ಆಧಾರ್ ಮತ್ತು ಪ್ಯಾನ್ ಹೊರತಾಗಿಯೂ ಸರ್ಕಾರದಿಂದ ಮಾಡಿಸಲಾಗುತ್ತದೆ ಈ ಕಾರ್ಡ್ , ಸಿಗಲಿದೆ ಸಾಕಷ್ಟು ಪ್ರಯೋಜನ

Tue, 28 Sep 2021-9:16 pm,

ಆಧಾರ್ ಕಾರ್ಡ್ ಇಂದು ನಮ್ಮ ಜೀವನದ ಪ್ರಮುಖ ದಾಖಲೆಯಾಗಿದೆ.  ಬ್ಯಾಂಕ್ ಖಾತೆಯಿಂದ ಸಿಮ್ ಕಾರ್ಡ್ ವರೆಗೆ ಇದನ್ನು ಲಿಂಕ್ ಮಾಡಲಾಗಿದೆ. ಈ ಕಾರ್ಡ್ ಬಗ್ಗೆ ಇರುವ ಎಲ್ಲಾ ಅಪ್ಡೇಟ್ ಗಳನ್ನೂ ತಿಳಿದುಕೊಳ್ಳುವುದು ಬಹಳ ಮುಖ್ಯ. . ಈ ಕಾರ್ಡ್ ಅನ್ನು ಒಮ್ಮೆ ಮಾಡಿಸಲಾಗುತ್ತದೆ. ನಂತರ ಏನಾದರು ಬದಲಾವಣೆಗಳಿದ್ದರೆ ಮಾಡಿಸಲು ಅವಕಾಶವಿರುತ್ತದೆ. 

ಪ್ಯಾನ್ ಕಾರ್ಡ್ ದೇಶದ ಪ್ರತಿಯೊಬ್ಬ ಪ್ರಜೆ ಹೊಂದಿರಬೇಕಾದ ಮಹತ್ವದ ದಾಖಲೆಯಾಗಿದೆ. ಇದರಲ್ಲಿ  10-ಅಂಕಿಯ ಆಲ್ಫಾನ್ಯೂಮರಿಕ್ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುತ್ತದೆ. ಇದು ಬ್ಯಾಂಕಿಂಗ್ ಸೇವೆಗಳಿಂದ ಶಾಪಿಂಗ್ ವರೆಗೆ ಅಗತ್ಯವಿದೆ. ಯಾವುದೇ ಹಣಕಾಸಿನ ವಹಿವಾಟಿನಲ್ಲಿ ಉಪಯುಕ್ತವಾದ ದಾಖಲೆಯಾಗಿದೆ.  

ಪಡಿತರ ಚೀಟಿ  ಒಂದು ಕುಟುಂಬಕ್ಕೆ ಸೇರಿದ್ದಾಗಿದೆ. ಪಡಿತರ ಚೀಟಿಯನ್ನು ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ತಯಾರಿಸಲಾಗುತ್ತದೆ ಮತ್ತು ಈ ಮೂಲಕ ಸರ್ಕಾರವು ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದಂತೆ ಒದಗಿಸಿರುವ ಸೌಲಭ್ಯಗಳ ಲಾಭವನ್ನು ಪಡೆಯುತ್ತದೆ.  

ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಯಾಂಕುಗಳು ನೀಡುತ್ತವೆ. ಕೃಷಿ ಉದ್ದೇಶಗಳಾದ ರಸಗೊಬ್ಬರಗಳು, ಬೀಜಗಳು, ಕೀಟನಾಶಕಗಳು ಇತ್ಯಾದಿಗಳನ್ನು ಖರೀದಿಸಲು ರೈತರಿಗೆ ಸಾಲ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ, ಇದುವರೆಗೆ 2 ಕೋಟಿಗೂ ಹೆಚ್ಚು ರೈತರಿಗೆ ಕ್ರೆಡಿಟ್ ಕಾರ್ಡ್ ನೀಡಲಾಗಿದೆ.   

ಇತ್ತೀಚೆಗೆ, ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕೋಟಿಗಟ್ಟಲೆ ಕಾರ್ಮಿಕರ ಡೇಟಾಬೇಸ್ ತಯಾರಿಸಲು ಮತ್ತು ನಿರ್ವಹಿಸಲು ಇ-ಶ್ರಮ ಪೋರ್ಟಲ್ ಅನ್ನು ಆರಂಭಿಸಿತು. ಇದರ ಉದ್ದೇಶ ದೇಶದ ಕೋಟ್ಯಂತರ ಕಾರ್ಮಿಕರ ಏಳಿಗೆಯಾಗಿದೆ. ಸರ್ಕಾರವು ಇ-ಶ್ರಮ ಪೋರ್ಟಲ್ ಅನ್ನು  ಆರಂಭಿಸಿದೆ. ಅಲ್ಲಿಂದ ಕಾರ್ಮಿಕರು ತಮ್ಮ ಕಾರ್ಡ್‌ಗಳನ್ನು ಪಡೆದುಕೊಳ್ಳಬಹುದು. ಇದರ ನಂತರ, ಈ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಸಹಾಯವಾಗುತ್ತದೆ ಮತ್ತು ಅವರು ಅನೇಕ ಯೋಜನೆಗಳ ಲಾಭವನ್ನು ಪಡೆಯುವುದು ಸಾಧ್ಯವಾಗುತ್ತದೆ. ಇದರ ಹೊರತಾಗಿ, ಸರ್ಕಾರವು ಆರೋಗ್ಯ ಕಾರ್ಡ್, ಆಯುಷ್ಮಾನ್ ಯೋಜನೆ ವಿಮಾ ಕಾರ್ಡ್, ಇಎಸ್‌ಐ ಕಾರ್ಡ್, ಮಾಲೀಕತ್ವ ಕಾರ್ಡ್ ಮುಂತಾದ ಕಾರ್ಡ್‌ಗಳನ್ನು ಸಹ ಮಾಡುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link