ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಿಚ್ಚ ಸುದೀಪ್‌ ‘ವಿಕ್ರಾಂತ್ ರೋಣ’ ಹವಾ ಹೆಂಗಿತ್ತು..?

Sun, 17 Jul 2022-12:12 am,

ಜುಲೈ 28ಕ್ಕೆ ಅಭಿನಯ ಚಕ್ರವರ್ತಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗಲಿದ್ದು, ಕೌಂಟ್‌ಡೌನ್‌ ಶುರುವಾಗಿದೆ. ಕಿಚ್ಚ ಸುದೀಪ್‌ ಅಭಿಮಾನಿಗಳು ಸಂಭ್ರಮಾಚರಣೆಗೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ.

ಒಟ್ಟಾರೆ ಹೇಳೋದಾದರೆ ಸ್ಯಾಂಡಲ್‌ವುಡ್‌ ಪಾಲಿಗೆ  ‘ವಿಕ್ರಾಂತ್ ರೋಣ’ ಚಿತ್ರ ಮತ್ತೊಂದು ಇತಿಹಾಸ ಸೃಷ್ಟಿಸೋದು ಪಕ್ಕಾ. ಹೀಗಾಗಿ  ‘ವಿಕ್ರಾಂತ್ ರೋಣ’ ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಕನ್ನಡಿಗರು ಸಜ್ಜಾಗಿದ್ದಾರೆ

ಅಂದಹಾಗೆ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ ಒಂದು ಹಾಲಿವುಡ್‌ ಬಾಗಿಲು ಬಡಿದು ಸಂಚಲನ ಸೃಷ್ಟಿಸುತ್ತಿದೆ. ‘ವಿಕ್ರಾಂತ್ ರೋಣ’ ಆಂಗ್ಲರಿಗೂ ಕನ್ನಡ ಚಿತ್ರಗಳ ತಾಕತ್ತು ತೋರಿಸಲು ಸಜ್ಜಾಗಿದೆ. ಇಂತಹ ಬಹುನಿರೀಕ್ಷಿತ ಸಿನಿಮಾದ 3ನೇ ಹಾಡು ಸಖತ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದು, ಯುಟ್ಯೂಬ್‌ ಸೇರಿದಂತೆ ಸೋಷಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ‘ರಕ್ಕಮ್ಮ’ ಬಳಿಕ ‘ರಾಜಕುಮಾರಿ’ ಹಾಡು ರಿಲೀಸ್‌ ಆಗಿತ್ತು. ಇದೆಲ್ಲದರ ಬಳಿಕ ‘ವಿಕ್ರಾಂತ್ ರೋಣ’ ಸಿನಿಮಾದ 3ನೇ ಹಾಡು ‘ಹೇ ಫಕೀರ’ ರಿಲೀಸ್‌ ಆಗಿದ್ದು, ಅಭಿನಯ ಚಕ್ರವರ್ತಿ ಸುದೀಪ್‌ ಅಭಿಮಾನಿಗಳ ಕಾತುರ ಮತ್ತಷ್ಟು ಹೆಚ್ಚಾಗಿದೆ. ಇದರ ಜೊತೆಗೆ ನಟ ಸುದೀಪ್‌ ಮತ್ತು ತಂಡ ಭರ್ಜರಿಯಾಗಿ ಪ್ರಮೋಷನ್‌ ನಡೆಸಿದೆ.

ಅಂದಹಾಗೆ ಜುಲೈ 28ಕ್ಕೆ ವಿಕ್ರಾಂತ್‌ ರೋಣ ಜಗತ್ತಿನಾದ್ಯಂತ ಸಾವಿರಾರು ಸ್ಕ್ರೀನ್‌ ಮೇಲೆ ಮೂಡಿಬರಲಿದೆ. ಅದ್ಧೂರಿಯಾಗಿ ಹಾಲಿವುಡ್‌ಗೂ ಎಂಟ್ರಿ ಕೊಡುತ್ತಿದೆ ಕನ್ನಡಿಗರ ಹೆಮ್ಮೆಯ ಕನ್ನಡ ಸಿನಿಮಾ. ಹೀಗೆ ‘ವಿಕ್ರಾಂತ್ ರೋಣ’  ನೂರಾರು ದಾಖಲೆ ಪುಡಿಪುಡಿ ಮಾಡಲು ಸಿದ್ಧವಾಗಿದ್ದು, ಈ ಸಂದರ್ಭದಲ್ಲಿ ಪ್ರಮೋಷನ್‌ ಕಾರ್ಯಗಳು ಕೂಡ ಭರದಿಂದ ಸಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಮೋಷನ್ ಜಬರ್ದಸ್ತ್ ಆಗಿದೆ. 13 ವರ್ಷ‌ಗಳ ನಂತರ ಕಿಚ್ಚ ಸುದೀಪ್‌ ರಾಷ್ಟ್ರ ರಾಜಧಾನಿ ದೆಹಲಿಗೆ ವಿಸಿಟ್‌ ಕೊಟ್ಟು ಹವಾ ಎಬ್ಬಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link