Venus Transit 2023: 3 ರಾಶಿಗಳ ಗೋಚರ ಜಾತಕದಲ್ಲಿ `ಮಹಾಧನ ಯೋಗ`, ಶುಕ್ರನ ಕೃಪೆಯಿಂದ ಸಿಗಲಿದೆ ಅಪಾರ ಹಣ, ಸ್ಥಾನಮಾನ!

Sun, 09 Apr 2023-1:22 pm,

ವೃಷಭ ರಾಶಿ: ವೃಷಭ ರಾಶಿಯ ಜಾತಕದವರ ಪಾಲಿಗೆ ಮಹಾಧನ ಯೋಗ ಒಂದು ವರದಾನ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ನವಮ ಭಾವದ ಅಧಿಪತಿ ದಶಮ ಭಾವದಲ್ಲಿ ಅಂದರೆ ಕೇಂದ್ರ ಸ್ಥಾನದಲ್ಲಿ ವಿರಾಜಮಾನ ನಾಗಿದ್ದಾನೆ. ಜೊತೆಗೆ ಏಪ್ರಿಲ್ 6 ರಂದು ವೈಭವದಾತ ಶುಕ್ರ ಕೂಡ ನಿಮ್ಮ ಜಾತಕದ ಲಗ್ನ ಭಾವವನ್ನು ಪ್ರವೇಶಿಸಿದ್ದಾನೆ. ಇನ್ನೊಂದೆಡೆ ನಿಮ್ಮ ಗೋಚರ ಜಾತಕದಲ್ಲಿ ಶಶ, ಮಾಲವ್ಯ ಹಾಗೂ ಲಕ್ಷ್ಮಿ ಯೋಗಗಳು ಕೂಡ ನಿರ್ಮಾಣಗೊಂಡಿವೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅಪಾರ ಧನಲಾಭವಾಗಲಿದೆ. ಈ ಸಮಯದಲ್ಲಿ ನಿಮ್ಮ ಬಾಳಸಂಗಾತಿಯ ಉನ್ನತಿಯಾಗಲಿದೆ, ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಹಣ ಹೂಡಿಕೆಗೆ ಈ ಸಮಯ ಆತುತ್ತಮವಾಗಿದೆ, ನೌಕರವರ್ಗಕ್ಕೆ ಸೇರಿದ ಜನರಿಗೆ ನೌಕರಿಯಲ್ಲಿ ಬಡ್ತಿ ಭಾಗ್ಯ ಒದಗಿಬರಲಿದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಲಾಭವಾಗಲಿದೆ    

ಮಕರ ರಾಶಿ: ಮಹಾಧನ ಯೋಗ ಮಕರ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಭಾಗ್ಯದ ಸ್ಥಾನಕ್ಕೆ ಬುಧ ಅಧಿಪತಿ ಹಾಗೂ ಆತ ನಿಮ್ಮ ಜಾತಕದ ಕೇಂದ್ರ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಏಪ್ರಿಲ್ 6 ರಂದು ಆತ ನಿಮ್ಮ ಜಾತಕದ ಕೇಂದ್ರಸ್ಥಾನಕ್ಕೆ ಬಂದಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೆಲಸ ಮತ್ತು ವ್ಯಾಪಾರದಲ್ಲಿ ಸಾಕಷ್ಟು ಉನ್ನತಿ ಸಿಗುವುದರ ಜೊತೆಗೆ ಧನಲಾಭವಾಗಲಿದೆ. ಇನ್ನೊಂದೆಡೆ ಶನಿ ಮಹಾರಾಜ ನಿಮ್ಮ ಜಾತಕದ ಧನ ಭಾವದಲ್ಲಿ ಸ್ಥಿತನಾಗಿದ್ದಾನೆ. ಹೀಗಾಗಿ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಇನ್ನೊಂದೆಡೆ ಒಂದು ವೇಳೆ ನೀವು ವ್ಯಾಪಾರಿಯಾಗಿದ್ದರೆ ನಿಮಗೆ ಭಾರಿ ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದೆ ಮತ್ತು ಇದರಿಂದ ಸಾಕಷ್ಟು ಧನಲಾಭ ಕೂಡ ಆಗಲಿದೆ. ಈ ಅವಧಿಯಲ್ಲಿ ನಿಮ್ಮ ಭಾಗ್ಯೋದಯದ ಎಲ್ಲಾ ಲಕ್ಷಣಗಳು ಗೋಚರಿಸಲಿದೆ ಮತ್ತು ಅವಿವಾಹಿತರಿಗೆ ಮದುವೆಯ ನಿಶ್ಚಿತಾರ್ಥ ನೆರವೇರುವ ಸಾಧ್ಯತೆ ಇದೆ.   

ಕನ್ಯಾ ರಾಶಿ: ನಿಮ್ಮ ಪಾಲಿಗೆ ಮಹಾಧನ ಯೋಗ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ನವಮ ಭಾವಕ್ಕೆ ಶುಕ್ರ ಅಧಿಪತಿಯಾಗಿದ್ದಾನೆ ಹಾಗೂ ಏಪ್ರಿಲ್ 6 ರಿಂದ ಆತ ನವಮ ಭಾವದಲ್ಲಿಯೇ ಸಂಚರಿಸುತ್ತಿದ್ದಾನೆ. ಇದರ ಜೊತೆಗೆ ಆತ ನಿಮ್ಮ ಜಾತಕದ ಧನ ಭಾವಕ್ಕೆ ಸ್ವಾಮಿ ಕೂಡ ಹೌದು, ಹೀಗಾಗಿ ಈ ಅವಧಿಯಲ್ಲಿ ನಿಮಗಾಗಿ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ. ಅದೃಷ್ಟದ ಸಂಪೂರ್ಣ ಬೆಂಬಲವಿರುವ ಕಾರಣ ಈಗಿನಿಂದಲೇ ನೀವು ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸುವುದು ಉತ್ತಮ. ಚಲನ ಚಿತ್ರೋದ್ಯಮ, ಸಂಗೀತ, ಕಲೆ, ಅಕ್ಕಿ, ಹಾಲು ಹೊಟೇಲ್, ಸಾರಾಯಿ ಮಾರಾಟದಂತಹ ಕೆಲಸದಲ್ಲಿ ನಿರತರಾದವರಿಗೆ ಈ ಯೋಗ ಅತ್ಯಂತ ಅದ್ಭುತ ಸಿದ್ಧವಾಗಲಿದೆ. ವಿದೇಶ ಯಾತ್ರೆಯ ಅವಕಾಶ ಒದಗಿ ಬರಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಲಿದ್ದಾರೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link