Kantara: “ಕೂದಲು ತುಂಬಾ ಹೋಗಿದೆ, ಕಾಡಲ್ಲಿ ಒಂದು ಸೊಪ್ಪು ಸಿಕ್ತದೆ” ಅಂತ ಹೇಳಿ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ಈ ಸುಂದರಿ ಯಾರು ಗೊತ್ತಾ?

Mon, 17 Oct 2022-11:57 pm,

ಸದ್ಯ ಕನ್ನಡ ಚಿತ್ರರಂಗ ಎಲ್ಲೆಡೆ ತನ್ನ ಹೆಸರನ್ನು ಪಸರಿಸಿದೆ. ಸ್ಯಾಂಡಲ್ ವುಡ್ ನಲ್ಲಿ ಬರುತ್ತಿರುವ ಸಿನಿಮಾಗಳು ಕೇವಲ ಕರ್ನಾಟಕವಲ್ಲ, ದೇಶವಲ್ಲ, ಜಗತ್ತೇ ಹಿಂತಿರುಗಿ ನೋಡುವಂತೆ ಮಾಡುತ್ತಿದೆ.

ಇನ್ನು ಇತ್ತೀಚೆಗೆ ತೆರೆಕಂಡ ಕಾಂತಾರ ಸಿನಿಮಾ, ಸಿನಿರಸಿಕರಿಗೆ ಮನರಂಜನೆ ಜೊತೆಗೆ ನಾಡು ನುಡಿ ಸಂಸ್ಕೃತಿಯ ಅನಾವರಣ ಮಾಡಿದೆ.  

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಕಾಂತಾರ ಸಿನಿಮಾವನ್ನು ರಿಷಬ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಊಹಿಸಲೂ ಅಸಾಧ್ಯ ಎಂಬಂತೆ ನಟನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕೇವಲ ರಿಷಬ್ ಶೆಟ್ಟಿ ಮಾತ್ರವಲ್ಲ, ಪ್ರತಿಯೊಬ್ಬರ ಅಭಿನಯವೂ ಅಚ್ಚುಕಟ್ಟಾಗಿದ್ದು, ಸಿನಿ ಪ್ರಿಯರಿಗೆ ಮನರಂಜನೆಯ ರಸದೌತಣ ಸಿಕ್ಕಂತಾಗಿದೆ.

ಇನ್ನು ಈ ಸಿನಿಮಾದಲ್ಲಿ ಕಂಡುಬರುವ ಸಣ್ಣ ಪಾತ್ರವೂ ಸಹ ಸಖತ್ ಹೈಲೆಟ್ ಆಗಿರುವುದು ವಿಶೇಷ. ಅದರಲ್ಲೂ ಪಕ್ಕಾ ಹಳ್ಳಿಯ ಸೊಗಡಿನಲ್ಲಿಮ ಹಲ್ಲು ಉಬ್ಬಾಗಿರುವಂತೆ ಕಾಣುವ ಶೀಲಕ್ಕ ನಮ್ಮೆಲ್ಲರನ್ನು ನಕ್ಕು ಸುಸ್ತಾಗುವಂತೆ ಮಾಡಿದ್ದು ಸುಳ್ಳಲ್ಲ.

“ಕೂದಲು ತುಂಬಾ ಹೋಗಿದೆ, ಕಾಡಲ್ಲಿ ಒಂದು ಸೊಪ್ಪು ಸಿಕ್ತದೆ” ಎಂದು ಹೇಳುತ್ತಾ ಈ ಪಾತ್ರದಲ್ಲಿ ನಟಿಸಿದ ನಟಿಯ ಹೆಸರು ಚಂದ್ರಕಲಾ ಭಟ್.

ZEENEWS TRENDING STORIES

By continuing to use the site, you agree to the use of cookies. You can find out more by Tapping this link