ಇವು ಭಗವಾನ್ ಶ್ರೀಕೃಷ್ಣನ ಅತ್ಯಂತ ಮೆಚ್ಚಿನ ರಾಶಿಗಳು: ಬೇಡಿದ ತಕ್ಷಣ ಅನಂತ ಸಿರಿ ಸಂಪತ್ತಿನ್ನೇ ಧಾರೆ ಎರೆಯುತ್ತಾನೆ ದೇವಕಿಸುತ

Sat, 29 Jun 2024-5:04 pm,

ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಗಸ್ಟ್ 26ರಂದು ಬರುತ್ತಿದೆ. ನಂಬಿಕೆಯ ಪ್ರಕಾರ, ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಆಚರಿಸಲಾಗುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಗವಾನ್ ಶ್ರೀ ಕೃಷ್ಣನ ನೆಚ್ಚಿನ ರಾಶಿಗಳನ್ನು ಉಲ್ಲೇಖಿಸಲಾಗಿದೆ. ಹೀಗಿರುವಾಗ ಈ ವರದಿಯಲ್ಲಿ ಕೃಷ್ಣನ ನೆಚ್ಚಿನ ಮತ್ತು ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.

ವೃಷಭ ರಾಶಿ: ವೃಷಭ ರಾಶಿಯವರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ರಾಶಿ ಶ್ರೀ ಕೃಷ್ಣನ ನೆಚ್ಚಿನ ರಾಶಿಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಕೃಷ್ಣನ ದಯೆಯಿಂದ ಪ್ರತಿ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಬಂದರೂ ಬುದ್ಧಿವಂತಿಕೆ ಮತ್ತು ತಾಳ್ಮೆಯ ಸಹಾಯದಿಂದ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ.

ಕರ್ಕಾಟಕ: ಕರ್ಕ ರಾಶಿಯವರಿಗೆ ಶ್ರೀ ಕೃಷ್ಣನ ಆಶೀರ್ವಾದ ಯಾವಾಗಲೂ ಇರುತ್ತದೆ. ಈ ರಾಶಿಯ ಜನರು ಶ್ರೀ ಕೃಷ್ಣನನ್ನು ಮನಃಪೂರ್ವಕವಾಗಿ ಸ್ಮರಿಸಿದರೆ, ಜೀವನದ ಕಷ್ಟಗಳನ್ನು ಜಯಿಸಲು ಧೈರ್ಯ ಸಿಗುತ್ತದೆ. ಇನ್ನು ಈ ರಾಶಿಯ ಜನರು ಪ್ರಾರಂಭಿಸುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ಸಿಂಹ ರಾಶಿ: ಶ್ರೀಕೃಷ್ಣನ ನೆಚ್ಚಿನ ರಾಶಿಗಳ ಪಟ್ಟಿಯಲ್ಲಿ ಸಿಂಹ ರಾಶಿಯ ಹೆಸರು ಕೂಡ ಸೇರಿದೆ. ಈ ರಾಶಿಯ ಗುಣವೆಂದರೆ ತುಂಬಾ ಧೈರ್ಯಶಾಲಿ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಶ್ರೀಕೃಷ್ಣನ ಕೃಪೆಯಿಂದ, ಶಕ್ತಿಯ ಜೊತೆಗೆ, ಬುದ್ಧಿವಂತಿಕೆಯನ್ನು ಸಹ ಬಳಸುತ್ತಾರೆ.

ತುಲಾ: ತುಲಾ ರಾಶಿಯ ಜನರ ಮೇಲೂ ಶ್ರೀ ಕೃಷ್ಣನ ಕರುಣೆಯ ಕಣ್ಣುಗಳು ಇರುತ್ತವೆ. ಶ್ರೀಕೃಷ್ಣನ ಅಚ್ಚುಮೆಚ್ಚಿನ ರಾಶಿಯಾಗುವ ಭಾಗ್ಯವೂ ಇವರಿಗಿದೆ. ದೇವರ ದಯೆಯಿಂದ ಜೀವನದಲ್ಲಿ ಸಂಪತ್ತು ಮತ್ತು ಗೌರವಕ್ಕೆ ಯಾವುದೇ ಕೊರತೆಯಿರುವುಲ್ಲ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link