ಈ 5 ಕೆಲಸಗಳನ್ನು ಮಾಡಿದರೆ ಜೀವನದುದ್ದಕ್ಕೂ ಸಿಗಲಿದೆ ಗಣೇಶನ ಆಶೀರ್ವಾದ

Wed, 22 Dec 2021-11:23 am,

ಗಣೇಶನಿಗೆ ಹಸಿರು ಗರಿಕೆ ಎಂದರೆ ಇಷ್ಟ. ಜೀವನದಲ್ಲಿ ಯಾವುದೂ ಮಂಗಳಕರವಾಗಿಲ್ಲದಿದ್ದರೆ,  ಬುಧವಾರದಂದು, ಗಣೇಶನಿಗೆ ಹಸಿರು ಗರಿಕೆ ಅರ್ಪಿಸಿ. ಹೀಗೆ ಮಾಡುವುದರಿಂದ ಗಣೇಶನ ವಿಶೇಷ ಕೃಪೆ ಸಿಗುತ್ತದೆ. ಇದರಿಂದ ಜೀವನ ಸುಖಮಯವಾಗಿರುತ್ತದೆ. ಬುಧವಾರದಂದು ಗಣೇಶನಿಗೆ 21 ಗರಿಕೆಯನ್ನು ಅರ್ಪಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. 

ಬುಧದೋಷ ನಿವಾರಣೆಗೆ ಮನೆಯ ಪೂರ್ವ ದಿಕ್ಕಿನಲ್ಲಿ ಕೆಂಪು ಧ್ವಜ ಹಾಕಿದರೆ ಶೂಭ ಫಲ ಸಿಗುತ್ತದೆ. ಅಲ್ಲದೆ, ಬುಧ ಗ್ರಹದ ದುಷ್ಪರಿಣಾಮಗಳನ್ನು ತೊಡೆದುಹಾಕಲು ಚಿನ್ನದ ಆಭರಣಗಳನ್ನು ಧರಿಸಬೇಕು.   

ಬುಧವಾರ ಹಸುವಿಗೆ ಹುಲ್ಲನ್ನು ತಿನ್ನಿಸುವುದರಿಂದ ಬುಧ ದೋಷದ ಅಶುಭ ಪರಿಣಾಮ ಕೊನೆಗೊಳ್ಳುತ್ತದೆ. ಬುಧವಾರದಂದು ಗಣಪತಿಗೆ ಸಿಂಧೂರವನ್ನು ಅರ್ಪಿಸಿದರೆ  ಗಣಪತಿಯು ಪ್ರಸನ್ನನಾಗುತ್ತಾನೆ. ಇದರಿಂದ  ಜೀವನದಲ್ಲಿ ಸಂತೋಷ ನೆಲೆಯಾಗುತ್ತದೆ. 

ಶಾಸ್ತ್ರಗಳ ಪ್ರಕಾರ, ಬುಧವಾರದಂದು ಹಸಿರು ಬಣ್ಣದ ವಸ್ತುಗಳನ್ನು ಹೆಚ್ಚಾಗಿ ಬಳಸಬೇಕು. ಇದರಿಂದ ದುರ್ಬಲ ಬುಧ ಬಲಶಾಲಿಯಾಗುತ್ತಾನೆ. ಇದಲ್ಲದೆ, ಯಾವಾಗಲೂ ಹಸಿರು ಕರವಸ್ತ್ರವನ್ನು ಬಳಸಬೇಕು.  ಈ ದಿನ ಬಡವರಿಗೆ ಹೆಸರುಕಾಳು ದಾನಮಾಡಿ. 

ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ಬಲಪಡಿಸಲು ಪಚ್ಚೆ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಬುಧವಾರದಂದು ಚಿಕ್ಕ ಬೆರಳಿಗೆ ಪಚ್ಚೆಯನ್ನು ಧರಿಸುವುದರಿಂದ ಬುಧದ ಅಶುಭ ಪರಿಣಾಮ  ಕೊನೆಗೊಳ್ಳುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link