ಜೂನ್ 2024 ರಲ್ಲಿ ಶನಿ ಬದಲಾಯಿಸಲಿದ್ದಾನೆ ಈ ಜನರ ಅದೃಷ್ಟ, ನೌಕರಿ-ವ್ಯಾಪಾರದಲ್ಲಿ ಉನ್ನತಿಯ ಜೊತೆಗೆ ಲಗ್ಜರಿ ಲೈಫ್ ಕರುಣಿಸಲಿದ್ದಾನೆ!

Sat, 18 Nov 2023-5:36 pm,

Horoscope 2024:ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸವರ್ಷದಲ್ಲಿ ಶನಿ ತನ್ನ ರಾಶಿಯನ್ನು ಪರಿವರ್ತಿಸುತ್ತಿಲ್ಲ. ಆದರೆ ಆತನ ನಡೆ ಮಾತ್ರ ಬದಲಾವಣೆಯಾಗಲಿದೆ. ಹೌದು ಜೂನ್ ತಿಂಗಳಿನಲ್ಲಿ ಶನಿ ತನ್ನ ವಕ್ರನಡೆಯನ್ನು ಅನುಸರಿಸಲಿದ್ದು, ಕೆಲ ರಾಶಿಗಳ ಜನರಿಗೆ ನೌಕರಿ ವ್ಯಾಪಾರದಲ್ಲಿ ಉನ್ನತಿಯ ಜೊತೆಗೆ ಲಗ್ಜರಿ ಲೈಫ್ ಕರುಣಿಸಲಿದ್ದಾನೆ. (Spiritual News In Kannada)

ಮಿಥುನ ರಾಶಿ: ಕರ್ಮ ಫಲದಾತ ಶನಿಯ ಈ ವಕ್ರ ನಡೆಯಿಂದ ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ವೃತ್ತಿ-ವ್ಯಾಪಾರದಲ್ಲಿ ಉನ್ನತಿಯಾಗಲಿದೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ ಆಕಸ್ಮಿಕ ಧನಲಾಭದ ಸಂಕೇತಗಳು ಕಂಡುಬರುತ್ತಿವೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ವಿದೇಶಕ್ಕೆ ಹೋಗುವ ಅವಕಾಶ ಸಿಗುವ ಸಾಧ್ಯತೆ ಇದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಪರಿಶ್ರಮದ ಸಂಪೂರ್ಣ ಫಲ ನಿಮಗೆ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಂತಸದ ವಾತಾವರಣ ಇರಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳುವುದಲ್ಲದೆ ಆಕಸ್ಮಿಕ ಧನಪ್ರಾಪ್ತಿಯಾಗಬಹುದು. 

ಸಿಂಹ ರಾಶಿ: ಶನಿಯ ಈ ವಕ್ರನಡೆ ನಿಮಗೆ ಅಪಾರ ಯಶಸ್ಸನ್ನು ತಂದುಕೊಡಲಿದೆ. ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹೊಸ ಬಿಸ್ನೆಸ್ ಆರಂಭಿಸಲು ಯೋಚಿಸುತ್ತಿದ್ದರೆ, ಈ ಅವಧಿ ನಿಮಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ನಿಮ್ಮ ಕೆಲಸಕ್ಕೆ ಮನ್ನಣೆ ಸಿಗಲಿದೆ. ನಿಮ್ಮ ಕೆಲಸದ ಮೇಲೆ ಹಿರಿಯ ಅಧಿಕಾರಿಗಳು ಫಿದಾ ಆಗಲಿದ್ದು ಪ್ರಮೋಷನ್ ಸಿಗುವ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ಇದರೊಂದಿಗೆ ಹೊಸ ಜವಾಬ್ದಾರಿ ಕೂಡ ನಿಮಗೆ ಸಿಗುವ ಸಾಧ್ಯತೆ ಇದೆ. ಬಿಸ್ನೆಸ್ ಕುರಿತು ಹೇಳುವುದಾದರೆ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಕುಟುಂಬದ ಜೊತೆಗೆ ಉತ್ತಮ ಕಾಲ ಕಳೆಯುವಿರಿ. 

ತುಲಾ ರಾಶಿ: ಶನಿಯ ಈ ವಕ್ರ ನಡೆ ನಿಮ್ಮ ಪಾಲಿಗೆ ವಿಶೇಷ ಲಾಭಗಳನ್ನು ತರಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ ಸಾಕಷ್ಟು ಲಾಭ ಸಿಗುವ ಸಂಕೇತಗಳಿವೆ. ಜೂನ್ ಬಳಿಕ ಪ್ರಮೋಷನ್ ಜೊತೆಗೆ ಇಂಕ್ರಿಮೆಂಟ್ ಸಿಗಲಿದೆ. ನಿಮ್ಮ ಕೆಲಸದಿಂದ ಹಿರಿಯ ಅಧಿಕಾರಿಗಳು ಪ್ರಸನ್ನಗೊಂಡು, ನಿಮಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಎದುರಾಗಿದ್ದ ಎಲ್ಲಾ ಅಡೆತಡೆಗಳು ನಿವಾರಣೆಯಗಲಿವೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ. ಧನಲಾಭ ಉಂಟಾಗುವ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ಮಕ್ಕಳ ಕಡೆಯಿಂದ ದೊಡ್ಡ ಸಂತಸದ ಸುದ್ದಿ ನಿಮಗೆ ಸಿಗುವ ಸಾಧ್ಯತೆ ಇದೆ. ಜೀವನದಲ್ಲಿ ನೀವು ಯಾವ ಕೆಲಸದಲ್ಲಿ ಪರಿಶ್ರಮ ಪಡುವಿರೊ ಅದರಲ್ಲಿ ನಿಮಗೆ ಯಶಸ್ಸು ಸಿಗುವ ಸಾಧ್ಯತೆಗಳಿವೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಒದಗಿ ಬರಲಿವೆ.  

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link