ನಿತ್ಯ ಮುಂಜಾನೆ ಒಂದು ಲೋಟ ಈ ನೀರನ್ನು ಕುಡಿಯಿರಿ: ಕಿಡ್ನಿಯಲ್ಲಿ ಕಲ್ಲು ಇದ್ದರೆ ತಾನಾಗೇ ಕರಗಿ ಹೋಗುತ್ತೆ! ಬ್ಲಡ್ ಶುಗರ್ ಕೂಡ ನಾರ್ಮಲ್ ಮಾಡುತ್ತೆ!

Sun, 28 Apr 2024-9:47 pm,

ಹುರುಳಿ ಕಾಳು.. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಇದನ್ನು ಬಳಕೆ ಮಾಡಲಾಗುತ್ತಿತ್ತು. ಈ ಆರೋಗ್ಯ ಸಮಸ್ಯೆಯ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ದ್ವಿದಳ ಧಾನ್ಯವಾಗಿದೆ.

ಹಿಂದಿನ ಕಾಲದಿಂದಲೂ ಭಾರತದಲ್ಲಿ ಹುರುಳಿಯನ್ನು ಬೆಳೆಸಲಾಗುತ್ತಿದೆ. ಇದರ ನೀರನ್ನು ನಿಯಮಿತವಾಗಿ ಕುಡಿದರೆ ಕಿಡ್ನಿ ಸ್ಟೋನ್ ಕ್ರಮೇಣ ಕರಗಿ ಮೂತ್ರನಾಳದ ಮೂಲಕ ಹೊರಬರುತ್ತವೆ.

ಮೂತ್ರಪಿಂಡದ ಕಲ್ಲಿನ ಗಾತ್ರವು 1 ಸೆಂಟಿಮೀಟರ್ ಆಗಿದ್ದರೆ, ಇದು ತುಂಬಾ ಪ್ರಯೋಜನಕಾರಿ. ಆದರೆ ಆ ಗಾತ್ರಕ್ಕಿಂತ ಹೆಚ್ಚಿದ್ದರೆ, ಔಷಧವನ್ನೇ ತೆಗೆದುಕೊಳ್ಳಬೇಕು.    

ಕಿಡ್ನಿ ಸ್ಟೋನ್’ಗಳಿಗೆ ಚಿಕಿತ್ಸೆ ನೀಡಲು ಹುರುಳಿಯನ್ನು ಬಳಕೆ ಮಾಡಬಹುದು. ಫೀನಾಲಿಕ್ ಘಟಕಗಳು, ಫ್ಲೇವನಾಯ್ಡ್‌, ಸ್ಟೀರಾಯ್ಡ್‌ ಮತ್ತು ಸಪೋನಿನ್‌’ಗಳಂತಹ ಹಲವಾರು ಫೈಟೊಕೆಮಿಕಲ್’ಗಳು ಇದರಲ್ಲಿ ಕಂಡುಬರುತ್ತವೆ.

ಅಂದಹಾಗೆ ಹುರುಳಿಯನ್ನು ಬಳಸುವ ಮೊದಲು ಚೆನ್ನಾಗಿ ಸ್ವಚ್ಛಗೊಳಿಸಿ. ನಿತ್ಯ ಮುಂಜಾನೆ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಅನ್ನು ದೇಹದಿಂದ ತೆಗೆದುಹಾಕುತ್ತದೆ.

25 ಗ್ರಾಂ ಹುರುಳಿ ಕಾಳುಗಳನ್ನು 200 ಮಿಲಿ ನೀರಿನಲ್ಲಿ ಕುದಿಸಿ. ಆ ನೀರು 50 ಮಿಲಿಗೆ ಕಡಿಮೆಯಾಗುವವರೆಗೆ ಬೇಯಿಸಬೇಕು. ನಂತರ ಕುದಿಸಿದ ನೀರನ್ನು ಬೆಳಗ್ಗೆ ಎದ್ದಂತೆ ಕುಡಿಯಬೇಕು. ಈ ಚಿಕಿತ್ಸೆಯು ಸುಮಾರು 4-5 ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ಆದರೆ ಶಾಶ್ವತ ಪರಿಹಾರ ನೀಡುವ, ಯಾವುದೇ ಅಡ್ಡ ಪರಿಣಾಮ ಬೀರದ ಪರಿಹಾರ ಇದಾಗಿದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link