ಈ ಮರದ ಒಂದು ಎಲೆಯನ್ನು ಬೆಳಗೆದ್ದು ಜಗಿಯಿರಿ.. ಇಡೀ ದಿನ ಬ್ಲಡ್‌ ಶುಗರ್‌ ಕಂಟ್ರೋಲ್‌ನಲ್ಲಿರುವುದು!

Mon, 10 Jun 2024-12:31 pm,

ಹೈಪರ್ಗ್ಲೈಸೀಮಿಯಾದಲ್ಲಿ, ರಕ್ತದಲ್ಲಿನ ಸಕ್ಕರೆ ಅಧಿಕವಾಗಿರುತ್ತದೆ. ಇದು ಮಧುಮೇಹಕ್ಕೆ ಕಾರಣವಾಗುತ್ತದೆ. ಈ ರೋಗಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ.   

ಅತಿಯಾದ ಬಾಯಾರಿಕೆ ಆಗಾಗ್ಗೆ ಮೂತ್ರವಿಸರ್ಜನೆ, ಆಯಾಸ, ಮಸುಕಾದ ದೃಷ್ಟಿ, ತೂಕ ಹೆಚ್ಚಳ ಹೀಗೆ ಅನೇಕ ರೀತಿಯ ಲಕ್ಷಣಗಳು ಮಧುಮೇಹಿಗಳಲ್ಲಿ ಕಂಡುಬರುತ್ತವೆ.   

ಮಧುಮೇಹಿಗಳು ಬೇವಿನ ಎಲೆಗಳನ್ನು ತಿನ್ನುವುದರಿಂದ ಬ್ಲಡ್‌ ಶುಗರ್‌ ಅನ್ನು ನಿಯಂತ್ರಿಸಬಹುದು. ಇದು ಆಯುರ್ವೇದದ ಅತ್ಯುತ್ತಮ ಔಷಧವೆಂದು ಪರಿಗಣಿಸಲಾಗಿದೆ.   

ಬೇವಿನ ಎಲೆಗಳಲ್ಲಿ ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ. ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಇನ್ಸುಲಿನ್ ಕೆಲಸ ಮಾಡುತ್ತದೆ. ಈ ಹಾರ್ಮೋನ್ ಮೇದೋಜ್ಜೀರಕ ಗ್ರಂಥಿಯ ಜೀವಕೋಶಗಳಿಂದ ಉತ್ಪತ್ತಿಯಾಗುತ್ತದೆ.   

ಬೇವಿನ ಎಲೆಗಳು ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳನ್ನು ಪ್ರಚೋದಿಸುತ್ತವೆ. ಪ್ರತಿದಿನ ಬೇವಿನ ಎಲೆಯನ್ನು ಸೇವಿದುವುದು ಪ್ರಯೋಜನಕಾರಿಯಾಗಿದೆ.  

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3-4 ತಾಜಾ ಬೇವಿನ ಎಲೆಗಳನ್ನು ತೆಗೆದುಕೊಂಡು ನೀರಿನಿಂದ ತೊಳೆಯಬೇಕು. ಇದನ್ನು ಹಲ್ಲುಗಳ ನಡುವೆ ಇಟ್ಟು ಚೆನ್ನಾಗಿ ಜಗಿದು ತಿನ್ನಬೇಕು.   

ಸೂಚನೆ : ಮಧುಮೇಹಿಗಳು ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಬೇವಿನ ಎಲೆ ತಿನ್ನುವ ಮೊದಲು ತಪ್ಪದೇ ವೈದ್ಯರೊಂದಿಗೆ ಮಾತನಾಡಿ. ಜೀ ಕನ್ನಡ ನ್ಯೂಸ್‌ ಯಾವ ರೀತಿಯಲ್ಲೂ ಇದಕ್ಕೆ ಹೊಣೆಯಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link