ʼಲಡ್ಡುʼ ವಿಚಾರದಲ್ಲಿ ತಿಮ್ಮಪ್ಪನ ಭಕ್ತರಿಗೆ ಶಾಕ್‌ ಕೊಟ್ಟ ಟಿಟಿಡಿ..! ತಿರುಪತಿಯಲ್ಲಿ ಇನ್ಮುಂದೆ..

Thu, 29 Aug 2024-5:57 pm,

ಶ್ರೀಗಳ ದರ್ಶನ ಪಡೆದ ಭಕ್ತರು ದರ್ಶನ ಚೀಟಿ ತೋರಿಸಿದರೆ ಲಡ್ಡು ನೀಡಲಾಗುವುದು. ಹೆಚ್ಚುವರಿ ಲಡ್ಡು ಬೇಕಾದರೆ ಆಧಾರ್ ಕಾರ್ಡ್ ತೋರಿಸಬೇಕು. ಟಿಟಿಡಿಯ ಹೊಸ ನಿಯಮಗಳ ಬಗ್ಗೆ ಭಕ್ತರಿಂದ ಸಾಕಷ್ಟು ಅಸಮಾಧಾನವಿದೆ.  

ಇದುವರೆಗೆ ಟಿಟಿಡಿ ಕೈಗೊಂಡಿರುವ ನಿರ್ಧಾರಗಳ ಬಗ್ಗೆ ಯಾವುದೇ ಆಕ್ಷೇಪಣೆ ಬಂದಿಲ್ಲ.. ಭಕ್ತರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇತ್ತೀಚೆಗೆ ಲಡ್ಡು ವಿಚಾರದಲ್ಲಿ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.  

ಪ್ರತಿ ಭಕ್ತನಿಗೆ ಒಂದು ಲಡ್ಡು ಮಾತ್ರ ನೀಡುವಂತೆ ನಿಯಮದಲ್ಲಿ ಬದಲಾವಣೆ ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದರ್ಶನ ಟೋಕನ್‌ಗೆ ಒಂದು ಲಡ್ಡು, ಆಧಾರ್ ಕಾರ್ಡ್ ತೋರಿಸಿದರೆ ಇನ್ನೊಂದು ಲಡ್ಡೂ ನೀಡುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.    

ಇಂದಿನಿಂದ (ಗುರುವಾರ) ಹೊಸ ನಿಯಮಾವಳಿ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಇದರಿಂದ ಭಕ್ತರು ಟಿಟಿಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.     

ಸ್ವಾಮಿಯ ಪ್ರಸಾದ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು ಆದರೆ ಈ ರೀತಿ ನಿರ್ಬಂಧ ಹೇರುವುದು ಸರಿಯಲ್ಲ. ಕೂಡಲೇ ಟಿಟಿಡಿ ನಿಯಮಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ.     

ಲಡ್ಡುವಿನ ಗುಣಮಟ್ಟ ಹೆಚ್ಚಿಸಲು ಟಿಟಿಡಿ ತುಪ್ಪದ ಟೆಂಡರ್ ಅನ್ನು ಬದಲಾಯಿಸಿದೆ ಎಂದು ತಿಳಿದಿದೆ. ಉತ್ಪಾದನೆ ಕಡಿಮೆಯಾಗುತ್ತಿರುವುದರಿಂದ ಭಕ್ತರಿಗೆ ಲಡ್ಡು ಕಡಿಮೆಯಾಗಿದೆಯಂತೆ. ಭಕ್ತರ ತೀವ್ರ ವಿರೋಧಕ್ಕೆ ಟಿಟಿಡಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link