ಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?

Tue, 16 Jul 2024-10:03 am,

ಬಹು ಭಾಷಾ ನಟಿ ಸೌಂದರ್ಯ ಈ ಲೋಕ ಬಿಟ್ಟು ಹಲವು ವರ್ಷಗಳೇ ಸಂದಿವೆ.ಇಂದಿಗೂ ಅವರ ಸಾವನ್ನು ಅರಗಿಸಿಕೊಳ್ಳುವುದು ಚಿತ್ರರಂಗಕ್ಕಾಗಲೀ, ಅಭಿಮಾನಿಗಳಿಗಾಗಲಿ, ಕುಟುಂಬಕ್ಕಾಗಲೀ ಆಗಿಲ್ಲ.   

ಎಲ್ಲಾ ಭಾಷೆಯಲ್ಲಿಯೂ ಭಾರೀ ಬೇಡಿಕೆ ಇರುವಗಾಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಸೌಂದರ್ಯ. ಇವರ ಸಾವು ಇಡೀ ಚಿತ್ರೋದ್ಯಮಕ್ಕೆ ದೊಡ್ಡ ಆಘಾತ. 

ಅದೊಂದು ಕರಾಳ ದಿನ ರಾಜಕೀಯ ಪ್ರಚಾರಕ್ಕಾಗಿ ಹೊರಟ ಸೌಂದರ್ಯ ವಿಮಾನ ಪತನಗೊಂಡು  ಅವರ ಸಾವಿಗೆ ಕಾರಣವಾಯಿತು.   

ಆ ದಿನ ಮನೆಯಿಂದ ಹೊರಡುವುದಕ್ಕೂ ಮುನ್ನ ಮನೆಯಲ್ಲಿ ಏನಾಯಿತು ಎನ್ನುವುದನ್ನು ಸೌಂದರ್ಯ ಅತ್ತಿಗೆ ಇತ್ತೀಚೆಗೆ ವಿವರಿಸಿ ಹೇಳಿದ್ದಾರೆ. ಆ ವಿಚಾರ ನೆನೆದು ಈಗಲೂ ಅತ್ತಿಗೆ ನಿರ್ಮಲಾ ಕಣ್ಣೀರು ಹಾಕುತ್ತಾರೆ. 

ಮನೆಯಿಂದ ಹೊರಟ ಸೌಂದರ್ಯ ಮತ್ತೆ ಹಿಂತಿರುಗಿ ಬಂದು ಅತ್ತಿಗೆ ಬಳಿ ಕುಂಕುಮ ಕೊಡಿ ಎಂದು ಕೇಳಿದ್ದರಂತೆ.ಹಿಂದೆಂದೂ ಮನೆಯಿಂದ ಹೊರಡುವಾಗ ಸೌಂದರ್ಯ ಈ ರೀತಿ ಕುಂಕುಮ ಇಟ್ಟೆ ಇರಲಿಲ್ಲವಂತೆ.   

ಅಲ್ಲದೆ ಕುಂಕುಮ ಕೇಳಿ ಇರಿಸಿಕೊಂಡು ಅತ್ತಿಗೆಯನ್ನು ಬಿಗಿದಪ್ಪಿ ಮುತ್ತು ನೀಡಿ ಹೊರಡುವುದಾಗಿ ಹೇಳಿದ್ದರಂತೆ.ಆದರೆ ಅದೇ ಕೊನೆ ಅಪ್ಪುಗೆ ಎಂದು  ನಿರ್ಮಲಾ ಕನಸಲ್ಲೂ ಅಂದುಕೊಂಡಿರಲಿಲ್ಲವಂತೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link