ಲಾಯರ್‌ ಜಗದೀಶ್‌ ಮುಖಕ್ಕೆ ಮಸಿ ಬಳಿದ ಸಹ ಸ್ಪರ್ಧಿಗಳು! ಅಷ್ಟೆ..ರಣಾಂಗನ ಆಗಿಯೇ ಹೋಯ್ತು ಬಿಗ್‌ಬಾಸ್‌ ಮನೆ

Mon, 07 Oct 2024-10:51 am,

Kannada Biggboss 11: ಬಿಗ್‌ಬಾಸ್‌ ಸೀಸನ್‌ 11 ಶುರುವಾಗಿದೆ, ಮೊದಲ ವಾರ ಮುಗಿದಿದ್ದು ಮನೆಯಿಂದ ಮೊದಲೆಯನದಾಗಿ ಯಮುನಾ ಶ್ರೀನಿಧಿ ಅವರು ಹೊರ ಹೋಗಿದ್ದಾರೆ. ಇದೀಗ ಬಿಗ್‌ಬಾಸ್‌ ಮನೆ ರಣರಂಗವಾಗಿದೆ, ಸ್ಪರ್ದೀಗಳ ನಡುವೆ, ಕೋಪ, ಜಗಳ ಹಾಗೂ ಚೀರಾಟ ಶುರುವಾಗಿದೆ.   

ವಾರದ ಪಂಚಾಯಿತಿಯಲ್ಲಿ ಕಿಚ್ಚ ಮನೆಯ ಸದಸ್ಯರಿಗೆ ಕಿವಿ ಮಾತೊಂದನ್ನು ಹೇಳಿದ್ದು, ಕೊಟ್ಟ ಸಮಯವನ್ನು ಯಾರೂ ಕೂಡ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದಿದ್ದರು, ಅಷ್ಟಕ್ಕೆ ಮನೆಯ ಸ್ಪರ್ಧಿಗಳೆಲ್ಲಾ ಫುಲ್‌ ಆಕ್ಟಿವ್‌ ಏಣೋ ಆಗಿದ್ದರು, ಆದರೆ ಟಾಸ್ಕ್‌ ಹೆಸರಿನಲ್ಲಿ ಮನೆಯನ್ನು ರಣರಂಗವನ್ನಾಗಿ ಮಾಡಿಬಿಟ್ಟಿದ್ದಾರೆ.   

ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳಿಗೆ ಟಾಸ್ಕ್‌ ಒಂದನ್ನು ಕೊಟ್ಟಿದ್ದಾರೆ ಅದರ ಪ್ರಕಾರ ಮಾನೆಯಲ್ಲಿರಲು ಯಾವ ಸದಸ್ಯರು ಅನರ್ಹರ ಎಂದು ಆಯ್ಕೆ ಮಾಡಲು ಸ್ಪರ್ಧಿಗಳಿಗೆ ಹೇಳಲಾಗಿದ್ದು, ತಮ್ಮ ಅನಿಸಿಕೆಯಂತೆ ತಾವು ಯಾರನ್ನು ಅನರ್ಹರು ಅಂದುಕೊಂಡಿದ್ದಾರೆಯೋ ಆ ಸ್ಪರ್ಧಿಗಳಿಗೆ ಮಸಿ ಬಳಿಸುತ್ತಿದ್ದಾರೆ.   

ಹೀಗೆ ಮನೆಯಲ್ಲಿ ಟಾಸ್ಕ್‌ ಏನೋ ನೀಡಾಗಿದೆ, ಆದರೆ ಟಾಸ್ಕ್‌ ಹೆಸರಿನಲ್ಲಿ ಮನೆಯ ಸದಸ್ಯರು ಜಗಳವಾಡುತ್ತಿದ್ದಾರೆ, ಮಾತಿಗೆ ಮಾತು ನೀಡಿ ಜಗಳ ತೆಗೆಯುತ್ತಾ ಬಿಗ್‌ಬಾಸ್‌ ಮನೆಯನ್ನು ರಣರಂಗವನ್ನಾಗಿ ಮಾಡಿ ಬಿಟ್ಟಿದ್ದಾರೆ.  

ಸುಮ್ನೆನೇ ಕ್ಯಾತೆ ತೆಗೆಯುತ್ತಿದ್ದ ಲಾಯರ್‌ ಜಗದೀಶ್‌ ಅವರ ಮುಖಕ್ಕೆ ಮನೆಯ ಮಂದಿ ಮಸಿ ಬಳಿದಿದ್ದಾರೆ. ಚಿಕ್ಕ ವಿಷಯವನ್ನೆ ಆಗಸದಷ್ಟು ಮಾಡುವ ಲಾಯರ್‌ ಜಗದೀಶ್‌, ಇನ್ನೂ ಸಮ್ನೆ ಇರ್ತಾರಾ? ಎನ್ನುವ ಪ್ರಶ್ನೆ ಉದ್ಭವಿಸಿದೆ.  

ಸದ್ಯ ಇದಕ್ಕೆ ಸಂಭಂದಿಸಿದ ಪ್ರೋಮೋವನ್ನು ಕಲರ್ಸ್‌ ಕನ್ನಡ ವಾಹಿನಿ ರಿಲೀಸ್‌ ಮಾಡಿದ್ದು, ನಂತರ ಮನೆಯಲ್ಲಿ ಆಗೋದೇನು? ಎಂಬುದನ್ನು ಇನ್ನು ಮುಂದಷ್ಟೆ ಕಾದು ನೋಡಬೇಕಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link