ಶ್ರಾವಣ ಸೋಮವಾರದಂದು ಈ ಮಂತ್ರ ಪಠಿಸಿದರೆ ದುರಾದೃಷ್ಟವೇ ಅದೃಷ್ಟವಾಗುವುದು: ಸದಾ ಕಷ್ಟದಿಂದ ಮುಕ್ತಿ ನೀಡುವ ಮಹಾದೇವ!

Mon, 28 Aug 2023-6:04 am,

ಸನಾತನ ಧರ್ಮದಲ್ಲಿ ಸೋಮವಾರವನ್ನು ಶಿವನ ಆರಾಧನೆಯ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಮಹಾದೇವನನ್ನು ಪೂಜಿಸುವುದರಿಂದ ಆತನ ವಿಶೇಷ ಆಶೀರ್ವಾದಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ದಿನ ಶಿವನನ್ನು ಆಚರಿಸಲು 5 ವಿಶೇಷ ವಿಧಾನಗಳನ್ನು ಹೇಳಲಾಗಿದೆ. ಇದನ್ನು ಅಳವಡಿಸಿಕೊಂಡರೆ ಆರೋಗ್ಯ, ಹಣ, ಮದುವೆ, ವೃತ್ತಿ ಮತ್ತು ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಆ ಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಮಂತ್ರ ಪಠಣ: ಜೀವನದಲ್ಲಿ ಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಮಹಾದೇವನ ಆಶೀರ್ವಾದವನ್ನು ಪಡೆಯಲು ಸೋಮವಾರದಂದು 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಬೇಕು. ಈ ಪರಿಹಾರವನ್ನು ಮಾಡುವುದರಿಂದ ವ್ಯಕ್ತಿಯ ಅದೃಷ್ಟದ ಬಾಗಿಲು ತೆರೆಯುತ್ತದೆ ಮತ್ತು ತೊಂದರೆಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ.

ಈ ಬಣ್ಣದ ವಸ್ತುಗಳ ದಾನ: ಸನಾತನ ಧರ್ಮದಲ್ಲಿ ದಾನವನ್ನು ಜೀವನದ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಸೋಮವಾರದಂದು ಹಣ, ಬಟ್ಟೆ, ಆಹಾರ ಅಥವಾ ಇನ್ನಾವುದೇ ವಸ್ತುವನ್ನು ನಿರ್ಗತಿಕರಿಗೆ ದಾನ ಮಾಡುವುದರಿಂದ ದೇವತೆಗಳು ಸಂತೋಷಪಡುತ್ತಾರೆ ಎಂದು ಹೇಳಲಾಗುತ್ತದೆ.

ದೇವಸ್ಥಾನದಲ್ಲಿ ರುದ್ರಾಕ್ಷ ದಾನ: ವೈವಾಹಿಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಹೋಗಲಾಡಿಸಲು ಸೋಮವಾರದಂದು ಶಿವನ ದೇವಸ್ಥಾನದಲ್ಲಿ ರುದ್ರಾಕ್ಷಿ ಮಾಲೆಯನ್ನು ದಾನ ಮಾಡಬೇಕು. ಈ ಪರಿಹಾರದಿಂದ ಜೀವನದಲ್ಲಿ ಪ್ರೀತಿಯ ಹರಿವು ಹೆಚ್ಚಾಗುತ್ತದೆ. ಕುಟುಂಬದಲ್ಲಿನ ಹಣದ ಸಮಸ್ಯೆಯೂ ದೂರವಾಗುತ್ತದೆ.

ವಿಶೇಷ ಪೂಜೆ ಮಾಡಿ: ಧಾರ್ಮಿಕ ವಿದ್ವಾಂಸರ ಪ್ರಕಾರ, ಭೋಲೆನಾಥನ ಆಶೀರ್ವಾದ ಪಡೆಯಲು ಸೋಮವಾರ ವಿಶೇಷ ಪೂಜೆಯನ್ನು ಮಾಡಬೇಕು. ಈ ದಿನ ಶಿವನ ದೇವಸ್ಥಾನಕ್ಕೆ ತೆರಳಿ ಹಣ್ಣು, ಹೂವು, ಬಿಲ್ವಪತ್ರೆ ಮತ್ತು ಹಾಲನ್ನು ಶಿವನಿಗೆ ಅರ್ಪಿಸಬೇಕು.

ಸೋಮವಾರ ಉಪವಾಸ: ಶಾಸ್ತ್ರಗಳ ಪ್ರಕಾರ, ಶಿವನ ಆಶೀರ್ವಾದ ಪಡೆಯಲು ಸೋಮವಾರದಂದು ಉಪವಾಸವನ್ನು ಆಚರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ, ಶಂಕರ ಸಂತೃಪ್ತನಾಗಿ  ಕಷ್ಟ ನಿವಾರಿಸಿ ಸುಖ ವೃದ್ಧಿಸುತ್ತಾನೆ ಎಂದು ಹೇಳಲಾಗಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link