ಇದು ವಿಶ್ವದ ಅತ್ಯಂತ ಶಕ್ತಿಶಾಲಿ ತರಕಾರಿ..! ಮಳೆಗಾಲದಲ್ಲಿ 90 ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ

Fri, 16 Aug 2024-4:06 pm,

ಮುಂಗಾರು ಆರಂಭವಾಗುತ್ತಿದ್ದಂತೆಯೇ ತಾಜಾ ಹಸಿರು ತರಕಾರಿಗಳು ಮಾರುಕಟ್ಟೆಗೆ ಬರಲಾರಂಭಿಸುತ್ತವೆ. ಈ ಸೀಸನಲ್ಲಿ ಕಾಣಿಸಿಕೊಳ್ಳುವ ಕೆಲವೇ ಕೆಲವು ತರಕಾರಿಗಳಲ್ಲಿ ಮಾಡ ಹಾಗಲಕಾಯಿಯೂ ಒಂದು. ಈ ತರಕಾರಿ ಹಾಗಲಕಾಯಿ ಜಾತಿಗೆ ಸೇರಿದೆ. ಆದರೆ, ಇದು ಅಷ್ಟೋಂದು ಕಹಿಯಾಗಿಲ್ಲ. ಇದೊಂದು ಔಷಧೀಯ ತರಕಾರಿ. ಇದು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ.. ಹಾಗಾದರೆ ಈ ತರಕಾರಿ ನಿಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳನ್ನು ನೀಡುತ್ತವೆ ಎಂಬುದನ್ನು ತಿಳಿಯಿರಿ.   

ಆಯುರ್ವೇದದಲ್ಲಿ, ಈ ತರಕಾರಿಯನ್ನು ಅತ್ಯಂತ ಶಕ್ತಿಶಾಲಿ ತರಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ ಎಂದು ತಜ್ಞರು ಹೇಳುತ್ತಾರೆ. ಭಾರತೀಯ ತರಕಾರಿಗಳಲ್ಲಿ ಬಳಸುವ ಎಲ್ಲಾ ತರಕಾರಿಗಳಲ್ಲಿ, ಮಾಡ ಹಾಗಲಕಾಯಿ ಅತ್ಯಧಿಕ ಪ್ರೋಟೀನ್ ಅಂಶವನ್ನು ಹೊಂದಿದೆ. ಈ ತರಕಾರಿಗಳು ಮಾಂಸಕ್ಕಿಂತ 50 ಪ್ರತಿಶತ ಹೆಚ್ಚು ಪ್ರೋಟೀನ್ ಅನ್ನು ಹೊಂದಿರುತ್ತವೆ.  

ಮಾಡ ಹಾಗಲಕಾಯಿ ಕಂಡುಬರುವ ಪೋಷಕಾಂಶಗಳು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು, ಫೈಬರ್, ಅನೇಕ ಖನಿಜಗಳು ಮಾಡ ಹಾಗಲಕಾಯಿ ಕಂಡುಬರುತ್ತವೆ. ಜೊತೆಗೆ, ಈ ತರಕಾರಿಗಳು ಆಸ್ಕೋರ್ಬಿಕ್ ಆಮ್ಲ, ಕ್ಯಾರೋಟಿನ್, ಥಯಾಮಿನ್, ರೈಬೋಫ್ಲಾವಿನ್ ಮತ್ತು ನಿಯಾಸಿನ್‌ನಂತಹ ಸಣ್ಣ ಪ್ರಮಾಣದ ಅಗತ್ಯ ಜೀವಸತ್ವಗಳನ್ನು ಹೊಂದಿರುತ್ತವೆ.    

ಮಾಡ ಹಾಗಲಕಾಯಿ ತಿನ್ನುವುದರಿಂದ ಮೂಳೆಗಳು ಬಲಿಷ್ಠವಾಗುತ್ತವೆ. ಇದು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ನೋವನ್ನು ನಿವಾರಿಸುತ್ತದೆ. ಮೂಳೆ ಸಂಬಂಧಿ ಸಮಸ್ಯೆ ಇರುವವರು ಇದರನ್ನು ಸೇವಿಸಿದರೆ ಉತ್ತಮ.    

ಕಂಕೋಡದಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ, ಇದು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುವುದರ ಜೊತೆಗೆ ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. ಇದರ ಸೇವನೆಯು ಕಣ್ಣಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀವು ಸಹ ಕಣ್ಣುಗಳಲ್ಲಿ ದೌರ್ಬಲ್ಯವನ್ನು ಅನುಭವಿಸುತ್ತಿದ್ದರೆ, ಮಾಡ ಹಾಗಲಕಾಯಿ ತಿನ್ನಿ.  

ಮಳೆಗಾಲದಲ್ಲಿ ಯಕೃತ್ತಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಇಂತಹ ಸ್ಥಿತಿಯಲ್ಲಿ ಸಂದರ್ಭದಲ್ಲಿ ಇದನ್ನು ಸೇವಿಸುವುದರಿಂದ ಲಿವರ್ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಫ್ಲೇವನಾಯ್ಡ್ ಗಳು ಯಕೃತ್ತನ್ನು ನಿರ್ವಿಷಗೊಳಿಸಿ ಆರೋಗ್ಯವಾಗಿರಿಸುತ್ತದೆ. ಈ ತರಕಾರಿ ಸೇವಿಸುವುದರಿಂದ ಯಕೃತ್ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು.  

ಆಂಟಿಆಕ್ಸಿಡೆಂಟ್‌ಗಳಾದ ಬೀಟಾ ಕ್ಯಾರೋಟಿನ್, ಆಲ್ಫಾ ಕ್ಯಾರೋಟಿನ್, ಲುಟೀನ್ ಮತ್ತು ಜಿಯಾಕ್ಸಾಂಥಿನ್‌ಗಳು ಮಾಡ ಹಾಗಲಕಾಯಿಯಲ್ಲಿ ಕಂಡುಬರುತ್ತವೆ. ಇವು ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಮಾನ್ಸೂನ್‌ನಲ್ಲಿ ಈ ತರಕಾರಿಯನ್ನು ತಿನ್ನುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಅಲರ್ಜಿ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ತಿನ್ನಿ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link