ಮಹಾಕುಂಭ ಮೇಳದಲ್ಲಿ ಕಾಲ್ತುಳಿತ..! ಭಯಾನಕ, ಭಕ್ತರ ನರಳಾಟ.. ಫೋಟೋಸ್‌ ವೈರಲ್‌

Wed, 29 Jan 2025-3:13 pm,

ಪ್ರಯಾಗ್‌ರಾಜ್‌ನ ಸಂಗಮ ಪ್ರದೇಶದಲ್ಲಿ ಬುಧವಾರ ಮುಂಜಾನೆ ಕಾಲ್ತುಳಿತ ಸಂಭವಿಸಿದ್ದು, ಅನೇಕ ಸಾವು ನೋವುಗಳಿಗೆ ಕಾರಣವಾಯಿತು. ಮೌನಿ ಅಮವಾಸ್ಯೆಯ ಪುಣ್ಯಸ್ನಾನಕ್ಕೆ ಕೋಟ್ಯಂತರ ಭಕ್ತರು ಜಮಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ.  

ಉತ್ತರ ಪ್ರದೇಶ ಸರ್ಕಾರವು ಅಧಿಕೃತ ಸಾವುನೋವುಗಳ ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ, ಮಾಧ್ಯಮ ವರದಿಗಳ ಪ್ರಕಾರ 10 ಕ್ಕೂ ಹೆಚ್ಚು ಸಾವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.   

ಕುಂಭಮೇಳದ ಸಮಯದಲ್ಲಿ ಮೌನಿ ಅಮಾವಾಸ್ಯೆಯ ಸ್ನಾನವು ಅಪಾರ ಮಹತ್ವವನ್ನು ಹೊಂದಿದೆ. ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿಯ ಪವಿತ್ರ ಸಂಗಮವಾದ ತ್ರಿವೇಣಿ ಸಂಗಮಕ್ಕೆ ಲಕ್ಷಾಂತರ ಭಕ್ತರು ಮಂಗಳಕರವಾದ ಸ್ನಾನ ಮಾಡಲು ಧಾವಿಸಿದ್ದರು. ಈ ದಿನದಂದು ಪವಿತ್ರ ಸ್ನಾನ ಮಾಡಿದರೆ.. ಪಾಪಗಳಿಂದ ಮುಕ್ತಿ ಮತ್ತು ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ..   

ಮೌನಿ ಅಮವಾಸ್ಯೆಯು ಕುಂಭಮೇಳದ ಸಮಯದಲ್ಲಿ ಸಂತರು, ಸಾಧುಗಳು ಮತ್ತು ಅಖಾರಗಳಿಗೆ ಪ್ರವಿತ್ರ ಸ್ನಾನದ ದಿನ.. ಧಾರ್ಮಿಕ ಕ್ರಿಯೆಯನ್ನು ನಡೆಸುವ ಮೊದಲು ಭವ್ಯವಾದ ಮೆರವಣಿಗೆಯನ್ನು ನಡೆಸುತ್ತಾರೆ. ಈ ಮೆರವಣಿಗೆ ಆಧ್ಯಾತ್ಮಿಕ ಶುದ್ಧೀಕರಣ, ಆಂತರಿಕ ಮೌನ ಮತ್ತು ಆಳವಾದ ಭಕ್ತಿಯನ್ನು ಸಂಕೇತಿಸುತ್ತದೆ. ಈ ದಿನದಂದು ದೈವಿಕ ಶಕ್ತಿಯು ಉತ್ತುಂಗದಲ್ಲಿದ್ದು, ಪವಿತ್ರ ಸ್ನಾನ ಮಾಡಿದರೆ ಇನ್ನಷ್ಟು ಶಕ್ತಿ ಲಭಿಸುತ್ತದೆ ಎನ್ನುವ ನಂಬಿಕೆ ಇದೆ..  

ಘಟನೆಯಲ್ಲಿ ಹಲವಾರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಚಿತಪಡಿಸಿದ್ದಾರೆ. ನಸುಕಿನ 1 ರಿಂದ 2 ಗಂಟೆಯ ನಡುವೆ ಕೆಲವು ಯಾತ್ರಾರ್ಥಿಗಳು ಅಖಾರಾ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ..   

ಆಂಬ್ಯುಲೆನ್ಸ್‌ಗಳು ಮತ್ತು ಪೊಲೀಸ್ ಸೈರನ್‌ಗಳು ಜೋರಾಗಿ ಮಂತ್ರಗಳ ಪಠಣಕ್ಕೆ ಅಡ್ಡಿಯಾದವು. ಭದ್ರತಾ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಕರ್ತರು ಗಾಯಗೊಂಡ ಯಾತ್ರಾರ್ಥಿಗಳನ್ನು ಸ್ಟ್ರೆಚರ್‌ಗಳಲ್ಲಿ ಹೊತ್ತೊಯ್ದರು, ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಸ್ಥಳಿಯರು ಭಯಾನಕ ಘಟನೆಯನ್ನು ವಿವರಿಸಿದ್ದಾರೆ..   

ಇದರಿಂದಾಗಿ ಆದಿತ್ಯನಾಥ್ ಅವರು ಜನಸಂದಣಿಯ ಒತ್ತಡ ಕಡಿಮೆಯಾದ ನಂತರವೇ ಅಖಾರಾಗಳು ತಮ್ಮ ಪವಿತ್ರ ಸ್ನಾನ ಮಾಡುವಂತೆ ಘೋಷಿಸಿದ್ದಾರೆ. ಜನಸಂದಣಿಯನ್ನು ತಡೆಗಟ್ಟಲು ಭಕ್ತರು ಸಂಗಮಕ್ಕೆ ಹೋಗುವ ಬದಲು ಹತ್ತಿರದ ಘಾಟ್‌ಗಳನ್ನು ಬಳಸಬೇಕೆಂದು ಸೂಚಿಸಿದ್ದಾರೆ.. ಸುಮಾರು 9-10 ಕೋಟಿ ಯಾತ್ರಿಕರು ಪ್ರಯಾಗರಾಜ್‌ನಲ್ಲಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.   

ಅಖಿಲ ಭಾರತೀಯ ಅಖಾರ ಪರಿಷತ್ತು ಭಾರೀ ಜನದಟ್ಟಣೆಯಿಂದಾಗಿ ಸಂತರ ಸಾಂಪ್ರದಾಯಿಕ ಸ್ನಾನದ ಆಚರಣೆಯನ್ನು ಮುಂದೂಡಿದೆ. ಕುಂಭ ಸಂಪ್ರದಾಯಗಳ ಪ್ರಕಾರ, ಅಖಾರಾಗಳು ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕಾಗಿ ಒಂದು ಸೆಟ್ ಅನುಕ್ರಮವನ್ನು ಅನುಸರಿಸುತ್ತವೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link