IND vs SL: ಒಂದೇ ಒಂದು ನಿರ್ಧಾರದಿಂದ ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಿದ ಅರ್ಷದೀಪ್‌ ಸಿಂಗ್‌..ಆಟಗಾರನ ವಿರುದ್ಧ ಅಭಿಮಾನಿಗಳು ಗರಂ..!

Sat, 03 Aug 2024-11:12 am,

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯವನ್ನು ಭಾರತ ತಂಡ ಗೆಲ್ಲಬಹುದಿತ್ತು. ಇನ್ನು 15 ಎಸೆತಗಳು ಬಾಕಿ ಇರುವಾಗ 10ನೇ ಕ್ರಮಾಂಕದಲ್ಲಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಅರ್ಷದೀಪ್ ಸಿಂಗ್ ಅವರ ತಪ್ಪಿನಿಂದಾಗಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಗೆಲ್ಲುವ ಪಂದ್ಯ ಟೈನಲ್ಲಿ ಮುಕ್ತಾಯವಾಯಿತು.  

ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿತು. ಮೊದಲಾರ್ಧದಲ್ಲಿ ತಂಡ ಸತತ ವಿಕೆಟ್ ಕಳೆದುಕೊಂಡು 101 ರನ್ ಗಳಿಗೆ 5 ರನ್ ಗಳಿಸಿತ್ತು.  50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. 231 ರನ್‌ಗಳ ಸರಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಆರು ಮತ್ತು ಏಳನೇ ಕ್ರಮಾಂಕದಲ್ಲಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಕೆಎಲ್ ರಾಹುಲ್ 31 ರನ್ ಮತ್ತು ಅಕ್ಷರ್ ಪಟೇಲ್ 33 ರನ್ ಗಳಿಸಿದರು.  

ದುರದೃಷ್ಟವಶಾತ್, ಅಸಲಂಗಾ ಎಸೆದ ಬಾಲ್‌ನಲ್ಲಿ ಶಿವಂ ದುಬೆ ಎಲ್‌ಬಿಡಬ್ಲ್ಯೂಗೆ ಔಟ್‌ ಆದರು. ಶ್ರೀಲಂಕಾ ಒಂದು ವಿಕೆಟ್ ಪಡೆದರೆ ಪಂದ್ಯ ಟೈ ಮಾಡಬಹುದು ಎಂಬ ಪರಿಸ್ಥಿತಿ ಇತ್ತು. ಮತ್ತೊಂದೆಡೆ ಭಾರತ ತಂಡದ ಕೈಯಲ್ಲಿ 15 ಎಸೆತಗಳಿದ್ದವು. ಆ 15 ಎಸೆತಗಳಲ್ಲಿ ಒಂದು ರನ್ ಗಳಿಸಿದರೂ ಭಾರತ ಗೆಲ್ಲುತ್ತಿತ್ತು.   

ಈ ಸಂದರ್ಭದಲ್ಲಿ ಕೊನೆಯ ಬ್ಯಾಟ್ಸ್ ಮನ್ ಆಗಿ ಮೈದಾನಕ್ಕೆ ಬಂದ ಅರ್ಷದೀಪ್ ಸಿಂಗ್ ಅವರು ಎದುರಿಸಿದ ಮೊದಲ ಎಸೆತದಲ್ಲೆ ಎಲ್‌ಬಿಡಬ್ಲ್ಯೂ ಆಗಿ ಔಟಾದರು. ಹೀಗಾಗಿ ಭಾರತ ತಂಡ 230 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.   

ಸೋಲಬೇಕಿದ್ದ ಪಂದ್ಯವನ್ನು ಟೈ ಮಾಡಿಕೊಂಡ ಶ್ರೀಲಂಕಾ ತಂಡ ಉತ್ಸಾಹದಲ್ಲಿತ್ತು. ಆದರೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಟೈನಲ್ಲಿ ಅಂತ್ಯ ಕಂಡಿತು . ಇದರ ಬೆನ್ನಲ್ಲೇ ಅಭಿಮಾನಿಗಳು ಅರ್ಷದೀಪ್ ಸಿಂಗ್ ಮಾಡಿದ ಆ ಒಂದು ತಪ್ಪನ್ನು ತೋರಿಸಿ ಅಪಹಾಸ್ಯ ಮಾಡುತ್ತಿದ್ದಾರೆ. ಆದರೆ ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡಲಿಲ್ಲ ಎಂಬುದು ಸತ್ಯ. ಕೇವಲ ಅರ್ಷದೀಪ್ ಸಿಂಗ್ ಅವರನ್ನು ದೂಷಿಸುವುದು ಸರಿಯಲ್ಲ ಎಂದು ವಿಮರ್ಶಕರು ಭಾರತದ ಬ್ಯಾಟರ್‌ಗಳತ್ತ ಬೆಟ್ಟು ಮಾಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link