ಮಹಾನಟಿ ಕಿರೀಟ ಗೆದ್ದ ಪ್ರಿಯಾಂಕಾಗೂ ನಟ ದರ್ಶನ್ ಗೂ ಇದೆ ಹತ್ತಿರದ ಸಂಬಂಧ ! ನಟಿಯೇ ಬಿಚ್ಚಿಟ್ಟಿದ್ದ ಮಾಹಿತಿ

Mon, 15 Jul 2024-2:04 pm,

ಜೀ ಕನ್ನಡ ವಾಹಿನಿಯಲ್ಲಿ ಮೂರು ತಿಂಗಳುಗಳವರೆಗೆ ನಡೆದ ಮಹಾನಟಿ  ರಿಯಾಲಿಟಿ ಶೋ ಗೆ ತೆರೆ ಬಿದ್ದಿದೆ. ಮೈಸೂರಿನ ಪ್ರಿಯಾಂಕ ಈ ಕಾರ್ಯಕ್ರಮದ ವಿಜೇತೆಯಾಗಿ ಹೊರ ಹೊಮ್ಮಿದ್ದಾರೆ. 

ಈ ಮೂಲಕ ಪ್ರಿಯಾಂಕಾಗೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಬಹುಮಾನವಾಗಿ ಸಿಕ್ಕಿದೆ. ಇನ್ನು ರನ್ನರ್ ಅಪ ಆದ ಧನ್ಯಶ್ರೀಗೆ ೧೦ ಲಕ್ಷ ರೂಪಾಯಿಗಳ ಚೆಕ್ ನೀಡಲಾಗಿದೆ.   

ನಟನೆ ಮಾತ್ರವಲ್ಲ,ಡಾನ್ಸ್ ಆಗಿರಬಹುದು, ಫೋಟೋ ಶೂಟ್ ಆಗಿರಬಹುದು ಎಲ್ಲಾ ವಿಭಾಗದಲ್ಲಿಯೂ ಪ್ರಿಯಾಂಕಾ ಸೈ ಅನಿಸಿಕೊಂಡಿದ್ದರು.

ಅಂದ ಹಾಗೆ ಈ ಪ್ರಿಯಾಂಕಾ ತಂದೆ ಮತ್ತು ನಟ ದರ್ಶನ್ ಆಪ್ತ ಸ್ನೇಹಿತರಂತೆ. ಹಾಗಾಗಿಯೇ ಶೋ ಬರುವ ಬಗ್ಗೆ ಪ್ರಿಯಾಂಕಾ ದರ್ಶನ್ ಅವರಿಗೂ ತಿಳಿಸಿ, ಆಶೀರ್ವಾದ ಪಡೆದಿದ್ದರಂತೆ. ಈ ವಿಚಾರವನ್ನು ಪ್ರಿಯಾಂಕಾ ಅವರೇ ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿಕೊಂಡಿದ್ದರು.   

ಇನ್ನು ಮಗಳು ಮಹಾ ನಟಿ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಬಗ್ಗೆ ಅವರ ತಂದೆಗೂ ಅಪಾರ ಸಂತೋಷ ಅಭಿಮಾನ ಹೆಮ್ಮೆ ಎಲ್ಲವೂ ಇದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link