Jupiter Transit 2021: ಗುರು ಗ್ರಹದ ಸ್ಥಾನಪಲ್ಲಟದಿಂದ ಯಾವ ರಾಶಿಗೆ ಶುಭ ಯಾರಿಗೆ ಅಶುಭ ತಿಳಿಯಿರಿ

Mon, 05 Apr 2021-3:00 pm,

 ಮೇಷ ರಾಶಿಯವರಿಗೆ ಇದು  ಲಾಭದಾಯಕವಾಗಿರಲಿದೆ. ಮೇಷ ರಾಶಿಯ ಜನರು ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.  ಹೊಸ ಕೆಲಸವನ್ನು ಪ್ರಾರಂಭಿಸಬಹುದು. ವ್ಯವಹಾರ ಪಾಲುದಾರಿಕೆ ಮತ್ತು ಲಾಭದಲ್ಲಿಯೂ ಹೆಚ್ಚಳ ಕಂಡು ಬರಲಿದೆ.  ಸ್ಥಾನಮಾನವು ಪ್ರತಿಷ್ಠೆಯಲ್ಲಿ ಹೆಚ್ಚಾಗಬಹುದು.  ಪ್ರೀತಿಯ ಸಂಬಂಧಗಳು ಸುಧಾರಿಸುತ್ತವೆ . ಕಾರ್ಯಗಳಿಗೆ ಸಹೋದರರ ಬೆಂಬಲ ಸಿಗುತ್ತದೆ.

ವೃಷಭ ರಾಶಿಯವರು ಹೊಸ ಮನೆ ಮತ್ತು ವಾಹನವನ್ನು ಖರೀದಿಸಲು ಸಾಧ್ಯವಿದೆ.  ತಾಯಿಯ ಬೆಂಬಲ ಸಿಗಲಿದೆ.  ಹಣ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಆದರೆ, ಕಿಡ್ನಿಗೆ ಸಂಬಂಧ ಪಟ್ಟ ರೋಗ ಮರುಕಳಿಸಬಹುದು.

ಮಿಥುನ ರಾಶಿಚಕ್ರದ ಜನರು ಬೋಧನೆಯ ಕೆಲಸದಲ್ಲಿ ಆಸಕ್ತಿ ವಹಿಸುತ್ತಾರೆ, ಪಾಲುದಾರಿಕೆಯ ಕೆಲಸದಲ್ಲಿ ಸಮಸ್ಯೆ  ಉಂಟಾಗಬಹುದು, ಮದುವೆ ಅಥವಾ ಪ್ರೀತಿಯ ಸಂಬಂಧದ ಬಗ್ಗೆ ಸಂತೋಷ ಇರುತ್ತದೆ. ಸಹೋದರರು ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ. ಆರೋಗ್ಯ ಸುಧಾರಿಸುತ್ತದೆ. 

 ಕರ್ಕ ರಾಶಿಯವರಿಗೆ ಸಂಪತ್ತು ಗಳಿಸಲು ಮಾರ್ಗಗಳು ತೆರೆದುಕೊಳ್ಳಬಹುದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ ಮತ್ತು ಸಂತೋಷವು ಹೆಚ್ಚಾಗುತ್ತದೆ.  ಆದರೆ ಅದೇ ಸಮಯದಲ್ಲಿ ವೆಚ್ಚವೂ ಹೆಚ್ಚಾಗುತ್ತದೆ. ಹೊಟ್ಟೆಯ ಕಾಯಿಲೆ, ಅಲರ್ಜಿ ಅಥವಾ ಸೋಂಕುಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಾಗಬಹುದು.   

ಗುರುವಿನ ಸ್ಥಾನಪಲ್ಲಟದಿಂದ ಸಿಂಹ ರಾಶಿಯವರು ವ್ಯವಹಾರದಲ್ಲಿ ಅಡಚಣೆಯನ್ನು ಎದುರಿಸಬೇಕಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. 

