ಕುಬೇರನ ಆಶೀರ್ವಾದಕ್ಕಾಗಿ ಇಲ್ಲಿದೆ ತುಳಸಿ ಮಂಜರಿಯ ಪರಿಹಾರ

Wed, 21 Dec 2022-10:48 am,

ಮನೆಯಲ್ಲಿ ಜಗಳ ಜಂಜಾಟಗಳಿಂದ ಮುಕ್ತಿ ಪಡೆಯಲು ತುಳಸಿ ಪರಿಹಾರ: ಮನೆಯಲ್ಲಿ ಪ್ರತಿನಿತ್ಯ ಜಗಳ-ಜಂಜಾಟಗಳಿಂದ ತೊಂದರೆಯಿಂದ ಮನಸ್ಥಾಪ ಉಂಟಾಗುತ್ತಿದ್ದರೆ ಶುಭದಿನದಂದು ತುಳಸಿ ಎಲೆಗಳನ್ನು ಕಿತ್ತು ಗಂಗಾಜಲದಲ್ಲಿ ಹಾಕಿ, ನಂತರ ಆ ಜಲವನ್ನು ಇಡೀ ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಪ್ರೋಕ್ಷಣೆ ಮಾಡಿ. ಇದರಿಂದ ಮನೆಯಲ್ಲಿ ಜಗಳ ಜಂಜಾಟಗಳಿಂದ ಮುಕ್ತಿ ದೊರೆಯಲಿದೆ.

ಹಣದ ಕೊರತೆ ನಿವಾರಿಸಲು ಪರಿಹಾರ :  ತುಳಸಿ ಮಂಜರಿಯನ್ನು ಭಗವಾನ್ ವಿಷ್ಟು ಮತ್ತು ತಾಯಿ ಲಕ್ಷ್ಮಿಗೆ ಅರ್ಪಿಸಿ, ನಂತರ ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು  ನಿಮ್ಮ ಮನೆಯಲ್ಲಿ ನೀವು ಹಣ ಇಡುವ ಜಾಗದಲ್ಲಿ  ಇರಿಸಿ. ಇದರಿಂದ ವರ್ಷವಿಡೀ ಹಣಕ್ಕೆ ಕೊರತೆ ಆಗುವುದಿಲ್ಲ. 

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪರಿಹಾರ : ಹೊಸ ವರ್ಷದ ಮೊದಲ ಶುಕ್ರವಾರದಂದು ಲಕ್ಷ್ಮಿ ದೇವಿಗೆ ತುಳಸಿ ಮಂಜರಿಯನ್ನು ಅರ್ಪಿಸಿ. ಇದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಹಾಯಕವಾಗಲಿದೆ.

ಸುಖ ದಾಂಪತ್ಯ ಜೀವನಕ್ಕೆ ಪರಿಹಾರ: ಸುಖ ದಾಂಪತ್ಯ ಜೀವನಕ್ಕಾಗಿ ಹೊಸ ವರ್ಷದ ಮೊದಲ ದಿನದಂದು ಶಿವಲಿಂಗಕ್ಕೆ ತುಳಸಿ ಮಂಜರಿಯನ್ನು ಅರ್ಪಿಸಿ. ವಾಸ್ತವವಾಗಿ, ಗಣೇಶನಿಗೆ ಹಾಗೂ ಶಿವನಿಗೆ ತುಳಸಿಯನ್ನು ಅರ್ಪಿಸಲಾಗುವುದಿಲ್ಲ. ಆದರೆ, ತುಳಸಿ ಮಂಜರಿಯನ್ನು ಅರ್ಪಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.

ಪುರಾಣಗಳ ಪ್ರಕಾರ, ತುಳಸಿಯಲ್ಲಿ ಹೆಚ್ಚು ಮಂಜರಿ ಬರುತ್ತಿದೆ ಎಂದರೆ ಅದು ತುಳಸಿ ಮಾತೆಯ ಅತೃಪ್ತಿಯ ಸಂಕೇತ. ಅಷ್ಟೇ ಅಲ್ಲ ಇದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ, ತುಳಸಿಯಲ್ಲಿ ಹೆಚ್ಚು ಮಂಜರಿ ಇದ್ದರೆ ಆಗಾಗ್ಗೆ ಅದನ್ನು ತೆಗೆಯುತ್ತಿರಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link