ಯಮುನಾ ಶ್ರೀನಿಧಿ ಹೊರಬೀಳ್ತಿದ್ದಂತೆ ಹೊಸ ಸ್ಪರ್ಧಿ ವೈಲ್ಡ್‌ ಕಾರ್ಡ್‌ ಎಂಟ್ರಿ!? ಅತಿ ಹೆಚ್ಚು ಟ್ರೋಲ್‌ ಆದ ಈ ʼವಿಶೇಷʼ ವ್ಯಕ್ತಿಗೆ ಅವಕಾಶ ನೀಡ್ತಾ ಬಿಗ್‌ಬಾಸ್‌?

Mon, 07 Oct 2024-7:51 pm,

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಸೀಸನ್‌ 11ರಲ್ಲಿ ಮೊದಲ ವಾರದ ನಾಮಿನೇಷನ್‌ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಮೂಲಕ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್‌ ಆಗಿ ಒಂಟಿ ಮನೆಯಿಂದ ಹೊರಬಂದಿದ್ದಾರೆ.

 

ಯಮುನಾ ಶ್ರೀನಿಧಿ ಅವರು ಹೊರಬೀಳ್ತಿದ್ದಂತೆ ಕೆಲವೊಂದಿಷ್ಟು ಜನರ ವಿರೋಧಗಳೂ ಕೇಳಿಬರುತ್ತಿವೆ. ಇಷ್ಟು ಬೇಗ ಎಲಿಮಿನೇಟ್‌ ಆಗುವ ಸ್ಪರ್ಧಿ ಯಮುನಾ ಅಲ್ಲ ಎಂಬುದು ಹಲವರ ವಾದ. ಆದರೆ ವೋಟ್‌ ಅನುಸಾರ ಅವರನ್ನು ಮನೆಯಿಂದ ಹೊರ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

 

ಇನ್ನೊಂದೆ ಯಮುನಾ ಶ್ರೀನಿಧಿ ಎಲಿಮಿನೇಟ್‌ ಆಗ್ತಿದ್ದಂತೆ ವೈಲ್ಡ್‌ ಕಾರ್ಡ್‌ ಎಂಟ್ರಿಯ ಬಗ್ಗೆ ಚರ್ಚೆಗಳು ಕೇಳಿಬರುತ್ತಿದೆ. ಓರ್ವ ಸೋಶಿಯಲ್‌ ಮೀಡಿಯಾ ಸ್ಟಾರ್‌ಗೆ ಅವಕಾಶ ನೀಡಿ ಎಂದು ನೆಟ್ಟಿಗರ ಒತ್ತಾಯ ಕೇಳಿಬಂದಿದೆ.

 

ಅಷ್ಟಕ್ಕೂ ಆಕೆ ಬೇರಾರು ಅಲ್ಲ, ಕಿಪ್ಪಿ ಕೀರ್ತಿ. ಸೋಶಿಯಲ್‌ ಮೀಡಿಯಾದಲ್ಲಿ ತನ್ನ ಮುಗ್ಧ ಮಾತುಗಳಿಂದಲೇ ಜನಪ್ರಿಯತೆ ಗಳಿಸಿರುವ ಕೀರ್ತಿ ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಬಿಗ್‌ಬಾಸ್‌ ಅವಕಾಶ ನೀಡಬೇಕೆಂದು ನೆಟ್ಟಿಗರ ಬೇಡಿಕೆ.

 

ಯಾಕೆ ಜನರೇ? ಬನ್ನಿ ಜನರೇ? ಎನ್ನುತ್ತಾ ವಿಡಿಯೋ ಅಪ್ಲೋಡ್‌ ಮಾಡುತ್ತಿರುವ ಕೀರ್ತಿ ಕೊಡಗಿನ ಕುವರಿ. ಅತಿ ಹೆಚ್ಚು ಟ್ರೋಲ್‌ ಆಗುತ್ತಿರುವ ಈಕೆ ಇತ್ತೀಚೆಗೆ ತಮ್ಮ ಮನೆಯ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದರು.

 

ತಾನಿರುವ ಪುಟ್ಟ ಮನೆಯ ವಿಡಿಯೋವನ್ನು ಶೇರ್‌ ಮಾಡಿದ್ದ ಕೀರ್ತಿಗೆ ನೆಟ್ಟಿಗರು ಧೈರ್ಯದ ಮಾತುಗಳನ್ನಾಡಿದ್ದರು. ಅಷ್ಟೇ ಅಲ್ಲದೆ, ಈಕೆಗೆ ಒಂದು ಅವಕಾಶ ನೀಡಿದರೆ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ ಎಂಬುದು ನೆಟ್ಟಿಗರ ಮಾತು.

 

ಸುಮಾರು 1ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿರುವ ಕೀರ್ತಿ ಅವರು, ಬಾಹ್ಯ ಸೌಂದರ್ಯಕ್ಕಿಂತ ಅಂತರಂಗ ಸೌಂದರ್ಯ ಮುಖ್ಯ ಎಂಬುದನ್ನು ಅನೇಕ ಬಾರಿ ತಮ್ಮ ವಿಡಿಯೋಗಳಲ್ಲಿ ಹೇಳಿದ್ದುಂಟು. ಅಷ್ಟೇ ಅಲ್ಲದೆ, ಅನೇಕರು ಇವರನ್ನು ಟ್ರೋಲ್‌ ಮಾಡಿದರೂ ಸಹ, ತಲೆಕೆಡಿಸಿಕೊಳ್ಳದ ಕೀರ್ತಿ, ತಮ್ಮಷ್ಟಕ್ಕೆ ವಿಡಿಯೋ ಮಾಡಿಕೊಂಡು ಅವರನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

 

ಸೂಚನೆ: ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾದ ವರದಿಗಳ ಅನುಸಾರ ಈ ಸುದ್ದಿಯನ್ನು ತೆಗೆದುಕೊಳ್ಳಲಾಗಿದೆ. ಈ ವರದಿಯನ್ನು ಜೀ ಕನ್ನಡ ನ್ಯೂಸ್‌ ಅನುಮೋದಿಸುವುದಿಲ್ಲ. ಅಂತೆಯೇ ಖಚಿತಪಡಿಸುವುದಿಲ್ಲ.   

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link