Lal Kitab Remedies: ಲಾಲ್ ಕಿತಾಬ್ ನ ಈ ಉಪಾಯ ಅನುಸರಿಸಿ, ಧನ-ಸಂಪತ್ತಿನಿಂದ ತುಂಬಿ ತುಳುಕುತ್ತೆ ತಿಜೋರಿ

Thu, 05 Jan 2023-8:49 pm,

2. ಶನಿವಾರದಂದು, ಸಾಸಿವೆ ಎಣ್ಣೆಯನ್ನು ಕಂಚಿನ ಪಾತ್ರೆಯಲ್ಲಿ ಅಥವಾ ಬಟ್ಟಲಿನಲ್ಲಿ ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ, ನಂತರ ಈ ಎಣ್ಣೆಯನ್ನು ಶನಿ ದೇವಸ್ಥಾನದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ತೊಂದರೆಗಳು, ಸಂಕಟಗಳು ಮತ್ತು ರೋಗಗಳು ಕೊನೆಗೊಳ್ಳುತ್ತವೆ.  

3. ಲಾಲ್ ಕಿತಾಬ್ ಪ್ರಕಾರ, ಹಸುವಿಗೆ ಪ್ರತಿದಿನ ಹಸಿರು ಮೇವನ್ನು ತಿನ್ನಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸುಖ-ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನಲಾಗುತ್ತದೆ. ಇದರೊಂದಿಗೆ, ವ್ಯಕ್ತಿಯ ದುರದೃಷ್ಟವೂ ಅದೃಷ್ಟದಲ್ಲಿ  ಬದಲಾಗುತ್ತದೆ. ಹಸುವಿಗೆ ಪ್ರತಿನಿತ್ಯ ರೊಟ್ಟಿ ಮತ್ತು ಬೆಲ್ಲ ತಿನ್ನಿಸುವುದು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.  

4. ಪ್ರತಿನಿತ್ಯ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಸಮಸ್ಯೆಗಳಿಂದ ಸಾಕಷ್ಟು ಪರಿಹಾರ ದೊರೆಯುತ್ತದೆ. ಈ ಕೆಲಸವನ್ನು ಧರ್ಮಗ್ರಂಥಗಳಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವುದರಿಂದ ಜಾತಕದ ಅನೇಕ ಗ್ರಹದೋಷಗಳೂ ನಿವಾರಣೆಯಾಗುತ್ತವೆ.  

5. ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವುದರಿಂದ ಪ್ರಗತಿಯಲ್ಲಿರುವ ಅಡೆತಡೆಗಳನ್ನು ದೂರಾಗುತ್ತವೆ. ಇದರೊಂದಿಗೆ ಹಣದ ನಷ್ಟದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವುದರಿಂದ ಪುಣ್ಯ ಸಿಗುತ್ತದೆ. ಆದರೆ, ನೀವು ಮನೆಯಲ್ಲಿ ಅಕ್ವೇರಿಯಂ ಇಡುತ್ತಿದ್ದರೆ, ಅದರಲ್ಲಿ 5 ಗೋಲ್ಡನ್ ಫಿಶ್ ಜೊತೆಗೆ 1 ಅಥವಾ 2 ಕಪ್ಪು ಮೀನುಗಳನ್ನು ಯಾವಾಗಲೂ ಇಟ್ಟುಕೊಳ್ಳಿ. ಯಾವುದೇ ಒಂದು ಮೀನು ಸಾವನ್ನಪ್ಪಿದರೆ, ಅದನ್ನು ತಕ್ಷಣವೇ ತೆಗೆದು ಮತ್ತೊಂದು ಮೀನನ್ನು ಅಕ್ವೇರಿಯಂಗೆ ಹಾಕಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link