ರಾಜ್ಯ ಸರ್ಕಾರಿ ನೌಕರರಿಗೂ ಸಿಹಿ ಸುದ್ದಿ ! ದಸರಾ ವೇಳೆಯಲ್ಲಿಯೇ ವೇತನ ಹೆಚ್ಚಳ ಘೋಷಿಸಿದ ಸರ್ಕಾರ ! ಖಾತೆ ಸೇರುವ ಹಣ ಎಷ್ಟು ?

Mon, 23 Oct 2023-9:13 am,

ಕೇಂದ್ರ ಸರ್ಕಾರದ ಬಳಿಕ ಇದೀಗ ರಾಜ್ಯ ಸರ್ಕಾರ ಕೂಡಾ ತನ್ನ  ನೌಕರರಿಗೆ ಡಿಎ  ಹೆಚ್ಚಳವನ್ನು ಘೋಷಿಸಿದೆ. ದಸರಾ ವೇಳೆಯಲ್ಲಿಯೇ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದ್ದು, ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ. 

ರಾಜ್ಯ  ಸರ್ಕಾರ  3.75 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಸರ್ಕಾರದ ಈ ಆದೇಶದ ನಂತರ ರಾಜ್ಯ ಸರ್ಕಾರಿ ನೌಕರರ ಡಿಎ ಶೇ.38.75ಕ್ಕೆ ಏರಿಕೆಯಾಗಿದೆ.   

ಯುಜಿಸಿ/ಎಐಸಿಟಿಇ/ಐಸಿಎಆರ್ ಶ್ರೇಣಿಯ ಉಪನ್ಯಾಸಕರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ನಾಲ್ಕು ಪ್ರತಿಶತದಷ್ಟು ಡಿಎ ಹೆಚ್ಚಳವನ್ನು ಸರ್ಕಾರ ಘೋಷಿಸಿದೆ.

ಡಿಎ ಹೆಚ್ಚಳ ಘೋಷಣೆ ಬಳಿಕ ರಾಜ್ಯ ಸರ್ಕಾರದ ಮೇಲೆ 1,109 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಮಾರ್ಚ್‌ನಲ್ಲಿ ನೌಕರರ ಸಂಘಗಳ ಪ್ರತಿಭಟನೆಯ ನಂತರ, ಹಿಂದಿನ ಬಿಜೆಪಿ ಸರ್ಕಾರವು ಮೂಲ ವೇತನದಲ್ಲಿ 17% ವರೆಗೆ ಮಧ್ಯಂತರ ಹೆಚ್ಚಳದ ಬಗ್ಗೆ ಹೇಳಿತ್ತು. 

ಯುಪಿ ಸರ್ಕಾರವು ಉದ್ಯೋಗಿಗಳ ಡಿಎಯನ್ನು 4 ಪ್ರತಿಶತದಷ್ಟು ಹೆಚ್ಚಿಸಿತು. ದೀಪಾವಳಿಗೆ ಮುನ್ನ ಅಕ್ಟೋಬರ್ ತಿಂಗಳ ಸಂಬಳದ ಜೊತೆಗೆ ಹೆಚ್ಚಿದ ಡಿಎ ಮೊತ್ತವನ್ನು ಬಾಕಿದಾರರಿಗೆ ನೀಡಲು ಸರ್ಕಾರ ಯೋಜಿಸಿದೆ.

ಕಳೆದ ವಾರ, ಸರ್ಕಾರವು ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎ/ಡಿಆರ್ ಅನ್ನು ಶೇಕಡಾ 4 ರಷ್ಟು ಹೆಚ್ಚಿಸಿತ್ತು. ಇದರೊಂದಿಗೆ ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ಅನ್ನು ಸರ್ಕಾರ ಘೋಷಿಸಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link