 ಕನ್ಯಾರಾಶಿಯವರು ಕುಟುಂಬಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಳೆಯ ಕಾಯಿಲೆ ಮತ್ತೆ ಕಾಣಿಸಿಕೊಳ್ಳಬಹುದು. ಸಾಲ ಮತ್ತು ಶತ್ರುಭಯ ಕಾಡಬಹುದು.  ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.  ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗುತ್ತದೆ. ತಂದೆಯ ಬೆಂಬಲ ಸಿಗುತ್ತದೆ.

ತುಲಾ  ರಾಶಿಯವರು ನಿಮ್ಮ ಬುದ್ಧಿಮತ್ತೆಯನ್ನು ಬಳಸುವುದರಿಂದ, ಆದಾಯ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬಹುದು.  ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ, ಅದೃಷ್ಟ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆದಾಗ್ಯೂ, ಒಂದು ರೀತಿಯ ಉದ್ವೇಗವೂ ಇರಬಹುದು.

 ವೃಶ್ಚಿಕ ರಾಶಿಯವರಿಗೆ ಇಲ್ಲಿಯವರೆಗೆ ಇದ್ದ  ಮಾನಸಿಕ ಕಿರಿಕಿರಿ ಕೊನೆಗೊಳ್ಳುತ್ತದೆ. ವೆಚ್ಚಗಳು ಅಧಿಕವಾಗುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.  ಹೊಟ್ಟೆ, ಕಾಲುಗಳು, ಪಿತ್ತಜನಕಾಂಗ ಮತ್ತು ಅಲರ್ಜಿಯ ಸಮಸ್ಯೆಗಳು ತೊಂದರೆಗೊಳಗಾಗುತ್ತವೆ.  

ಧನು ರಾಶಿಯ ಜನರ ಮನೋಸ್ಥೈರ್ಯ ಹೆಚ್ಚಾಗುತ್ತದೆ. ಅದೃಷ್ಟವು ಅವರ ಪರವಾಗಿರುತ್ತದೆ.   ವೈವಾಹಿಕ ಜೀವನ ಮತ್ತು ಪ್ರೀತಿಯ ಸಂಬಂಧಗಳು ಸುಧಾರಿಸುತ್ತವೆ. ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ. ಸಹೋದರರು ಕೆಲವು ರೀತಿಯ ನೋವನ್ನು ಅನುಭವಿಸಬಹುದು.

ಮಕರ ರಾಶಿಯವರ ಹೊಣೆಗಾರಿಕೆ ಹೆಚ್ಚಾಗುತ್ತದೆ. ಹಣಕಸ್ನ ವಿಚಾರಕ್ಕೆ ಸಂಬಂಧಿಸಿದಂತೆ ಒತ್ತಡ ಹೆಚ್ಚಾಗಬಹುದು. ಸಾಲ ತೆಗೆದುಕೊಳ್ಳುವ ಮೂಲಕ ಯಾವುದೇ ಕೆಲಸವನ್ನು ಮಾಡಬೇಡಿ. ಮಾತಿನ ಮೇಲೆ ಸಂಯಮವಿಡಿ. ಅನಾರೋಗ್ಯ ಮತ್ತು ಶತ್ರುಗಳು ಹೆಚ್ಚಾಗುತ್ತಾರೆ.  

 ಮಕರ ರಾಶಿಯಿಂದ ಗುರು ಕುಂಭ  ರಾಶಿ ಪ್ರವೇಶಿಸಿದ್ದಾನೆ. ಅದೃಷ್ಟಕ್ಕೆ ಸಂಬಂಧಿಸಿದ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ, ಮಾನಸಿಕ ಒತ್ತಡ ಇರುತ್ತದೆ.  ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿದೆ.  ಪಾಲುದಾರಿಕೆಯಿಂದ ಲಾಭವಾಗುತ್ತದೆ. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.  

ಮೀನರಾಶಿಯವರು ಧಾರ್ಮಿಕ ಕಾರ್ಯಗಳಿಗೆ ಹಣ ವೆಚ್ಚ ಮಾಡುತ್ತಾರೆ. ವಿಶೇಷವಾಗಿ ಯಕೃತ್ತು ಮತ್ತು ಮೂತ್ರಪಿಂಡದ ತೊಂದರೆಗಳು ಹೆಚ್ಚಾಗಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link