ರಾತ್ರಿ ಮಲಗುವ ಮುನ್ನ ಹೊಕ್ಕುಳಿಗೆ ಈ ಎಣ್ಣೆ ಹಚ್ಚಿ: ಕೇವಲ 5 ದಿನಗಳಲ್ಲಿ... ಎಷ್ಟೇ ಬಿಳುಪಾಗಾಗಿದ್ದರೂ ಸಹ ಮರಳಿ ಬಾರದಂತೆ ಕಡುಕಪ್ಪಾಗುತ್ತೆ ಕೂದಲು

Thu, 19 Sep 2024-8:56 pm,

ಹೊಕ್ಕುಳಕ್ಕೆ ಎಣ್ಣೆಯನ್ನು ಹಚ್ಚುವುದು ತುಂಬಾ ಪ್ರಯೋಜನಕಾರಿ. ಇದು ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಪದ್ಧತಿ. ರಾತ್ರಿ ಮಲಗುವ ಮೊದಲು ಹೊಕ್ಕುಳಿಗೆ ಎಣ್ಣೆ ಮಸಾಜ್‌ ಮಾಡಿದರೆ ಅನೇಕ ಪ್ರಯೋಜನಗಳು ಸಿಗುತ್ತವೆ.

 

ಹೊಕ್ಕುಳಕ್ಕೆ ಎಣ್ಣೆ ಅನ್ವಯಿಸುವುದರಿಂದ ಮಲಬದ್ಧತೆಯಿಂದ ಪರಿಹಾರ, ಚರ್ಮದ ಹೊಳಪು ಹೆಚ್ಚಳ ಸೇರಿದಂತೆ ಹೊಟ್ಟೆನೋವಿನಿಂದಲೂ ಪರಿಹಾರ ಸಿಗುತ್ತದೆ. ಆದರೆ ಹೊಕ್ಕುಳಿಗೆ ಯಾವ ಎಣ್ಣೆ ಹಾಕಿದರೆ ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ನಾವಿಂದು ಉತ್ತರ ನೀಡಲಿದ್ದೇವೆ.

 

ಹೊಕ್ಕುಳಿಗೆ ಆಲಿವ್ ಎಣ್ಣೆಯನ್ನು ಹಾಕುವುದರಿಂದ ಅನೇಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಆಯುರ್ವೇದ ವೈದ್ಯೆ ಸುಗೀತಾ ಮುತ್ರೇಜಾ ಅವರು ಹೊಕ್ಕುಳಕ್ಕೆ ಎಣ್ಣೆ ಹಾಕುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದ್ದಾರೆ.

 

ಹೊಟ್ಟೆ ನೋವಿನಿಂದ ಪರಿಹಾರ: ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ. ಹೊಕ್ಕುಳವು ದೇಹದ ಕೇಂದ್ರ ಬಿಂದುವಾಗಿದ್ದು, ಈ ಭಾಗಕ್ಕೆ ಆಲಿವ್‌ ಎಣ್ಣೆ ಹಚ್ಚುವುದರಿಂದ ಹೊಟ್ಟೆನೋವು ಗುಣವಾಗುತ್ತದೆ. ಇದರೊಂದಿಗೆ ಚಳಿಗಾಲದಲ್ಲಿ ಒಣ ಚರ್ಮ ಮತ್ತು ತುಟಿಗಳನ್ನು ಮೃದುವಾಗಿಸುತ್ತದೆ.

 

ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ: ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಆದ್ದರಿಂದ ಇದು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿ ರಾತ್ರಿ ಹೊಕ್ಕುಳಕ್ಕೆ ಎಣ್ಣೆಯನ್ನು ಹಚ್ಚುವುದರಿಂದ ಚರ್ಮವು ಉತ್ತಮಗೊಳ್ಳುತ್ತದೆ. ಇದರೊಂದಿಗೆ, ಇದು ಕೂದಲು ಮತ್ತು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.

 

ಕೀಲು ನೋವಿನಿಂದ ಪರಿಹಾರ: ಮೂಳೆಗಳು ಮತ್ತು ಕೀಲುಗಳಲ್ಲಿನ ನೋವಿನಿಂದ ತೊಂದರೆಗೊಳಗಾಗಿದ್ದರೆ, ರಾತ್ರಿ ವೇಳೆ ಹೊಕ್ಕುಳಕ್ಕೆ ಆಲಿವ್‌ ಎಣ್ಣೆ ಹಚ್ಚಿ ಮಸಾಜ್‌ ಮಾಡಬಹುದು. ಹೀಗೆ ಮಾಡುವುದರಿಂದ ಕೀಲು ನೋವಿನಿಂದ ಪರಿಹಾರ ಸಿಗುತ್ತದೆ.

 

ಮಲಬದ್ಧತೆಯಿಂದ ಉಪಶಮನ: ಇಂದಿನ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಹೆಚ್ಚಿನ ಜನರು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಹೀಗಿರುವಾಗ ರಾತ್ರಿಯಲ್ಲಿ ಹೊಕ್ಕುಳಕ್ಕೆ ಎಣ್ಣೆ ಮಸಾಜ್‌ ಮಾಡಿದರೆ ಈ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.

 

ಇವುಗಳ ಹೊರತಾಗಿ, ಆಲಿವ್ ಎಣ್ಣೆಯನ್ನು ಹೊಕ್ಕುಳಕ್ಕೆ ಹಚ್ಚುವುದರಿಂದ ಪಿರಿಯಡ್ಸ್ ನೋವು ಮತ್ತು ಪೀರಿಯೆಡ್ ಸೆಳೆತದಿಂದ ಪರಿಹಾರ ದೊರೆಯುತ್ತದೆ. ಅಷ್ಟೇ ಅಲ್ಲದೆ, ಬಿಳುಪಾಗಿದ್ದ ಕೂದಲು ಮರಳಿ ಕಪ್ಪಗಾಗಿಸಲು ಸಹ ಈ ಸಲಹೆ ಸಹಕಾರಿಯಾಗಿದೆ.

 

ಆಲಿವ್ ಎಣ್ಣೆಯನ್ನು ನಿಯಮಿತವಾಗಿ ಹೊಕ್ಕಳಿಗೆ ಹಚ್ಚುವುದರಿಂದ ಹೊಕ್ಕುಳಲ್ಲಿ ಸಂಗ್ರಹವಾಗಿರುವ ಕೊಳೆ ನಿವಾರಣೆಯಾಗುತ್ತದೆ. ಇದು ಕೊಳೆಯಿಂದ ಉಂಟಾದ ಸೋಂಕುಗಳನ್ನು ಸಹ ಗುಣಪಡಿಸುತ್ತದೆ.

 

 ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲಿ ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link