಾಳರಾಗಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಪ್ರದರ್ಶನ ನೋಡಿ ತೀವ್ರ ಟೀಕೆ ವ್ಯಕ್ತವಾಗಿದೆ.  

ಏಕೆಂದರೆ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ವಿಫಲರಾಗಿದ್ದರು. ಇದಾದ ನಂತರ ನಾಯಕ ಸೂರ್ಯಕುಮಾರ್ ಯಾದವ್ ಹಾರ್ದಿಕ್ ಪಾಂಡ್ಯ ಅವರನ್ನು ಬೌಲಿಂಗ್‌ಗೆ ಕರೆದು ಬಾಲ್ ನೀಡಿದರು. ಆ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಒಟ್ಟು 10 ಎಸೆತಗಳನ್ನು ಎಸೆದಿದ್ದು ಆಘಾತ ಉಂಟು ಮಾಡಿದೆ. ಮೊದಲ ಎಸೆತದಲ್ಲಿ ಒಂದು ರನ್ ಮತ್ತು ನಂತರದ 2 ಎಸೆತಗಳು ವೈಡ್ ಆಗಿದ್ದವು. ನಂತರ ಮತ್ತೆ 2ನೇ ಎಸೆತದಲ್ಲಿ ರನ್ ಸೇರಿಸಿದಾಗ 3ನೇ ಎಸೆತ ಮತ್ತೆ ವೈಡ್ ಆಯಿತು.  

ನಂತರ 3ನೇ ಎಸೆತದಲ್ಲಿ ಕುಸಾಲ್ ಪೆರೇರಾ ಸಿಕ್ಸರ್ ಬಾರಿಸಿದ್ದು, 4ನೇ ಎಸೆತ ಮತ್ತೆ ವೈಡ್ ಆಗಿತ್ತು. ಇದರಿಂದ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳು ಉದ್ವಿಗ್ನಗೊಂಡರು. ನಂತರ ಅವರು ಮುಂದಿನ 3 ಎಸೆತಗಳಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟರು. ಹಾರ್ದಿಕ್ ಪಾಂಡ್ಯ ಈ ಓವರ್‌ನಲ್ಲಿ 10 ಎಸೆತಗಳನ್ನು ಎಸೆದು, ಒಟ್ಟು 15 ರನ್ ನೀಡಿದರು.  

ಇದರಿಂದಾಗಿ ಸೂರ್ಯಕುಮಾರ್ ಯಾದವ್ ಗೆ ನಾಯಕತ್ವ ಕೊಟ್ಟದ್ದು ಇಷ್ಟವಾಗದ ಕಾರಣ ಹಾರ್ದಿಕ್ ಪಾಂಡ್ಯ ಈ ರೀತಿಯ ಆಟ ಆಡುತ್ತಿದ್ದಾರೆ ಎನ್ನುವ ಟೀಕೆಗಳು ಹುಟ್ಟಿಕೊಂಡಿವೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link